ಸೈನಾ ಕ್ವಾರ್ಟರ್ ಫೈನಲ್ಗೆ
Team Udayavani, Aug 3, 2018, 10:36 AM IST
ನಾಂಜಿಂಗ್ (ಚೀನ): ವಿಶ್ವ ಬ್ಯಾಡ್ಮಿಂಟನ್ ಕೂಟದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸೋಲುಂಡು ಕೆ. ಶ್ರೀಕಾಂತ್ ಹೊರಬಿದ್ದಿದ್ದಾರೆ. ಮತ್ತೂಂದೆಡೆ ಮಹಿಳಾ ಡಬಲ್ಸ್ ಪಂದ್ಯದಲ್ಲಿ ಸೋಲನು ಭವಿಸಿದ್ದ ಅಶ್ವಿನಿ ಪೊನ್ನಪ್ಪ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ಜತೆಗೂಡಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ಸೈನಾಗೆ ನೇರ ಗೇಮ್ ಜಯ
ವಿಶ್ವ ಕೂಟದಲ್ಲಿ ಉತ್ತಮ ಪ್ರದರ್ಶನವನ್ನು ಮುಂದು ವರಿಸಿದ ಸೈನಾ ನೆಹ್ವಾಲ್, 21-16, 21-19 ನೇರ ಗೇಮ್ಗಳಿಂದ ಮಾಜಿ ಚಾಂಪಿಯನ್ ಥಾಯ್ಲೆಂಡ್ನ ರಚನೋಕ್ ಇಂತನಾನ್ ವಿರುದ್ಧ ಗೆಲುವು ಸಾಧಿಸಿದರು. ಮುಂದಿನ ಸುತ್ತಿನಲ್ಲಿ ಸೈನಾ 2 ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್ನ ಕ್ಯಾರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ. ಮರಿನ್ ಒಲಿಂಪಿಕ್ ಚಾಂಪಿಯನ್ ಕೂಡ ಆಗಿದ್ದಾರೆ. ಸೈನಾ 2015ರಲ್ಲಿ ಕಂಚು ಹಾಗೂ 2017ರಲ್ಲಿ ಬೆಳ್ಳಿ ಪದಕ ಗೆದ್ದು ಗಮನ ಸೆಳೆದಿದ್ದರು.
“ಇದೊಂದು ಭಾರೀ ಸವಾಲಿನ ಪಂದ್ಯವಾಗಿತ್ತು. 2ನೇ ಗೇಮ್ ಯಾರೂ ಗೆಲ್ಲಬಹುದಾದ ಸ್ಥಿತಿಗೆ ಬಂದಿತ್ತು. ಇಬ್ಬರೂ 19-19ರಲ್ಲಿ ಸಮಬಲ ಸಾಧಿಸಿದ್ದೆವು. ಈ ಸಂದರ್ಭದಲ್ಲಿ ಗೋಪಿ ಸರ್ ನನಗೆ ಸೂಕ್ತ ಮಾರ್ಗದರ್ಶನ ನೀಡಿದರು. ಯಾವ ರೀತಿಯ ಪ್ರದರ್ಶನ ನೀಡಬೇಕೆಂದು ಸೂಚಿಸಿದರು. ಇದರಿಂದ ಲಾಭವಾಯಿತು’ ಎಂದು ಸೈನಾ ಪ್ರತಿಕ್ರಿಯಿಸಿದ್ದಾರೆ. “ಮುಂದಿನ ಪಂದ್ಯ ಇನ್ನೂ ದೊಡ್ಡ ಸವಾಲಿನದ್ದಾಗಿದೆ. ಕ್ಯಾರೋಲಿನ್ ಮರಿನ್ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಕಳೆದ ಡೆನ್ಮಾರ್ಕ್ ಓಪನ್ನಲ್ಲಿ ಆಕೆಯನ್ನು ಎದುರಿಸಿದ್ದೆ. ಎಲ್ಲ ಸಾಮರ್ಥ್ಯ ಒಟ್ಟುಗೂಡಿಸಿ ಹೋರಾಡಬೇಕಿದೆ’ ಎಂದೂ ಸೈನಾ ಹೇಳಿದರು.
ಕೆ. ಶ್ರೀಕಾಂತ್ ಔಟ್
ಪುರುಷರ ಸಿಂಗಲ್ಸ್ನಲ್ಲಿ ನಿರೀಕ್ಷೆ ಮೂಡಿಸಿದ್ದ ಕೆ. ಶ್ರೀಕಾಂತ್ 18-21, 18-21 ನೇರ ಗೇಮ್ಗಳಿಂದ ಮಲೇಶ್ಯದ ಡ್ಯಾರೆನ್ ಲಿವ್ ವಿರುದ್ಧ ಸೋಲುಂಡು ಕೂಟದಿಂದ ಹೊರಬಿದ್ದರು. “ಈ ಪಂದ್ಯದಲ್ಲಿ ನನಗೆ ಲಯ ಸಾಧಿಸಲಾಗಲಿಲ್ಲ, ಸಾಕಷ್ಟು ತಪ್ಪುಗಳನ್ನೆಸಗಿದೆ. ಹೀಗಾಗಿ ಸೋಲು ಕಾಣಬೇಕಾಯಿತು’ ಎಂದು ಶ್ರೀಕಾಂತ್ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.
ಅಶ್ವಿನಿ-ಸಾತ್ವಿಕ್ ಮುನ್ನಡೆ
ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಜೋಡಿ ಮಿಶ್ರ ಡಬಲ್ಸ್ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ 20-22, 21-14, 21-6 ಅಂತರದಿಂದ ಮಲೇಶ್ಯದ ವಿಶ್ವ ನಂ.7 ಆಟಗಾರರಾದ ಗೊಹ್ ಸೂನ್-ಶೆವೊನ್ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್