ಏಕಸ್ವಾಮ್ಯ ನೀತಿ ಕೈ ಬಿಡಿ
Team Udayavani, Dec 24, 2018, 6:15 AM IST
ಹೊಸದಿಲ್ಲಿ: ವಿಮಾನ ಸಂಚಾರದ ವೇಳೆ ಪ್ರಯಾಣಿಕರು ಮೊಬೈಲ್ ಬಳಸುವ ಅನುಕೂಲವನ್ನು ಭಾರತ ಕಲ್ಪಿಸಿದೆಯಾದರೂ, ತಾಂತ್ರಿಕ ಕಾರಣಗಳಿಂದಾಗಿ ಈ ಸೌಲಭ್ಯ ಹೆಚ್ಚಿನ ಶುಲ್ಕಕ್ಕೆ ಕಾರಣವಾಗುತ್ತದೆ. ಇದರಿಂದ ಪರೋಕ್ಷವಾಗಿ ಈ ಸೌಲಭ್ಯ ಊರ್ಜಿತವಾಗದೇ ಮೂಲೆಗುಂಪಾಗುವ ಸಾಧ್ಯತೆಗಳಿವೆ ಎಂದು ಖ್ಯಾತ ಬ್ರಾಡ್ಬ್ಯಾಂಡ್ ತಂತ್ರಜ್ಞಾನ ಸಂಸ್ಥೆಯಾದ “ಹ್ಯೂಗ್ಸ್ ಇಂಡಿಯಾ’ದ ಅಧಿಕಾರಿ ಕೆ. ಕೃಷ್ಣ ಎಚ್ಚರಿಸಿದ್ದಾರೆ.
ಅವರು ಹೇಳುವಂತೆ, ವಿಮಾನಗಳಲ್ಲಿ ಮೊಬೈಲ್ ಬಳಸಲು ಹೈ ಬ್ಯಾಂಡ್ವಿಡ್ ಇರುವ ಮೊಬೈಲ್ ತರಂಗಗಳ ಅವಶ್ಯಕತೆಯಿದೆ. ಇದನ್ನು ಉಪಗ್ರಹಗಳ ಮೂಲಕ ನೀಡಲಾಗುತ್ತದೆ. ಈ ಸೇವೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮಾತ್ರವೇ ನೀಡಬೇಕೆಂದು ಭಾರತ ಸರಕಾರ ಸ್ಪಷ್ಟವಾಗಿ ಹೇಳಿದೆ. ಹೀಗೆ ಒಂದೇ ಸಂಸ್ಥೆಯಿಂದ ತರಂಗಗಳನ್ನು ಪಡೆಯುವ ಸೌಲಭ್ಯ ವಾಸ್ತವ ವಾಗಿ ದುಬಾರಿಯದ್ದಾಗಲಿದೆ. ಇದರ ಪರಿಣಾಮ, ವಿಮಾನದಲ್ಲಿ ಮೊಬೈಲ್ ಬಳಸುವ ಪ್ರಯಾಣಿಕರು ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ. ಆಗ, ಅನೇಕರು ಈ ಸೌಲಭ್ಯದಿಂದ ಹಿಂದೆ ಸರಿಯಬಹುದು. ಹಾಗಾದರೆ, ಈ ಸೌಲಭ್ಯದ ಇಡೀ ಉದ್ದೇಶವೇ ಮೂಲೆ ಗುಂಪಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಸಮಸ್ಯೆಗೆ ಪರಿಹಾರವನ್ನೂ ಸೂಚಿಸಿರುವ ಅವರು, “”ತನ್ನ ಉದ್ದೇಶ ಸಾರ್ಥಕವಾಗಬೇಕಾದರೆ ಭಾರತ ಮೊದಲು ಏಕಸ್ವಾಮ್ಯ ನೀತಿಯನ್ನು ಕೈಬಿಡಬೇಕು. ವಿವಿಧ ದೇಶಗಳ ಬೇರೆ ಉಪಗ್ರಹಗಳ ತರಂಗಗಳನ್ನೂ ಬಳಸಿಕೊಳ್ಳುವಂಥ “ಓಪನ್ ಸ್ಕೈ’ ವ್ಯವಸ್ಥೆಗೆ ತನ್ನನ್ನು ತಾನು ಒಗ್ಗಿಸಿಕೊಳ್ಳಬೇಕು” ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್