ರಾಜ್ಯದಲ್ಲಿ ಅತೃಪ್ತರ ಸರಕಾರ: ಕೆ.ಎಸ್. ಈಶ್ವರಪ್ಪ
Team Udayavani, Jun 21, 2018, 6:00 AM IST
ಸುಬ್ರಹ್ಮಣ್ಯ: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಗುಂಪು ಗಾರಿಕೆ ಇದೆ. ಕಾಂಗ್ರೆಸ್ನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಗುಂಪು ಗಾರಿಕೆ ತಲೆದೋರಿದೆ. ಎರಡೂ ಪಕ್ಷಗಳಲ್ಲಿ ಅತೃಪ್ತರ ಸಂಖ್ಯೆಯೇ ಹೆಚ್ಚಿದ್ದು, ರಾಜ್ಯದಲ್ಲಿ ಅತೃಪ್ತರ ಸರಕಾರ ಆಡಳಿತ ದಲ್ಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ ಅವರು ದೇವರ ದರ್ಶನ ಪಡೆದು ತುಲಾಭಾರ ಸೇವೆ, ಪಂಚಾಮೃತ ಅಭಿಷೇಕ, ಮಹಾ ಪೂಜೆ ನೆರವೇರಿಸಿ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದು ಇನ್ನು ಎರಡು ತಿಂಗಳೂ ಪೂರೈಸಿಲ್ಲ. ಅಷ್ಟರಲ್ಲೇ ಒಳಗೊಳಗೆ ಅಪಸ್ವರ ಎದ್ದಿದೆ. ಈ ಅತೃಪ್ತರ ಸರಕಾರ ಹೆಚ್ಚು ದಿನ ಬಾಳಿಕೆ ಬರಲಾರದು. ಶೀಘ್ರ ಬಿಜೆಪಿ ಸರಕಾರ ಆಡಳಿತಕ್ಕೆ ಬರಲಿದೆ ಎಂದವರು ಭವಿಷ್ಯ ನುಡಿದರು.
ಕ್ಷೇತ್ರ ದರ್ಶನ; ಮೂರು ಕಾರಣ
ಬಿಜೆಪಿ ಅತೀ ಹೆಚ್ಚು ಕ್ಷೇತ್ರ ಗಳಲ್ಲಿ ಜಯ ಸಾಧಿಸಿದ್ದಕ್ಕೆ , ನಾನು ನಿರೀಕ್ಷೆಗೆ ಮೀರಿದ ಮತ ಪಡೆದು ಗೆಲುವು ಸಾಧಿಸಿರುವುದಕ್ಕೆ, ಮೂರನೆಯದು ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಗೆಲುವು ಸಾಧಿಸಿ ಬರಲೆಂದು ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿರುವೆ ಎಂದು ಅವರು ತಿಳಿಸಿದರು.
ತುಲಾಭಾರ ಸೇವೆ
ದೇಗುಲದಲ್ಲಿ ಅವರು ಎಳ್ಳು, ಅಕ್ಕಿ ಹಾಗೂ ಬೆಲ್ಲದಲ್ಲಿ ತುಲಾಭಾರ ನೆರವೇರಿಸಿದರು. ಮಗಳು, ಅಳಿಯ ಮತ್ತು ಜೋತಿಷಿ ದ್ವಾರಕನಾಥ ಜತೆಗಿದ್ದರು. ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ, ಸ್ಥಳೀಯ ಯುವ ಮುಖಂಡ ಶ್ರೀಕುಮಾರ್ ನಾಯರ್ ಬಿಲದ್ವಾರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು