ಪುತ್ತೂರು: ಪಾರ್ಸೆಲ್ ಕದ್ದ ಆರೋಪಿ ಸೆರೆ
Team Udayavani, Aug 14, 2018, 11:56 AM IST
ಪುತ್ತೂರು: ಪಾರ್ಸೆಲ್ನಲ್ಲಿದ್ದ ಮೊಬೈಲ್ಗಳನ್ನು ಕದ್ದ ಪ್ರಕರಣದ ಆರೋಪಿ ರವಿಯನ್ನು ನಗರ ಪೊಲೀಸರು ಹಾವೇರಿಯಲ್ಲಿ ಆ. 12ರಂದು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಠಾಣಾ ವ್ಯಾಪ್ತಿಯ ಅಡವಿ ಸೋಮಾಪುರ ಗ್ರಾಮದ ರವಿ, ಸುಮಾರು 2,66,155.37 ರೂ. ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದ. ಎಸ್ಐ ಅಜಯ್ ಕುಮಾರ್ ನೇತೃತ್ವದಲ್ಲಿ ಎಎಸ್ಐ ಶ್ರೀಧರ ಮಣಿಯಾಣಿ, ಎಚ್ಸಿಗಳಾದ ಜಗದೀಶ್, ಹಿತೇಶ್, ಪಿಸಿಗಳಾದ ಚೋಳಪ್ಪ, ಕಿರಣ್ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಬಳಿಯಿಂದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬೆಂಗಳೂರಿನ ಜಯದೀಪ ಎಂಟರ್ಪ್ರçಸಸ್ನಿಂದ ಜೂನ್ 29ರಂದು 4 ಪಾರ್ಸೆಲ್ಗಳನ್ನು ಪುತ್ತೂರಿಗೆ ಕಳುಹಿಸಿಕೊಡಲಾಗಿತ್ತು. ಲಾರಿಯಲ್ಲಿ ಬಂದಿದ್ದ ಈ ಪಾರ್ಸೆಲನ್ನು ಸಂಸ್ಥೆಯ ಪುತ್ತೂರು ಪ್ರತಿನಿಧಿ ಜಗದೀಶ್ ಪಡೆದುಕೊಂಡು, ವಿತರಣೆ ಮಾಡಬೇಕಿತ್ತು. ಇದರಲ್ಲಿ 16 ಮೊಬೈಲ್ಗಳಿದ್ದವು. ಜೂನ್ 30ರಂದು ಪುತ್ತೂರಿಗೆ ತಲುಪಬೇಕಾಗಿದ್ದ ಪಾರ್ಸೆಲ್, ಪುತೂರಿಗೆ ತಲುಪಲಿಲ್ಲ. ಬಳಿಕ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು