ಹೀಗೊಂದು ಕನವರಿಕೆ…
Team Udayavani, Jun 4, 2020, 5:47 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭುವಿಗೆ ಅಡಿಯಿಟ್ಟ ಮರುಕ್ಷಣವೆ
ಜಗದ ನಾಗಾಲೋಟವ ನೋಡುತ್ತಲೇ
ಆಲದ ಮರವಾಗಿ ಬೆಳೆದು,
ಬೆಂಬಿಡದೆ ಕಾಡಿ, ನಗಿಸಿ, ನೋಯಿಸಿ
ನರಳಿಸಿ, ಕೆರಳಿಸಿ, ಗೆಲ್ಲಿಸಿ, ಸೋಲಿಸಿ
ಸುಂದರ ನಾಳೆಗಾಗಿ,
ನಿತ್ಯ ಮಾರ್ಧನಿಸುತ್ತವೆ,
ಹುಚ್ಚು ಹೊಂಗನುಸುಗಳು…
ಹರೆಯ ಕಳೆದು,
ನೆರೆಯು ಬಂದು,
ಜರನು ಬದುಕಿನ ಕದವ ತಟ್ಟುತ್ತಿರಲು
ಎತ್ತರದ ಕನಸುಗಳು ತತ್ತರಿಸಿ ಹೋಗಿ
ಕುಬ್ಜವಾಗಿ, ಕರಗೇ ಹೋದವು
ಕಾಲನ ಕರೆಗೆ, ಕತ್ತಲಿನ ಕೂಪದಲಿ
ಸತ್ತೇ ಹೋದವು
ಈ ಹುಚ್ಚು ಹೊಂಗನಸುಗಳು…
– ರವಿನಾಗ್ ತಾಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ