ಆಸರೆ ಮನೆ ರೇಪ್ ಕೇಸ್: ಬೃಜೇಶ್ ಠಾಕೂರ್ಗೆ ಜೈಲಲ್ಲಿ ಚಿತ್ರಹಿಂಸೆ
Team Udayavani, Dec 6, 2018, 7:01 PM IST
ಹೊಸದಿಲ್ಲಿ : ಪಟಿಯಾಲಾ ಜೈಲು ಅಧಿಕಾರಿಗಳು ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಗುರುವಾರ ಮುಜಫರಪುರ ಆಸರೆ ಮನೆ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಬೃಜೇಶ್ ಠಾಕೂರ್ ನನ್ನು ತತ್ಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಆದೇಶಿಸಿತು.
‘ನನ್ನಿಂದ ಹಣ ಸುಲಿಗೆ ಮಾಡುವುದಕ್ಕಾಗಿ ಪಟಿಯಾಲಾ ಜೈಲು ಸುಪರಿಂಟೆಂಡೆಂಟ್ ನನಗೆ ಚಿತ್ರಹಿಂಸೆ ಕೊಟ್ಟಿದ್ದಾರೆ’ ಎಂದು ಠಾಕೂರ್ ಹೇಳಿಕೊಂಡ ಕಾರಣ ಸುಪ್ರೀಂ ಕೋರ್ಟ್ ಆತನ ತುರ್ತು ವೈದ್ಯಕೀಯ ಪರೀಕ್ಷೆಯನ್ನು ಆದೇಶಿಸಿತು.
‘ಸೇವಾ ಸಂಕಲ್ಪ ಏವಂ ವಿಕಾಸ್ ಸಮಿತಿ’ ಎಂಬ ಎನ್ಜಿಓ ಸಂಸ್ಥೆಯ ಮಾಲಕನಾಗಿರುವ ಠಾಕೂರ್, ಮುಜಫರಪುರದಲ್ಲಿ ಆಸರೆ ಮನೆ ನಡೆಸುತ್ತಿದ್ದು ಅಲ್ಲಿ 34 ಅನಾಥ ಹುಡುಗಿಯರಿಗೆ ಮಾದಕ ದ್ರವ್ಯ ತಿನ್ನಿಸಿ, ಚಿತ್ರಹಿಂಸೆ ನೀಡಿ, ಅನೇಕ ತಿಂಗಳ ಕಾಲ ಅವರ ಮೇಲೆ ಅತ್ಯಾಚಾರ ನಡೆಸಲಾಗಿರುವುದು ಈ ಹಿಂದೆ ವರದಿಯಾಗಿತ್ತು.
ಸಿಬಿಐ ಕೋರಿಕೆ ಪ್ರಕಾರ ಬೃಜೇಶ್ ಠಾಕೂರ್ನನ್ನು ಕಳೆದ ಅ.11ರಂದು ಖುದಿರಾಮ್ ಬೋಸ್ ಕೇಂದ್ರ ಬಂಧೀಖಾನೆಯಿಂದ ಭಾಗಲ್ಪುರ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ