ಭಲೇ ಭಗವದ್ಗೀತೆ 


Team Udayavani, Nov 17, 2018, 2:38 AM IST

18.jpg

ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ ಭಾರತೀಯರಿಗಿತ್ತ ದೀಪಾವಳಿಯ ಉಡುಗೊರೆ ಅತ್ಯದ್ಭುತವಾಗಿದೆ. ಮೊದಲು ಭಗವದ್ಗೀತೆಯನ್ನು ತಿರಸ್ಕರಿಸುತ್ತಿದ್ದ ಸಹೋದರ ಜಲಾಲುದ್ದೀನ್‌ ಅನಂತರ ಕ್ರಮೇಣ ಗೀತೆಯೆಡೆ ಆಕರ್ಷಿತರಾದದ್ದು, ಗೀತೆ ಆತನ ಬದುಕನ್ನೇ ಬದಲಿಸಿದ್ದು ಒಂದು ರೋಚಕ ಸಂಗತಿ. 

ನಾವು “ಧರ್ಮಗ್ರಂಥ’ ಎಂದು ನಂಬಿಕೊಂಡು ಬಂದಿರುವ ಭಗವದ್ಗೀತೆಗೆ ಸಮಾಜವನ್ನೇ ಪರಿವರ್ತಿಸುವ ಶಕ್ತಿ ಇದೆ. ಆದರೆ ಅದರ ಆಧ್ಯಾತ್ಮಿಕ ಮೌಲ್ಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ಹರಿದು ಬಾರದಿರುವುದು ದುರದೃಷ್ಟ. ಕೇವಲ ಪೂಜೆಮಾಡಿ ಸಂತೃಪ್ತಿಗೊಳ್ಳುವವರು ಮತ್ತು ಭಗವದ್ಗೀತೆಯನ್ನು ಸಾರಾಸಗಟಾಗಿ ತಿರಸ್ಕರಿಸುವವರ ಮಧ್ಯೆ ಆ ಗ್ರಂಥದ ಮಹತ್ವ ಜನಸಾಮಾನ್ಯರಿಂದ ದೂರವಾಗಿಯೇ ಉಳಿದಿದೆ. ಭಾರತಕ್ಕೆ ಆಮದು ಆಧ್ಯಾತ್ಮದ ಅಗತ್ಯವಿಲ್ಲ. ಭಗವದ್ಗೀತೆಯ ತತ್ವ ಮತ್ತು ಸತ್ವ ಮನಸ್ಸು ಮನಸ್ಸುಗಳ ಒಳಗಿಳಿದರೆ ಇಡೀ ದೇಶವೇ ಬದಲಾಗಬಹುದು. 

 ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಡಿ.ವಿ.ಜಿ ಅವರ ಭಗವದ್ಗೀತೆ. ಹೆಚ್ಚಿನ ಧಾರ್ಮಿಕ ನಾಯಕರಿಗೆ ಭಗವದ್ಗೀತೆ ಮೋಕ್ಷಶಾಸ್ತ್ರವಾದರೆ ಡಿ.ವಿ.ಜಿ ಅವರಿಗೆ ಅದು ಜೀವನ ಧರ್ಮಯೋಗ. ಮತತ್ರಯ ವಿಚಾರಗಳನ್ನೂ ಅವರು ಆ ಗ್ರಂಥದಲ್ಲಿ ಪರಾಮರ್ಶಿಸಿದ್ದಾರೆ. ಆದರೆ ಇಡೀ ಕರ್ನಾಟಕದ ಪ್ರಜೆಗಳಿಗೆ ಆ ಗ್ರಂಥ ತಲುಪಲಿಲ್ಲವೆಂಬುದೇ ವಿಷಾದನೀಯ ವಿಚಾರ. ಸಂಸ್ಕೃತಿ ಇಲಾಖೆ ಆ ಪುಸ್ತಕ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದೆ. ಅಷ್ಟೇ ಸಾಲದು ಅವರ “ಜೀವನಧರ್ಮಯೋಗ’ದ ಎರಡೆರಡು ಅಧ್ಯಾಯಗಳು ಕ್ರಮವಾಗಿ ಆರನೇ ತರಗತಿಯಿಂದ ಪದವಿಪೂರ್ವ ಶಿಕ್ಷಣದ ತನಕ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕು. ವಿಜ್ಞಾನದ ವಿದ್ಯಾರ್ಥಿಗಳಿಗೆ ಅನಾವಶ್ಯಕವಾಗಿ ಕನ್ನಡದ ಇತರ ಪಾಠಗಳನ್ನು ತುರುಕುವುದಕ್ಕಿಂತ ಡಿ.ವಿ.ಜಿ ಅವರ ಜೀವನಧರ್ಮಯೋಗ ಮತ್ತು ಮಂಕುತಿಮ್ಮನ ಕಗ್ಗವನ್ನು ಓದಿಸಿ ಅರ್ಥ ಮಾಡಿಸಿದರೆ ಸಾಕು ಇಡೀ ಕರ್ನಾಟಕವೇ ಬದಲಾಗಬಹುದು.

ಭಾರತೀಯ ಆಡಳಿತ ಸೇವಾಧಿಕಾರಿಯಾಗಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡುವುದು ಅನಿವಾರ್ಯ. ಕಾರಣ ಆತನಿಗೆ ಆಡಳಿತಾತ್ಮಕವಾದ ಎಲ್ಲಾ ವಿಚಾರಗಳ ಪರಿಚಯಬೇಕಾಗುತ್ತದೆ. ಈ ನಿಯಮ ನಮ್ಮ ಧರ್ಮಬೋಧಕರಿಗೂ ಅನ್ವಯವಾಗಬೇಕು. ಅವರಿಗೆ ಎಲ್ಲಾ ಧರ್ಮಗಳ ವಿಷಯದಲ್ಲಿ ಅರಿವು ಇರುವುದನ್ನು ತಿಳಿಯಲು ಕಡ್ಡಾಯ ಪರೀಕ್ಷೆಯ ವ್ಯವಸ್ಥೆ ಮತ್ತು ಪದವಿ ಪ್ರಮಾಣಪತ್ರದ ವ್ಯವಸ್ಥೆಯಾಗಬೇಕು. ಧರ್ಮಬೋಧಕನು ಭಾರತದ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡದಿದ್ದರೆ ಮನಸ್ಸು-ಮನಸ್ಸುಗಳ ನಡುವಣ ಕಂದಕ ದೊಡ್ಡದಾಗುತ್ತಾ ಹೋಗಬಹುದು. ಏಕೆಂದರೆ ಆಧ್ಯಾತ್ಮ ಮನಸ್ಸಿಗೆ ಸಂಬಂಧಿಸಿದ ವಿಜ್ಞಾನ. ಮನಸ್ಸು ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ. ಮನಸ್ಸೆಂದರೆ ಏನೆಂಬುದನ್ನು ತಿಳಿಯಲು ಮನಶಾÏಸ್ತ್ರಜ್ಞರೂ ಸಂಪೂರ್ಣ ಯಶಸ್ವಿಯಾಗಲಿಲ್ಲ. ಮನಸ್ಸನ್ನು ಪಳಗಿಸುವ ಶಕ್ತಿ ಆಧ್ಯಾತ್ಮಿಕತೆಗೆ ಮಾತ್ರ ಇದೆ. ಆ ಶಕ್ತಿ ಬೆಳಗಬೇಕು. ಆಗ ಮಾತ್ರ ಸಮಾಜದಲ್ಲಿ ಕೋಮು ಸಾಮರಸ್ಯ ಕಾಪಾಡಲು ಸಾಧ್ಯ. ಅರ್ಜುನನ ಮನಸ್ಸನ್ನು ಬದಲಿಸಿದ ಭಗವದ್ಗೀತೆ ಪಾಕಿಸ್ತಾನಿ ಪ್ರಜೆ ಜಲಾಲುದ್ದೀನ್‌ನ ಮನಸ್ಸನ್ನು ಬದಲಿಸಿತು. ಅದು ಇನ್ನಷ್ಟು ಜನರ ಮನಃಪರಿವರ್ತನೆ ಮಾಡಲಿ.

ತಾರಾನಾಥ ವರ್ಕಾಡಿ 

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

4-manohar-prasad

ನುಡಿನಮನ- ಪತ್ರಿಕಾರಂಗದ ಮನೋಹರ ಪ್ರಸಾದ್‌ ಕರಾವಳಿಯ ರಾಯಭಾರಿ

1-dasdsad

Yakshagana; ಮಾತಿನ ಜರಡಿ: ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Women’s Day Special: ನಮ್ಮೊಡನಿದ್ದೂ ನಮ್ಮಂತಾಗದ ನಾರಿಯರು…!

Shivratri 2024; ದಕ್ಷಿಣ ಕಾಶಿ, ಸಂಗಮ ಕ್ಷೇತ್ರ ಎನಿಸಿಕೊಂಡ ಶ್ರೀ ಸಹಸ್ತ್ರಲಿಂಗೇಶ್ವರನ ಆಲಯ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.