ಪ್ರಶಾಂತ್ ಕಿಶೋರ್ ಬಿಹಾರಿ ಡಕಾಯಿತ ಎಂದ ಚಂದ್ರಬಾಬು ನಾಯ್ಡು
Team Udayavani, Mar 19, 2019, 10:55 AM IST
ಹೊಸದಿಲ್ಲಿ : ಆಂಧ್ರ ಪ್ರದೇಶದ ಲಕ್ಷಾಂತರ ಮತಗಳನ್ನು ಲೂಟಿ ಮಾಡಿರುವ ಪ್ರಶಾಂತ್ ಕಿಶೋರ್ ಓರ್ವ ಬಿಹಾರಿ ಡಕಾಯಿತ ಎಂದು ಕರೆದಿರುವ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರಿಗೆ ಕಿಶೋರ್ ಅವರು ತೀಕ್ಷ್ಣ ಮರು ಉತ್ತರ ನೀಡಿದ್ದಾರೆ.
“ಖಚಿತ ಸೋಲಿಗೆ ಗುರಿಯಾಗುವ ಭಯದಲ್ಲಿ ಒಬ್ಬ ಪಳಗಿದ ರಾಜಕಾರಣಿ ನನ್ನ ವಿರುದ್ಧ ನಿರಾಧಾರ ಆರೋಪ ಮಾಡುತ್ತಿರುವುದರಲ್ಲಿ ನನಗೇನೂ ಆಶ್ಚರ್ಯವಿಲ್ಲ; ಬಿಹಾರದ ಬಗ್ಗೆ ನಿಮಗಿರುವ ಪೂರ್ವಗ್ರಹ ಮತ್ತು ನಂಜು ನಿಮ್ಮ ಮಾತಿನಲ್ಲಿ ವ್ಯಕ್ತವಾಗಿದೆ; ಆಂಧ್ರ ಪ್ರದೇಶದ ಮತದಾರರು ನಿಮಗೆ ಪುನಃ ಏಕೆ ಮತ ಹಾಕಬೇಕೆಂಬ ಬಗ್ಗೆ ಇನ್ನಾದರೂ ಚಿಂತನೆ ನಡೆಸಿ” ಎಂದು ಪ್ರಶಾಂತ್ ಕಿಶೋರ್ ನಾಯ್ಡು ಗೆ ಹೇಳಿದ್ದಾರೆ.
ಓಂಗೋಲ್ ರಾಲಿಯಲ್ಲಿ ಮಾತನಾಡುತ್ತಿದ್ದ ಚಂದ್ರಬಾಬು ನಾಯ್ಡು ಅವರು “ಕೆಸಿಆರ್ ಕ್ರಿಮಿನಲ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ; ಆತ ಕಾಂಗ್ರೆಸ್ ಮತ್ತು ಟಿಡಿಪಿ ಶಾಸಕರನ್ನು ಕಬಳಿಸುತ್ತಿದ್ದಾರೆ; ಬಿಹಾರಿ ಡಕಾಯಿತ ಪ್ರಶಾಂತ್ ಕಿಶೋರ್ ಆಂಧ್ರ ಪ್ರದೇಶದ ಲಕ್ಷಾಂತರ ಮತಗಳನ್ನು ಕಿತ್ತು ಕೊಂಡಿದ್ದಾರೆ’ ಎಂದು ಆರೋಪಿಸಿದ್ದರು.