ಪ್ರಚೋದನಕಾರಿ ಭಾಷಣ ಮಾಡಿದ ಬಿಜೆಪಿ ಶಾಸಕ ಸಂಜಯ್ ಪಾಟೀಲ್
Team Udayavani, Apr 19, 2018, 4:34 PM IST
ಬೆಳಗಾವಿ: ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಮಾಡಿರುವ ಪ್ರಚೋದನಕಾರಿ ಭಾಷಣದ ವಿಡಿಯೋ ವೈರಲ್ ಆಗಿದ್ದು, ವಿಪಕ್ಷಗಳಿಂದ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.
ಸೂಳೆಬಾವಿ ಗ್ರಾಮದಲ್ಲಿ ಮತಪ್ರಚಾರದ ವೇಳೆ ಉಗ್ರ ಸ್ವರೂಪದ ಭಾಷಣ ಮಾಡಿರುವ ಶಾಸಕ ಸಂಜಯ್ ಪಾಟೀಲ್ ‘ಈ ಚುನಾವಣೆ ರೋಡ್ ಗಟಾರ ಅಭಿವೃದ್ದಿಯ ಕುರಿತಾಗಿದ್ದಲ್ಲ. ನಿಮಗೆ ರಾಮ ಮಂದಿರ ಬೇಕಾದರೆ ಬಿಜೆಪಿಗೆ ಮತ ಹಾಕಿ. ಸಂಜಯ್ ಪಾಟೀಲ್ ಅನ್ನುವುದನ್ನು ನೋಡಬೇಡಿ’ ಎಂದಿದ್ದಾರೆ.
‘ನೀವು ಟಿಪ್ಪು ಜಯಂತಿ ಬೇಕಾದ್ರೆ, ಬಾಬ್ರಿ ಮಸೀದಿ ಬೇಕಾದ್ರೆ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮತ ಹಾಕಿ . ಆವರು ಹೆಳ್ತಾರಾ.. ಮಂದಿರ ಕಟ್ತೇನೆ ಅಂತ, ಸಾಧ್ಯ ಇಲ್ಲ ಅವರು ಮಸೀದಿ ಕಟ್ಟುವುದು’ ಎಂದಿದ್ದಾರೆ.
‘ಯುವಕರು ನೆನಪಿಟ್ಟುಕೊಳ್ಳಿ, ಇದು ಹಿಂದೂ ಮತ್ತು ಮುಸ್ಲಿಂ ವಿಚಾರಗಳ ನಡುವಿನ ಚುನಾವಣೆ. ನಿಮಗೆ ಶಿವಾಜಿ ಮಹಾರಾಜ್, ಸಾಂಬಾಜಿ ಮಹಾರಾಜ್,ಲಕ್ಷ್ಮೀ ಗುಡಿಯಲ್ಲಿ ಪೂಜೆ ಮಾಡುವುದು ಬೇಕಾದರೆ ಬಿಜೆಪಿಗೆ ಮತ ಹಾಕಿ’ ಎಂದಿದ್ದಾರೆ. ಈ ಭಾಷಣ ಇದೀಗ ವಿವಾದಕ್ಕೆ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ