ಮಲೆನಾಡು ಭಾಗದ ಮನೆಗಳಲ್ಲಿ ಬಿರುಕು
Team Udayavani, Aug 25, 2018, 6:10 AM IST
ಚಿಕ್ಕಮಗಳೂರು: ಮಳೆ ಪ್ರಮಾಣ ಇಳಿಮುಖವಾಗಿದ್ದರೂ ಜಿಲ್ಲೆಯಲ್ಲಿ ಅನಾಹುತಗಳು ಮಾತ್ರ ಸಂಭವಿಸುತ್ತಲೇ ಇವೆ. ನಿರಂತರ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಆರಂಭವಾದ ಗುಡ್ಡ ಕುಸಿತ, ರಸ್ತೆ ಬಿರುಕು ಬಿಡೋದು ಇಂದಿಗೂ ಮುಂದುವರಿದಿದೆ.
ಇದರೊಂದಿಗೆ ಈಗ ಮಲೆನಾಡು ಪ್ರದೇಶದ ಹಲವು ಮನೆಗಳಲ್ಲಿ ಬಿರುಕು ಉಂಟಾಗುತ್ತಿದ್ದು,ಜನ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಮಲೆನಾಡು ಭಾಗಗಳಾದ ಕೊಪ್ಪ, ಮೂಡಿಗೆರೆ ಹಾಗೂ ಶೃಂಗೇರಿ ತಾಲೂಕುಗಳ ಕೆಲವೆಡೆ ಮನೆಗಳಲ್ಲಿ ಬಿರುಕು ಮೂಡುತ್ತಿ
ರುವ ಪ್ರಮಾಣ ಹೆಚ್ಚಾಗಿದೆ. ಕೊಪ್ಪ ತಾಲೂಕಿನ ಸೋಮೇಶ್ವರ ಖಾನ್, ಬಸ್ರಿಕಟ್ಟೆ, ಮೇಗುಂದ ಗ್ರಾಮಗಳ ಹಲವು ಮನೆಗಳ
ಗೋಡೆಗಳು ಹಾಗೂ ನೆಲ ಬಿರುಕು ಬಿಡುತ್ತಿವೆ. ಹಲವು ಮನೆಗಳಲ್ಲಿ ದೊಡ್ಡದಾಗಿಯೇ ನೆಲ ಬಾಯ್ಬಿಡುತ್ತಿದ್ದು, ಮನೆಯವರು ಆ ಕೊಠಡಿಗಳಲ್ಲಿನ ಸಾಮಾನು ಸರಂಜಾಮುಗಳನ್ನು ಹೊರಗಡೆ ಇಡಲು ಆರಂಭಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬೊಗಸೆ ಗ್ರಾಮದಲ್ಲಿ ಕೃಷ್ಣಯ್ಯ ಎನ್ನುವವರಿಗೆ ಸೇರಿದ ಮನೆಯ ಗೋಡೆ, ನೆಲ ಹಾಗೂ ಮುಂಭಾಗದಲ್ಲಿ ಬಿರುಕು ಬಿಟ್ಟಿದೆ. ಶೃಂಗೇರಿ ತಾಲೂಕಿನ ಹೆಗ್ಗಾರು, ಅಡಿಗೆಬೈಲು, ಹಿರೇಗದ್ದೆ ಗ್ರಾಮಗಳಲ್ಲಿಯೂ ಮನೆಗಳು ಬಿರುಕು ಬಿಟ್ಟಿರುವ ವರದಿಯಾಗಿದೆ.
ಕಳಸ-ಮಂಗಳೂರು ಸಂಚಾರ ಬಂದ್: ಕುದುರೆಮುಖ ಘಾಟ್ನ ತಿರುವೊಂದರಲ್ಲಿ ಲಾರಿ ಸಿಕ್ಕಿ ಹಾಕಿಕೊಂಡ ಪರಿಣಾಮ ಕಳಸ-ಮಂಗಳೂರು ರಸ್ತೆ ಸಂಚಾರ ಬಂದ್ ಆಗಿದೆ. ರಸ್ತೆಗೆ ಅಡ್ಡಲಾಗಿ ಲಾರಿ ಸಿಕ್ಕಿಕೊಂಡಿದ್ದು, ಬೇರೆ ವಾಹನಗಳು ಸಂಚರಿಸಲು ಸ್ಥಳವೇ ಇಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…