ಚೀನ ಪರಮಾಪ್ತ ದೇಶ ಸ್ಥಾನಮಾನ ಹಿಂಪಡೆಯಲು ಜಾಗರಣ್ ಮಂಚ್ ಆಗ್ರಹ
Team Udayavani, Mar 15, 2019, 5:59 AM IST
ಹೊಸದಿಲ್ಲಿ : ಪಾಕಿಸ್ಥಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಮಸೂದ್ ಅಜರ್ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಠರಾವನ್ನು ತಡೆದಿರುವ ಚೀನಕ್ಕೆ ಭಾರತ ನೀಡಿದ್ದ ಪರಮಾಪ್ತ ದೇಶ ಸ್ಥಾನಮಾನವನ್ನು ಹಿಂಪಡೆಯಬೇಕು ಎಂದು ಆರ್ಎಸ್ಎಸ್ ನ ಆರ್ಥಿಕ ವಿಭಾಗವಾಗಿರುವ ಸ್ವದೇಶಿ ಜಾಗರಣ್ ಮಂಚ್ (ಎಸ್ಜೆಎಂ), ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.
”ಚೀನಕ್ಕೆ ಭಾರತ ನೀಡಿರುವ ಪರಮಾಪ್ತ ದೇಶದ ಸ್ಥಾನಮಾನವನ್ನು ಹಿಂಪಡೆಯಬೇಕು; ಜತೆಗೆ ಚೀನದ ಉತ್ಪನ್ನಗಳ ಆಮದಿನ ಮೇಲೆ ಇನ್ನಷ್ಟು ಹೆಚ್ಚಿನ ನಿರ್ಬಂಧಗಳನ್ನು ಹೇರಬೇಕು; ಚೀನದಿಂದ ಭಾರತ ಅಮದಿಸಿಕೊಳ್ಳುವ ಅದರ ಎಲ್ಲ ಉತ್ಪನ್ನಗಳ ಮೇಲಿನ ಸುಂಕವನ್ನು ಏರಿಸಬೇಕು” ಎಂದು ಎಸ್ಜೆಎಂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದೆ.
ಪಾಕಿಸ್ಥಾನಕ್ಕೆ ನೀಡಲಾಗಿದ್ದ ಪರಮಾಪ್ತ ದೇಶ ಸ್ಥಾನಮಾನವನ್ನು ಭಾರತ ಈಚೆಗೆ ಹಿಂಪಡೆದ ರೀತಿಯಲ್ಲೇ ಚೀನದ ವಿರುದ್ದವೂ ಅದೇ ಅಸ್ತ್ರವನ್ನು ಪಯೋಗಿಸಬೇಕು ಎಂದು ಎಸ್ಜೆಎಂ ಹೇಳಿದೆ.
ಚೀನದ ಉತ್ಪನ್ನಗಳ ಮೇಲಿನ ಆಮದು ಸುಂಕವು ರಫ್ತು ಸುಂಕಕ್ಕಿಂತ ತುಂಬ ಕಡಿಮೆ ಇದೆ. ಆದುದರಿಂದ ಈ ಸುಂಕವನ್ನು ಗಮನಾರ್ಹವಾಗಿ ಏರಿಸಬೇಕಾಗಿದೆ ಮತ್ತು ಆ ಮೂಲಕ ಚೀನ ಆಮದನ್ನು ನಿರುತ್ತೇಜಿಸಬೇಕಾಗಿದೆ; ಎಲ್ಲಕ್ಕಿಂತ ಮುಖ್ಯ ಚೀನ ಉತ್ಪನ್ನಗಳ ವಿರುದ್ದ ಜನಜಾಗೃತಿ ಆಗಬೇಕಾಗಿದೆ ಎಂದು ಎಸ್ಜೆಎಂ ನ ಅಖೀಲ ಭಾರತ ಸಹ ಸಂಚಾಕ ಅಶ್ವಿನಿ ಮಹಾಜನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ