ಕೈಗಾ ಸುತ್ತಮುತ್ತ ಹೆಚ್ಚಿದ ಕ್ಯಾನ್ಸರ್‌


Team Udayavani, Jun 23, 2018, 6:15 AM IST

kaiga-atomic-plant.jpg

ಕಾರವಾರ: ಕೈಗಾ ಅಣುಸ್ಥಾವರದ ಸುತ್ತ ಮುತ್ತಲ ಹಳ್ಳಿಗಳಲ್ಲಿ ಕ್ಯಾನ್ಸರ್‌ ಹೆಚ್ಚಿದೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ. ಮುಂಬೈನ ಟಾಟಾ ಮೆಮೂರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ ಅಧೀನದ ನುರಿತ ಸಿಬ್ಬಂದಿ 2010-13ರಲ್ಲಿ ಮಾಡಿದ ಸರ್ವೇ ವರದಿ 2018ರ ಮಾರ್ಚ್‌ನಲ್ಲಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದು, ಅದೀಗ
ಬಹಿರಂಗವಾಗಿದೆ.

ಕಾರವಾರ ತಾಲೂಕಿನಲ್ಲೇ 316 ಕ್ಯಾನ್ಸರ್‌ ರೋಗಿಗಳು ಇದ್ದಾರೆಂಬ ಅಂಶ ಹೊರ ಬಂದಿದ್ದು, ಯಲ್ಲಾಪುರ,
ಅಂಕೋಲಾ, ಜೋಯಿಡಾ ತಾಲೂಕಿನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಸೇರಿದಲ್ಲಿ ಸಾವಿರ ದಾಟಿದೆ. ಆದರೆ ಈ
ಸಂಗತಿಯನ್ನು ರಹಸ್ಯವಾಗಿ ಇಡಲಾಗಿದೆ.

ಕಳೆದ 5 ವರ್ಷಗಳಿಂದ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆ ಸಿಬ್ಬಂದಿ ಇಲ್ಲಿನ ಆರೋಗ್ಯ ಇಲಾಖೆಯ
ಅಧೀನ ಕಚೇರಿಯಲ್ಲಿ ಪ್ರತ್ಯೇಕ ಶಾಖೆ ತೆರೆದು ದಿನನಿತ್ಯ ಕಾರವಾರ ತಾಲೂಕಿನ ನಿರ್ದಿಷ್ಟ ಹಳ್ಳಿಗಳಿಗೆ ತೆರಳಿ
ಜನರ ಆರೋಗ್ಯದ ಸ್ಥಿತಿಗತಿಗಳನ್ನು ದಾಖಲಿಸುತ್ತಿದ್ದಾರೆ. ಅಲ್ಲದೆ, ಯಲ್ಲಾಪುರ ತಾಲೂಕಿನ ಕೈಗಾ ಸಮೀಪದ ಕೆಲ
ಹಳ್ಳಿಗಳು, ಅಂಕೋಲಾ, ಜೋಯಿಡಾ ತಾಲೂಕಿನ ಕೆಲ ಹಳ್ಳಿಗಳು ಸಹ ಈ ಸರ್ವೇಯಲ್ಲಿ ಸೇರಿವೆ. ಈ ಸಂಬಂಧದ
ವರದಿಯ ಪ್ರತಿಯನ್ನು ಆರು ತಿಂಗಳಿಗೆ ಒಮ್ಮೆ ಸರ್ಕಾರಕ್ಕೆ ಮತ್ತು ಟಾಟಾ ಮೆಮೋರಿಯಲ್‌ ಆಸ್ಪತ್ರೆಯ ಮುಂಬೈ
ಶಾಖೆಗೆ ಸಲ್ಲಿಸಲಾ ಗುತ್ತಿದೆ. ಸದಾನಂದಗೌಡರು ಮುಖ್ಯ ಮಂತ್ರಿಯಾಗಿದ್ದಾಗ ಪರಿಸರವಾದಿಗಳು ಪ್ರತ್ಯೇಕ ಸರ್ವೇಗೆ ಆಗ್ರಹಿಸಿದ್ದರು. ಸದಾನಂದಗೌಡರು ಮುಂಬೈನ ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಗೆ ಸರ್ವೇ ಜವಾಬ್ದಾರಿ ವಹಿಸಿದ್ದರು.

ಅಲ್ಲಿಂದ ಅಧ್ಯಯನ ನಡೆಯುತ್ತಲೇ ಇದೆ.ಕ್ಯಾನ್ಸರ್‌ ರೋಗಿಗಳ ಸಂಖ್ಯೆಯನ್ನು ಮಾತ್ರ ಬಹಿರಂಗ ಮಾಡದೆ ರಹಸ್ಯ
ಕಾಪಾಡಿಕೊಂಡು ಬರಲಾಗಿತ್ತು. ಆದರೆ ಇದೀಗ ಕಾರವಾರ ತಾಲೂಕಿನಲ್ಲೇ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಕಾರವಾರ ತಾಲೂಕು ಒಂದರಲ್ಲೇ 316 ಕ್ಯಾನ್ಸರ್‌ ರೋಗಿಗಳು ಪತ್ತೆಯಾಗಿದ್ದು,2010 -2018ರವರೆಗೆ ಕ್ಯಾನ್ಸರ್‌ ರೋಗಿಗಳ ಪ್ರಮಾಣ ಶೇ.200 ರಷ್ಟು ಹೆಚ್ಚಾಗಿದೆ ಎಂಬ ಅಂಶ ಹೊರ ಬಂದಿದೆ. ಇದಕ್ಕೆ ಕೈಗಾ ಅಣುಸ್ಥಾವರದ ವಿಕಿರಣ ಕಾರಣವೇ ಎಂಬ ಅಂಶ ಮಾತ್ರ ಖಚಿತವಾಗಿಲ್ಲ.

ಎಲ್ಲೆಲ್ಲಿ ಚಿಕಿತ್ಸೆ?: ಕಾರವಾರ ತಾಲೂಕಿನ 316 ಕ್ಯಾನ್ಸರ್‌ ರೋಗಿಗಳು ಬೆಂಗಳೂರು, ಚೆನ್ನೈ, ಮಣಿಪಾಲ, 
ಮಂಗಳೂರು,ಹುಬ್ಬಳ್ಳಿ, ಮುಂಬೈ, ಗೋವಾ ಸೇರಿ ವಿವಿಧ 30 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. 129 ಪುರುಷರು, 187 ಜನ ಮಹಿಳೆಯರಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ತಂಬಾಕು ಸೇವನೆ,ಗುಟ್ಕಾ, ಪಾನ್‌, ಅಡಕೆಯಿಂದ ಪುರುಷರಲ್ಲಿ ಕ್ಯಾನ್ಸರ್‌ಗೆ ಕಾರಣವಾಗಿದ್ದರೆ, ಮಹಿಳೆಯರಲ್ಲಿನ ಕ್ಯಾನ್ಸರ್‌ಗೆ ಬೇರೆಯದೇ ಕಾರಣವಿದೆ. ಚಿಪ್ಪೆಕಲ್ಲು, ಥಿಸರೇ, ಕಲ್ವಾ ಆಹಾರ ಸೇವನೆಯಿಂದ ಏನಾದರೂ ಕ್ಯಾನ್ಸರ್‌ ಬರುತ್ತಿದೆಯೇ ಎಂಬುದು ಅಧ್ಯಯನದಿಂದಷ್ಟೇ ತಿಳಿದು ಬರಬೇಕಿದೆ.

ಇತರ ದೇಶಗಳಲ್ಲಿ
ಅಣುಸ್ಥಾವರ ಘಟಕಗಳಿರುವ ಚೀನಾದ ಶಾಂಘೈ ನಗರ, ಜಪಾನ್‌ನ ಓಸಕಾ ನಗರ,ಫಿನ್‌ ಲ್ಯಾಂಡ್, ಬ್ರಿಟನ್‌ನ
ಆಕ್ಸ್‌ ಫ‌ರ್ಡ್‌, ಯುಎಸ್‌ಎ, ಫ್ರಾನ್ಸ್‌ನ ಹೌಟ್‌ರಿನ್‌ ನಗರಗಳಲ್ಲಿನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಗಮ ನಿಸಿದರೆ ಕಾರವಾರ ತಾಲೂಕಿನ ನಗರ, ಗ್ರಾಮೀಣ ಪ್ರದೇಶದಲ್ಲಿನ ಕ್ಯಾನ್ಸರ್‌ ರೋಗಿ ಗಳ ಪ್ರಮಾಣ ಕಡಿಮೆ ಎಂದು ಟಾಟಾ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಯ ಅಧ್ಯಯನ ಸಂಸ್ಥೆ ಹೇಳಿದೆ.

ನಿರಾಕರಣೆ
ಕೈಗಾ ಘಟಕದ ವಿಜ್ಞಾನಿಗಳು ಮಾತ್ರ ಅಣುವಿಕಿರಣವೇ ಇಲ್ಲ. ಇನ್ನು ಕೈಗಾದಿಂದ ಕ್ಯಾನ್ಸರ್‌ ಬರಲು ಹೇಗೆ ಸಾಧ್ಯ ಎಂದು ವಾದಿ ಸುತ್ತಲೇ ಇದ್ದಾರೆ. ಅತಿ ಹೆಚ್ಚು ಪ್ರಮಾಣದಲ್ಲಿ ಅಣುಸ್ಥಾವರ ಉತ್ಪಾದನೆ ಸಹ ವಿಕಿರಣ ಹೆಚ್ಚು ಹೊರಸೂಸಲು ಕಾರಣ ಎಂದು ಅಣು ವಿದ್ಯುತ್‌ ವಿರೋಧಿ ಪರಿಸರ ವಿಜ್ಞಾನಿಗಳು ಹೇಳುತ್ತಲೇ ಇದ್ದಾರೆ. ಈ ಬಗ್ಗೆ ಇದೀಗ ಆರೋಗ್ಯ ಸಚಿವರು, ಸರ್ಕಾರ ಮೌನ ಮುರಿಯಬೇಕಿದೆ.

– ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.