ಕಾಡಾನೆಗಳ ದಾಳಿಗೆ ಲಕ್ಷಾಂತರ ರೂ. ಬೆಳೆ ನಾಶ
Team Udayavani, Jan 26, 2019, 9:32 AM IST
ಮಳವಳ್ಳಿ: ತಾಲೂಕಿನ ಬೆಳಕವಾಡಿ ಸಮೀಪದ ಹೊಸಹಳ್ಳಿ ಗ್ರಾಮದ ಹಲವು ರೈತರ ಜಮೀನುಗಳ ಮೇಲೆ ಗುರುವಾರ ರಾತ್ರಿ ಐದು ಕಾಡಾನೆ ದಾಳಿ ನಡೆಸಿ ಕಬ್ಬು, ಹಿಪ್ಪುನೇರಳೆ, ಸೌತೆ ಹಾಗೂ ಬಾಳೆ ಬೆಳೆಗಳನ್ನು ನಾಶಮಾಡಿವೆ.
ಗ್ರಾಮ ನಾಗೇಂದ್ರ 1.35 ಕುಂಟೆಯಲ್ಲಿದ್ದ ಕಬ್ಬು, ಮರಿಸ್ವಾಮಿ ಅವರಿಗೆ ಸೇರಿದ ಎರಡು ಎಕರೆ ಹಿಪ್ಪುನೇರಳೆ, ಮಹದೇವಪ್ಪಗೆ ಸೇರಿದ 1.5 ಎಕರೆಯಲ್ಲಿದ್ದ ಸೌತೆ, ಹಿಪ್ಪುನೇರಳೆ ಬೆಳೆ ಹಾಗೂ ನಟರಾಜುಗೆ ಸೇರಿದ 1.5 ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬಾಳೆ ಗಿಡಗಳು ಆನೆಗಳ ದಾಳಿಯಿಂದ ಸಂಪೂರ್ಣ ನಾಶವಾಗಿವೆ.
ಅಲ್ಲದೆ ಪಂಪ್ಸೆಟ್ ಸ್ಟಾರ್ಟರ್ ಹಾಗೂ ಜಮೀನಿನಲ್ಲಿ ಅಳವಡಿಸಿದ್ದ ಪೈಪ್ಗ್ಳನ್ನು ತುಳಿದು ಒಡೆದು ಹಾಕಿವೆ. ರೈತರು ಬೆಳೆದ ಬೆಳೆಗಳನ್ನು ಸೇವಿಸಿದ ಬಳಿಕ ಐದು ಆನೆಗಳಲ್ಲಿ ಮೂರು ಆನೆ ಕಾಡಿನತ್ತ ತೆರಳಿದ್ದರೆ, ಎರಡು ಆನೆ ಗ್ರಾಮದ ಶಿವಕುಮಾರ ಸ್ವಾಮೀಜಿ ಕಾಲೇಜಿನ ಹಿಂಭಾಗದಲ್ಲಿದ್ದ ಕಬ್ಬಿ ನಗದ್ದೆಯಲ್ಲಿ ಸೇರಿಕೊಂಡಿದ್ದವು.
ಆನೆಗಳ ದಾಳಿಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ತಿಳಿಸಿದರೂ ಅ—ಕಾರಿಯೊಬ್ಬ ಸ್ಥಳಕ್ಕೆ ಬಂದು ಸಿಬ್ಬಂದಿಯ ಕೊರತೆಯಿದೆ. ಸಂಜೆಯ ನಂತರ ಬೇರೆಡೆಯಿಂದ ಸಿಬ್ಬಂದಿ ಕರೆತಂದು ಕಾಡಿನತ್ತ ಓಡಿಸಲು ಕಾರ್ಯಾಚರಣೆ ನಡೆಸಲಾಗುವುದು ಎಂದಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಬೆಳಕವಾಡಿ ಪೊಲೀಸರ ಸಹಕಾರ ಪಡೆದ ಗ್ರಾಮದ ಹತ್ತಾರು ಯುವಕರು ಪಟಾಕಿ ಸಿಡಿಸಿ ಸವನಗಹಳ್ಳಿ ಗುಡ್ಡದತ್ತ ಅಟ್ಟಿದ್ದಾರೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ಸಮೀಪದ ಶಿಂಷಾ ಅರಣ್ಯ ಪ್ರದೇಶದಿಂದ ಆನೆಗಳು ನಾಡಿನತ್ತ ಬಂದು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಮಸ್ಯೆ ಇದೇ ರೀತಿ ಮುಂದುವರಿದರೆ ಗ್ರಾಮಸ್ಥರೆಲ್ಲ ಒಗ್ಗೂಡಿ ತಾಲೂಕು ಕಚೇರಿ ಮತ್ತು ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ