ಐತಿಹಾಸಿಕ ಚಿನ್ನದ ಮೇಲೆ ಸಿಂಧು ಕಣ್ಣು


Team Udayavani, Aug 5, 2018, 6:00 AM IST

ap842018000180b.jpg

ನಾಂಜಿಂಗ್‌ (ಚೀನ): ಭಾರತದ ಅಗ್ರ ಶ್ರೇಯಾಂಕಿತ ಶಟ್ಲರ್‌ ಪಿ.ವಿ. ಸಿಂಧು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ಗೆ ಲಗ್ಗೆ ಇರಿಸಿ ಹೊಸ ಇತಿಹಾಸದತ್ತ ಮುಖ ಮಾಡಿದ್ದಾರೆ. ಶನಿವಾರ ನಡೆದ ಸಿಂಗಲ್ಸ್‌ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ಜಪಾನಿನ ಅಕಾನೆ ಯಮಾಗುಚಿ ಅವರನ್ನು 21- 16, 24 -22 ಗೇಮ್‌ಗಳ ಅಂತರದಲ್ಲಿ ಮಣಿಸಿದರು.

ರವಿವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸಿಂಧು ಸ್ಪೇನಿನ ಕ್ಯಾರೋಲಿನಾ ಮರಿನ್‌ ವಿರುದ್ಧ ಸೆಣಸಲಿದ್ದಾರೆ. ಗೆದ್ದರೆ ಮೊದಲ ಬಾರಿಗೆ ವಿಶ್ವ ಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ಸತತ 2ನೇ ಫೈನಲ್‌
ಇದು ಸಿಂಧು ಕಾಣುತ್ತಿರುವ ಸತತ 2ನೇ ವಿಶ್ವ ಬ್ಯಾಡ್ಮಿಂಟನ್‌ ಫೈನಲ್‌. ಕಳೆದ ವರ್ಷ ಗ್ಲಾಸೊYದಲ್ಲಿ ನಡೆದ ಕೂಟದಲ್ಲಿ ಅವರು ಜಪಾನಿನ ನಜೋಮಿ ಒಕುಹಾರ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟಿದ್ದರು. ಈ ಬಾರಿ ಇದು ಚಿನ್ನವಾಗಿ ಪರಿವರ್ತನೆಯಾಗಲಿ ಎಂಬುದು ಭಾರತೀಯ ಕ್ರೀಡಾ ಪ್ರೇಮಿಗಳ ಆಶಯ. ಇದಕ್ಕೂ ಮುನ್ನ ಸಿಂಧು 2013 ಹಾಗೂ 2014ರ ಕೂಟಗಳಲ್ಲಿ ಕಂಚಿನ ಪದಕ ಜಯಿಸಿದ್ದರು. ಈವರೆಗೆ ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ಭಾರತೀಯರ್ಯಾರೂ ಬಂಗಾರದ ಪದಕ ಗೆದ್ದಿಲ್ಲ. ಇದಕ್ಕೆ ಸಿಂಧು ಮುನ್ನುಡಿ ಬರೆಯುವರೇ ಎಂಬುದೊಂದು ಕಾತರ.

ರೋಚಕ ಸೆಮಿ ಹೋರಾಟ
ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದ ಆರಂಭದಿಂದಲೂ ವೀರೋಚಿತ ಹೋರಾಟ ತೋರಿದ ಸಿಂಧು, ಮೊದಲ ಗೇಮ್‌ನಲ್ಲೇ ಎದುರಾಳಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಆದರೆ ಎರಡನೇ ಗೇಮ್‌ನಲ್ಲಿ ಅಮೋಘ ಆಟವಾಡಿದ ಯಮಾಗುಚಿ ತಿರುಗಿ ಬೀಳುವ ಸೂಚನೆ ನೀಡಿದರು. ಆದರೆ ಸಿಂಧು ಕೂಡ ತೀವ್ರ ಪ್ರತಿರೋಧ ತೋರಿದರು. ಇದರ ಪರಿಣಾಮ, ಇಬ್ಬರ ನಡುವೆ ಅಂಕ ಗಳಿಕೆಯಲ್ಲಿ ಭಾರೀ ಪೈಪೋಟಿಯೇ ಏರ್ಪಟ್ಟಿತು. ಹೀಗಾಗಿ 2ನೇ ಗೇಮ್‌, ಗೆಲುವಿಗೆ ಬೇಕಾದ 21 ಅಂಕಗಳ ಗಡಿಯನ್ನೂ ದಾಟಿ ಮುಂದುವರಿಯಿತು. ಅಂತಿಮವಾಗಿ, ಸಿಂಧು ಅವರು 24-22 ಅಂತರದಲ್ಲಿ ಗೆಲುವು ಪಡೆದರು.

ಸಿಂಧು-ಮರಿನ್‌ ಮುಖಾಮುಖೀ
ಫೈನಲ್‌ ಎದುರಾಳಿ ಕ್ಯಾರೊಲಿನಾ ಮರಿನ್‌ ಅವರೊಂದಿಗೆ ಸಿಂಧು ಈವರೆಗೆ 11 ಬಾರಿ ಮುಖಾಮುಖೀಯಾಗಿದ್ದಾರೆ. ಇದರಲ್ಲಿ 6 ಬಾರಿ ಮರಿನ್‌ ಗೆಲುವು ಸಾಧಿಸಿದ್ದರೆ, ಸಿಂಧು 5 ಬಾರಿ ಜಯ ಕಂಡಿದ್ದಾರೆ. ಮರಿನ್‌ ವಿರುದ್ಧ ಸೋತ ಪ್ರಮುಖ ಪಂದ್ಯಗಳಲ್ಲಿ 2016ರ ಒಲಿಂಪಿಕ್ಸ್‌ ಫೈನಲ್‌ ಕೂಡ ಒಂದು.

ಒಲಿಂಪಿಕ್ಸ್‌ ಅನಂತರ ನಡೆದಿದ್ದ ದುಬಾೖ ವಿಶ್ವ ಸೂಪರ್‌ ಸೀರಿಸ್‌ ಫೈನಲ್ಸ್‌ನ ಬಿ ಗುಂಪಿನ ಪಂದ್ಯದಲ್ಲಿ ಮರಿನ್‌ ಅವರನ್ನು ಮಣಿಸಿದ್ದ ಸಿಂಧು, 2017ರ ಯೂನೆಕ್ಸ್‌ ಸನ್‌ರೈಸ್‌ ಇಂಡಿಯಾ ಓಪನ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಪುನಃ ಮರಿನ್‌ ಅವರನ್ನು ಸೋಲಿಸಿ ಚಿನ್ನ ಗೆದ್ದಿದ್ದರು. ಆದರೆ, ಕಳೆದ ವರ್ಷದ ಸಿಂಗಾಪುರ್‌ ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮರಿನ್‌ ವಿರುದ್ಧ ಸೋಲು ಕಂಡಿದ್ದರು. ಈ ವರ್ಷ ನಡೆದ ಮಲೇಶ್ಯ ಓಪನ್‌ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಮರಿನ್‌ ಅವರನ್ನು ಕಟ್ಟಿಹಾಕಿ ಸೆಮಿಫೈನಲ್‌ ಪ್ರವೇಶಿಸಿದ್ದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಸಾಧನೆ
ವರ್ಷ    ಸ್ಥಳ    ಪದಕ
2013    ಗುವಾಂಗ್‌ಜೌ    ಕಂಚು
2014    ಕೋಪನ್‌ಹೇಗನ್‌    ಕಂಚು
2017    ಗ್ಲಾಸೊY    ಬೆಳ್ಳಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.