ಕುಟುಂಬ ರಾಜಕಾರಣ: ರಾಘವೇಂದ್ರ ಯಾರ ಮಗ ? ಸಿಎಂ ಪ್ರಶ್ನೆ
Team Udayavani, Apr 24, 2018, 12:05 PM IST
ಮೈಸೂರು : ಕೋನೆ ಕ್ಷಣದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿರುವುದು ಒಂದು ನಾಟಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ವರುಣಾದಲ್ಲಿ ವಿಜಯೇಂದ್ರ ಅಲ್ಲ, ಯಾರೇ ನಿಂತರೂ ಬಿಜೆಪಿ ಸೋಲು ಖಚಿತ ಎಂದರು.
ಕುಟುಂಬ ರಾಜಕಾರಣದಿಂದ ದೂರ ಉಳಿಯಲು ಹಿಂದೆ ಸರಿದರೆ ಎಂದು ಪ್ರಶ್ನಿಸಿದಾಗ ರಾಘವೇಂದ್ರ ಯಾರು?ಒಂದು ಬಾರಿ ಎಂಪಿ. ಒಂದು ಬಾರಿ ಎಂಎಲ್ಎ ಆಗಿದ್ದರಲ್ಲ ಅವರು ಯಾರಮಗ? ಯಡಿಯೂರಪ್ಪನವರ ಮಗ ಅಲ್ವಾ? ಇಲ್ಲ ಅವರ ಅಮ್ಮನ ಮಗನಾ? ಎಂದು ಪ್ರಶ್ನಿಸಿದರು.