ಮ.ಪ್ರ: ಹಿರಿಯ ಬಿಜೆಪಿ ನಾಯಕ ಡಾ. ಕುಸುಮಾರಿಯಾ ಕಾಂಗ್ರೆಸ್ ಪಕ್ಷಕ್ಕೆ
Team Udayavani, Feb 8, 2019, 11:12 AM IST
ಭೋಪಾಲ್ : ಹಿರಿಯ ಬಿಜೆಪಿ ನಾಯಕ ಮತ್ತು ಮಧ್ಯ ಪ್ರದೇಶದ ಮಾಚಿ ಸಚಿವ ಡಾ. ರಾಮಕೃಷ್ಣ ಕುಸುಮಾರಿಯಾ ಅವರಿಂದು ಶುಕ್ರವಾರ, ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯದ ಹೊಸ ಸರಕಾರ ಇಂದು ತನ್ನ ಸಾಲ ಮನ್ನಾ ಯೋಜನೆಯ ಫಲಾನುಭವಿ ರೈತರಿಗಾಗಿ ಏರ್ಪಡಿಸಿದ ಆಭಾರ್ ರಾಲಿಯಲ್ಲಿ ಡಾ. ಕುಸುಮಾರಿಯಾ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು.
ರಾಜ್ಯ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಅವರು ಕುಸುಮಾರಿಯಾ ಅವರಿಗೆ ಸೂತ್ ಕೀ ಮಾಲಾ ನೀಡಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಂಡರು.
ಕುಸುಮಾರಿಯಾ ಅವರು 2008ರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಲ್ಪಟ್ಟಿದ್ದ ಇವರು ಪಕ್ಷೇತರರಾಗಿ ದಾಮೋಹ್ ಕ್ಷೇತ್ರದಿಂದ ಸ್ಪಧಿಸಿ ಕೇವಲ 1,133 ಮತ ಪಡೆದು ಠೇವಣಿ ಕಳೆದುಕೊಂಡಿದ್ದರು.