ಜೊಕೋವಿಕ್, ಫೆಡರರ್ ಶುಭಾರಂಭ
Team Udayavani, Jan 17, 2018, 12:26 PM IST
ಮೆಲ್ಬರ್ನ್: ಆರು ಬಾರಿಯ ಚಾಂಪಿಯನ್ ನೊವಾಕ್ ಜೊಕೋವಿಕ್, ದಾಖಲೆ 20ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ರೋಜರ್ ಫೆಡರರ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಪುರುಷರ ಸಿಂಗಲ್ಸ್ನಲ್ಲಿ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ದಾಖಲಿಸಿದ್ದಾರೆ.
ಮೊಣಕೈಯ ಗಾಯದಿಂದಾಗಿ ಆರು ತಿಂಗಳ ಬಳಿಕ ಟೆನಿಸ್ ಕಣಕ್ಕೆ ಮರಳಿದ 12 ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ಜೊಕೋವಿಕ್ ಅಮೆರಿಕದ ಡೋನಾಲ್ಡ್ ಯಂಗ್ ಅವರನ್ನು 6-1, 6-2, 6-4 ನೇರ ಸೆಟ್ಗಳಿಂದ ಕೆಡಹಿದರು. ಬಲ ಕೈಗೆ ಗಾಯವಾಗದಂತೆ ರಕ್ಷಾಕವಚ ಧರಿಸಿದ್ದ ಅವರು ಪಂದ್ಯ ಗೆದ್ದ ಬಳಿಕ ಪ್ರೇಕ್ಷಕರ ಕರತಾಡನಕ್ಕೆ ಅಭಿನಂದನೆ ಸಲ್ಲಿಸಿದರು.
ಫೆಡರರ್ ಮುನ್ನಡೆ
ಕಳೆದ ವರ್ಷ ಇಲ್ಲಿ ತನ್ನ 18ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಹಾಲಿ ಚಾಂಪಿಯನ್ ಫೆಡರರ್ ಇದೀಗ 20ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿದಿದ್ದಾರೆ. 36ರ ಹರೆಯದ ಅವರು 41 ಗೆಲುವಿನ ಹೊಡೆತ ನೀಡಿ ಸ್ಲೋವಾನಿಯಾದ ಅಲ್ಜಾಝ್ ಬೆದೆನೆ ಅವರನ್ನು 6-3, 6-4, 6-3 ಸೆಟ್ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷದ ವಿಂಬಲ್ಡನ್ ಗೆಲ್ಲುವ ಮೂಲಕ ಅವರು 19ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಒಲಿಸಿಕೊಂಡಿದ್ದರು.
ಶಸ್ತ್ರಚಿಕಿತ್ಸೆ ಬಳಿಕ ಮೊದಲ ಜಯ
ಕಳೆದ ಜುಲೈಯಲ್ಲಿ ಮಂಡಿ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಾಜಿ ಚಾಂಪಿಯನ್ ಸ್ಟಾನ್ ವಾವ್ರಿಂಕ ಇಲ್ಲಿ ತನ್ನ ಮೊದಲ ಗೆಲುವು ಕಂಡರು. ಆದರೆ ಅದಕ್ಕಾಗಿ ನಾಲ್ಕು ಸೆಟ್ ತೆಗೆದುಕೊಂಡಿದ್ದರು. ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ವಾವ್ರಿಂಕ ಅವರು ರಿಕಾರ್ಡಸ್ ಬೆರಂಕಿಸ್ ಅವರನ್ನು 6-3, 6-4, 2-6, 7-6 (7-2) ಸೆಟ್ಗಳಿಂದ ಪರಾಭವಗೊಳಿಸಿ ಮುನ್ನಡೆದರು.
ಜರ್ಮನಿಯ ಯುವ ತಾರೆ ಅಲೆಕ್ಸಾಂಡರ್ ಜ್ವರೇವ್ ಕಠಿನ ಹೋರಾಟದಲ್ಲಿ ಇಟಲಿಯ ಥಾಮಸ್ ಫ್ಯಾಬಿಯಾನೊ ಅವರನ್ನು ಸೋಲಿಸಿದ್ದಾರೆ. ಜ್ವರೇವ್ 6-1, 7-6 (7-5, 7-5 ಸೆಟ್ಗಳಿಂದ ಜಯ ಸಾಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ