ಭಲೇ ಭಗವದ್ಗೀತೆ 


Team Udayavani, Nov 17, 2018, 2:38 AM IST

18.jpg

ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ ಭಾರತೀಯರಿಗಿತ್ತ ದೀಪಾವಳಿಯ ಉಡುಗೊರೆ ಅತ್ಯದ್ಭುತವಾಗಿದೆ. ಮೊದಲು ಭಗವದ್ಗೀತೆಯನ್ನು ತಿರಸ್ಕರಿಸುತ್ತಿದ್ದ ಸಹೋದರ ಜಲಾಲುದ್ದೀನ್‌ ಅನಂತರ ಕ್ರಮೇಣ ಗೀತೆಯೆಡೆ ಆಕರ್ಷಿತರಾದದ್ದು, ಗೀತೆ ಆತನ ಬದುಕನ್ನೇ ಬದಲಿಸಿದ್ದು ಒಂದು ರೋಚಕ ಸಂಗತಿ. 

ನಾವು “ಧರ್ಮಗ್ರಂಥ’ ಎಂದು ನಂಬಿಕೊಂಡು ಬಂದಿರುವ ಭಗವದ್ಗೀತೆಗೆ ಸಮಾಜವನ್ನೇ ಪರಿವರ್ತಿಸುವ ಶಕ್ತಿ ಇದೆ. ಆದರೆ ಅದರ ಆಧ್ಯಾತ್ಮಿಕ ಮೌಲ್ಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ಹರಿದು ಬಾರದಿರುವುದು ದುರದೃಷ್ಟ. ಕೇವಲ ಪೂಜೆಮಾಡಿ ಸಂತೃಪ್ತಿಗೊಳ್ಳುವವರು ಮತ್ತು ಭಗವದ್ಗೀತೆಯನ್ನು ಸಾರಾಸಗಟಾಗಿ ತಿರಸ್ಕರಿಸುವವರ ಮಧ್ಯೆ ಆ ಗ್ರಂಥದ ಮಹತ್ವ ಜನಸಾಮಾನ್ಯರಿಂದ ದೂರವಾಗಿಯೇ ಉಳಿದಿದೆ. ಭಾರತಕ್ಕೆ ಆಮದು ಆಧ್ಯಾತ್ಮದ ಅಗತ್ಯವಿಲ್ಲ. ಭಗವದ್ಗೀತೆಯ ತತ್ವ ಮತ್ತು ಸತ್ವ ಮನಸ್ಸು ಮನಸ್ಸುಗಳ ಒಳಗಿಳಿದರೆ ಇಡೀ ದೇಶವೇ ಬದಲಾಗಬಹುದು. 

 ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಡಿ.ವಿ.ಜಿ ಅವರ ಭಗವದ್ಗೀತೆ. ಹೆಚ್ಚಿನ ಧಾರ್ಮಿಕ ನಾಯಕರಿಗೆ ಭಗವದ್ಗೀತೆ ಮೋಕ್ಷಶಾಸ್ತ್ರವಾದರೆ ಡಿ.ವಿ.ಜಿ ಅವರಿಗೆ ಅದು ಜೀವನ ಧರ್ಮಯೋಗ. ಮತತ್ರಯ ವಿಚಾರಗಳನ್ನೂ ಅವರು ಆ ಗ್ರಂಥದಲ್ಲಿ ಪರಾಮರ್ಶಿಸಿದ್ದಾರೆ. ಆದರೆ ಇಡೀ ಕರ್ನಾಟಕದ ಪ್ರಜೆಗಳಿಗೆ ಆ ಗ್ರಂಥ ತಲುಪಲಿಲ್ಲವೆಂಬುದೇ ವಿಷಾದನೀಯ ವಿಚಾರ. ಸಂಸ್ಕೃತಿ ಇಲಾಖೆ ಆ ಪುಸ್ತಕ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದೆ. ಅಷ್ಟೇ ಸಾಲದು ಅವರ “ಜೀವನಧರ್ಮಯೋಗ’ದ ಎರಡೆರಡು ಅಧ್ಯಾಯಗಳು ಕ್ರಮವಾಗಿ ಆರನೇ ತರಗತಿಯಿಂದ ಪದವಿಪೂರ್ವ ಶಿಕ್ಷಣದ ತನಕ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು. ವಿಜ್ಞಾನದ ವಿದ್ಯಾರ್ಥಿಗಳಿಗೆ ಅನಾವಶ್ಯಕವಾಗಿ ಕನ್ನಡದ ಇತರ ಪಾಠಗಳನ್ನು ತುರುಕುವುದಕ್ಕಿಂತ ಡಿ.ವಿ.ಜಿ ಅವರ ಜೀವನಧರ್ಮಯೋಗ ಮತ್ತು ಮಂಕುತಿಮ್ಮನ ಕಗ್ಗವನ್ನು ಓದಿಸಿ ಅರ್ಥ ಮಾಡಿಸಿದರೆ ಸಾಕು ಇಡೀ ಕರ್ನಾಟಕವೇ ಬದಲಾಗಬಹುದು.

ಭಾರತೀಯ ಆಡಳಿತ ಸೇವಾಧಿಕಾರಿಯಾಗಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡುವುದು ಅನಿವಾರ್ಯ. ಕಾರಣ ಆತನಿಗೆ ಆಡಳಿತಾತ್ಮಕವಾದ ಎಲ್ಲಾ ವಿಚಾರಗಳ ಪರಿಚಯಬೇಕಾಗುತ್ತದೆ. ಈ ನಿಯಮ ನಮ್ಮ ಧರ್ಮಬೋಧಕರಿಗೂ ಅನ್ವಯವಾಗಬೇಕು. ಅವರಿಗೆ ಎಲ್ಲಾ ಧರ್ಮಗಳ ವಿಷಯದಲ್ಲಿ ಅರಿವು ಇರುವುದನ್ನು ತಿಳಿಯಲು ಕಡ್ಡಾಯ ಪರೀಕ್ಷೆಯ ವ್ಯವಸ್ಥೆ ಮತ್ತು ಪದವಿ ಪ್ರಮಾಣಪತ್ರದ ವ್ಯವಸ್ಥೆಯಾಗಬೇಕು. ಧರ್ಮಬೋಧಕನು ಭಾರತದ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡದಿದ್ದರೆ ಮನಸ್ಸು-ಮನಸ್ಸುಗಳ ನಡುವಣ ಕಂದಕ ದೊಡ್ಡದಾಗುತ್ತಾ ಹೋಗಬಹುದು. ಏಕೆಂದರೆ ಆಧ್ಯಾತ್ಮ ಮನಸ್ಸಿಗೆ ಸಂಬಂಧಿಸಿದ ವಿಜ್ಞಾನ. ಮನಸ್ಸು ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ. ಮನಸ್ಸೆಂದರೆ ಏನೆಂಬುದನ್ನು ತಿಳಿಯಲು ಮನಶಾÏಸ್ತ್ರಜ್ಞರೂ ಸಂಪೂರ್ಣ ಯಶಸ್ವಿಯಾಗಲಿಲ್ಲ. ಮನಸ್ಸನ್ನು ಪಳಗಿಸುವ ಶಕ್ತಿ ಆಧ್ಯಾತ್ಮಿಕತೆಗೆ ಮಾತ್ರ ಇದೆ. ಆ ಶಕ್ತಿ ಬೆಳಗಬೇಕು. ಆಗ ಮಾತ್ರ ಸಮಾಜದಲ್ಲಿ ಕೋಮು ಸಾಮರಸ್ಯ ಕಾಪಾಡಲು ಸಾಧ್ಯ. ಅರ್ಜುನನ ಮನಸ್ಸನ್ನು ಬದಲಿಸಿದ ಭಗವದ್ಗೀತೆ ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ನ ಮನಸ್ಸನ್ನು ಬದಲಿಸಿತು. ಅದು ಇನ್ನಷ್ಟು ಜನರ ಮನಃಪರಿವರ್ತನೆ ಮಾಡಲಿ.

ತಾರಾನಾಥ ವರ್ಕಾಡಿ 

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.