ಕೆಕೆಆರ್ಗೆ ಇನ್ನೊಂದು ಆಘಾತ ಆರ್ಚಿ ನೋರ್ಜೆ ಗಾಯಾಳು
Team Udayavani, Mar 21, 2019, 12:30 AM IST
ಕೋಲ್ಕತಾ: ಇತ್ತೀಚೆಗಷ್ಟೇ ಗಾಯಾಳು ಕಮಲೇಶ್ ನಾಗರಕೋಟಿ ಮತ್ತು ಶಿವಂ ಮಾವಿ ಅವರ ಸೇವೆಯಿಂದ ವಂಚಿತವಾದ ಕೋಲ್ಕತಾ ನೈಟ್ರೈಡರ್ ಈಗ ಮತ್ತೂಂದು ಆಘಾತಕ್ಕೆ ಸಿಲುಕಿದೆ. ದಕ್ಷಿಣ ಆಫ್ರಿಕಾ ಬಲಗೈ ವೇಗಿ ಅನ್ರಿಚ್ ನೋರ್ಜೆ ಕೂಡ ಗಾಯಾಳಾಗಿದ್ದು, ಐಪಿಎಲ್ ಸರಣಿಯಿಂದಲೇ ಹೊರಗುಳಿಯಲಿದ್ದಾರೆ.
ಇದರೊಂದಿಗೆ ಕೂಟದ ಆರಂಭಕ್ಕೂ ಮೊದಲೇ ದಿನೇಶ್ ಕಾರ್ತಿಕ್ ಪಡೆಯ ಮೂವರು ಪ್ರಮುಖ ಬೌಲರ್ಗಳು ಬೇರ್ಪಟ್ಟಂತಾಯಿತು.
ಈ ವರ್ಷವಷ್ಟೇ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಅನ್ರಿಚ್ ನೋರ್ಜೆ ಭುಜದ ನೋವಿಗೆ ಸಿಲುಕಿದ್ದಾಗಿ ಟ್ವೀಟ್ ಮಾಡಿದ್ದಾರೆ. ಕಳೆದ ಹರಾಜಿನಲ್ಲಿ ಅವರನ್ನು 20 ಲಕ್ಷ ರೂ. ಮೊತ್ತಕ್ಕೆ ಖರೀದಿಸಲಾಗಿತ್ತು.
“ದುರದೃಷ್ಟವಶಾತ್ ಭುಜದ ನೋವಿನಿಂದ ನಾನು ಐಪಿಎಲ್ನಿಂದ ಹೊರಗುಳಿಯಬೇಕಾಗಿದೆ. ಕೆಕೆಆರ್ಗೆ ಆಲ್ ದಿ ಬೆಸ್ಟ್. ತಂಡ ಮತ್ತೂಮ್ಮೆ ಟ್ರೋಫಿಯನ್ನು ಮನೆಗೆ ತರಲಿ’ ಎಂದು ನೋರ್ಜೆ ಹಾರೈಸಿದ್ದಾರೆ.
ನಾಗರಕೋಟಿ ಮತ್ತು ಮಾವಿ ಬದಲು ಈಗಾಗಲೇ ಸಂದೀಪ್ ವಾರಿಯರ್ ಮತ್ತು ಕೆ.ಸಿ. ಕಾರಿಯಪ್ಪ ಅವರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ನೋರ್ಜೆ ಬದಲು ಯಾರು ಅವಕಾಶ ಪಡೆಯಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ