ಜಾನಪದ ಆಚರಣೆ ಮಾನವೀಯ ಮೌಲ್ಯಗಳ ಆಗರ
Team Udayavani, Mar 1, 2019, 7:12 AM IST
ಚನ್ನಪಟ್ಟಣ: ಗಾಮೀಣ ಜನರ ಬದುಕಿನ ಹಾಸುಹೊಕ್ಕಾಗಿರುವ ಜಾನಪದ ಆಚರಣೆಗಳು ಮಾನವೀಯ ಮೌಲ್ಯಗಳ ಆಗರವಾಗಿದೆ ಎಂದು ಕೋಡಂಬಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪುಷ್ಪ ಅಭಿಪ್ರಾಯಪಟ್ಟರು. ತಾಲೂಕಿನ ಕೋಡಂಬಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹುಚ್ಚಮ್ಮ ಜಾನಪದ ಸಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊದಿಗೆ ನಡೆದ ಜಾನಪದ ಗೀತಗಾಯನ, ಕಾವ್ಯ ಕಮ್ಮಟದಲ್ಲಿ ಮಾತನಾಡಿದರು.
ಇತ್ತೀಚಿನ ಆಧುನಿಕ ಆಡಂಬರ ಪಾಶ್ಚಿಮಾತ್ಯ ಸಂಸ್ಕೃತಿಯ ಅಬ್ಬರಕ್ಕೆ ಸಿಲುಕಿ ಯುವ ಸಮೂಹ ನಮ್ಮ ನೆಲದ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ಸಮೂಹ ಸಂಸ್ಕೃತಿಯ ಕಡೆಗೆ ವಾಲುವಂತೆ ಸರ್ಕಾರ ಹಲವು ರೀತಿಯ ಕಾರ್ಯಕ್ರಮ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ. ಜಾನಪದ ಕಲಾವಿದ ಉಳಿದಾಗ ಜನಪದ ಸಂಸ್ಕೃತಿ ಉಳಿಯುತ್ತದೆ. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಅವರಿಗೆ ಪುರಸ್ಕಾರ ಮನ್ನಣೆಗಳು ದೊರೆತಾಗ ಕಲಾವಿದ ಜೀವಂತಗೊಳ್ಳುತ್ತಾನೆ ಎಂದರು.
ಜಾನಪದ ಸಂಸ್ಕೃತಿ ಉಳಿವಿಗೆ ಶ್ರಮಿಸಿ: ಗಾಯಕ ಡಾ.ಬಿ.ಆರ್.ಶಿವಕುಮಾರ್ ಬ್ಯಾಡರಹಳ್ಳಿ ಮಾತನಾಡಿ, ಜಾನಪದ ಸಂಸ್ಕೃತಿ ಅಳಿವನಂಚಿನತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ ಅವರ ಉಳಿವಿಗೆ ಸಾಂಸ್ಕೃತಿಕ ರಾಯಬಾರಿಗಳು – ಸಾಹಿತಿಗಳು, ಕಲಾವಿದರು ಮುಂದಾಗಬೇಕು. ಯುವ ಕಲಾವಿದರನ್ನು ಪೋ›ತ್ಸಾಹಿಸಬೇಕು. ಕಲಾ ಪ್ರಕಾರಗಳ ಬಗ್ಗೆ ತಿಳಿಸಿ ತರಬೇತಿಗೊಳಿಸಬೇಕು. ಇತ್ತೀಚಿನ ದಿನಗಳ ಕಾಲಕ್ಕೆ ಒಗ್ಗುವಂತೆ ಆಕರ್ಷಿಸುವಂತೆ ರೂಪಿಸಬೇಕು ಎಂದರು.
ಜನಪದ ಮೂಲ ಸಂಸ್ಕೃತಿ: ಕಾಂಗ್ರೆಸ್ ಮುಖಂಡ ಸಿದ್ದರಾಮು ಮಾತನಾಡಿ, ಜಾನಪದ ಕಲೆಗಳು ಮನರಂಜನೆಗೆ ಸೀಮಿತಗೊಳ್ಳದೆ, ಶ್ರಮಕ್ಕೆ ತಕ್ಕಂತೆ ಹುಟ್ಟಿದ ಜನಪದ ಮಾನವೀಯ ಮೌಲ್ಯಗಳು ಸಾಮಾಜಿಕ ನ್ಯಾಯವನ್ನು ಪತ್ರಿಪಾದಿಸಿವೆ. ಜನಪದ ನೆಲಮೂಲ ಸಂಸ್ಕೃತಿಯ ರಾಯಭಾರಿಗಳು, ಸಾಂಸ್ಕೃತಿಕ ವಾರಸುದಾರರು ಮುಂದಿನ ಪೀಳಿಗಗೆ ಕೊಂಡೊಯ್ಯುತ್ತಿರುವ ಸಾರಥಿಗಳು ಅದರ ರಕ್ಷಾ ಕವಚವಾಗಿ ನಿಲ್ಲಬೇಕು ಎಂದರು.
ಬೇವೂರು ರಾಮಯ್ಯ, ಹೊನ್ನಿಗನಹಳ್ಳಿ ಬಿ.ಸಿದ್ದರಾಜಯ್ಯ, ಶಿವಕುಮಾರ್ ಬ್ಯಾಡರಹಳ್ಳಿ, ದೊಡ್ಡಮಳೂರು ಎಂ.ಬಿ.ಮಹದೇವ್, ಜಾಗೃತಿ ಪುಟ್ಟಸ್ವಾಮಿ, ಎಸ್.ಬಿ.ಗಂಗಾಧರ್ ಸುಣ್ಣಘಟ್ಟ, ಪ್ರಸನ್ನ ಕುಮಾರ್, ಬಾಣಂತಹಳ್ಳಿ ಪ್ರಕಾಶ್ ಗಾಯನ ಪ್ರಸ್ತುತ ಪಡಿಸಿದರು. ಸೋಬಾನೆ ಕಲಾವಿದರಾದ ಕೆಂಚಮ್ಮ ಮತ್ತು ತಂಡ ಸುಣ್ಣಘಟ್ಟ, ರಂಜಿತ ಮತ್ತು ತಂಡ, ಹೊಡಿಕೆಹೊಸಹಳ್ಳಿ ಜಯಮ್ಮ ಮತ್ತು ತಂಡ, ಚಕ್ಕೆರೆ ಸೋಬಾನೆ ಪದಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಚನ್ನಪ್ಪ, ಗ್ರಾಪಂ ನೌಕರ ಪ್ರಭಾಕರ್, ಕನಕ ಟ್ರಸ್ಟ್ನ ಅಧ್ಯಕ್ಷ ಪುಟ್ಟಸ್ವಾಮಿ, ಯುವ ಮುಖಂಡರಾದ ಶಿವಕುಮಾರ್, ಕೆ.ಎಂ. ಪ್ರವೀಣ್ ಕೋಡಂಬಹಳ್ಳಿ ಉಪಸ್ಥಿತರಿದ್ದರು. ಟ್ರಸ್ಟ್ನ ಕಾರ್ಯದರ್ಶಿ ಚಕ್ಕರೆ ಸಿದ್ದರಾಜು ಸ್ವಾಗತಿಸಿದರು. ಮಹೇಶ್ ಮೌರ್ಯ ನಿರೂಪಿಸಿದರು. ಬಾಣಂತಹಳ್ಳಿ ಪ್ರಕಾಶ್ ಪ್ರಾರ್ಥಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ