ನೆಲದ ಮೇಲಲ್ಲ, ಆಗಸದಲ್ಲೂ ಕನ್ನಡ ಭಾಷೆಯ ತಾತ್ಸಾರ


Team Udayavani, Nov 1, 2018, 6:00 AM IST

b-24.jpg

ಬೆಂಗಳೂರು: ಕನ್ನಡ ಭಾಷೆ ಎಂದರೆ ನಮ್ಮವರಿಗೆ ತಾತ್ಸಾರ ಎಂಬ ಮಾತು ಕೇವಲ ಭೂಮಿ ಮೇಲಲ್ಲ. ಆಕಾಶದಲ್ಲಿ ಹಾರಾಡುವ ವಿಮಾನದಲ್ಲಿಯೂ ಇದೆ! ಪ್ರಾದೇಶಿಕ ವಾಯುಯಾನದಲ್ಲಿ ಕನ್ನಡವೇ ಮೊಳಗುತ್ತಿಲ್ಲ! ಕೇಂದ್ರ ಸರ್ಕಾರ “ಉಡಾನ್‌’ ಯೋಜನೆಯಡಿ
ಪ್ರಾದೇಶಿಕವಾಗಿ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಅದರಂತೆ ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಇತರ ನಗರಗಳ ನಡುವೆ ಅನೇಕ ಖಾಸಗಿ ಕಂಪನಿ  ಗಳೂ ವಿಮಾನ ಹಾರಿಬಿಟ್ಟಿವೆ. ಆದರೆ, ಗಗನ ಸಖಿಯರು ಮಾತ್ರ ವಿಮಾನದಲ್ಲಿ ಕನ್ನಡವನ್ನೇ ಬಳಸುತ್ತಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳಲ್ಲಿ ಮಂಗಳೂರಿಗೆ ತೆರಳಬೇಕಿದ್ದರೆ, ಹಿಂದಿ, ಇಂಗ್ಲಿಷ್‌ ಅಥವಾ ಮಲಯಾಳಂನಲ್ಲಿ ಮಾತನಾಡುತ್ತಾರೆ. ಹುಬ್ಬಳ್ಳಿಗೆ ತೆರಳಿದರೆ, ಹಿಂದಿ,
ಇಂಗ್ಲಿಷ್‌ ಜೊತೆ ಮರಾಠಿ ಯಲ್ಲೂ ಮಾತಾಡುತ್ತಾರೆ. ಆದರೆ, ಕನ್ನಡ ಮಾತಾಡುವ ಗಗನಸಖಿ ಮಾತ್ರ ಕಾಣಿಸುತ್ತಲೇ ಇಲ್ಲ.
“ಪ್ರಯಾಣಿಕರು ನಮ್ಮೊಂದಿಗೆ ಯಾವ ಭಾಷೆ ಮಾತಾಡಬಹುದು?’ ಎಂದು ವಿಮಾನ ನೆಲದಿಂದ ಚಿಮ್ಮುವ ಮೊದಲು 
ಗಗನಸಖೀಯರು, ಪ್ರಯಾಣಿಕರಿಗೆ ಸೂಚನೆ ನೀಡುವುದು ವಾಡಿಕೆ. ಇಂಗ್ಲಿಷ್‌, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ 
ನ್ನಷ್ಟೇ ಅವರು ಆ ಕ್ಷಣ ಆಯ್ಕೆಯಾಗಿ ಪ್ರಯಾಣಿಕರ ಮುಂದಿಡುತ್ತಾರೆ.

ಕೇಂದ್ರಕ್ಕೆ ಮನವಿ ಪತ್ರ: ಕನ್ನಡ ಕುರಿತ ವಿಮಾನಯಾನ ಸಂಸ್ಥೆಗಳ ಈ ನಿರ್ಲಕ್ಷದ ಬಗ್ಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಕನ್ನಡ ಗ್ರಾಹಕರ ಕೂಟವು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರವನ್ನೂ ಬರೆದಿದೆ. ದೇಶೀಯವಾಗಿ ಸೇವೆ ನೀಡುವ ವಿಮಾನಗಳಲ್ಲಿ, ಪ್ರಾದೇಶಿಕ ಭಾಷೆ ಬಳಕೆ ಕಡ್ಡಾಯಗೊಳಿಸುವಂತೆ ಒತ್ತಾಯಿಸಿವೆ. ಅಲ್ಲದೆ, ರಾಜ್ಯದ ಸಂಸದರ ಗಮನಕ್ಕೂ ಈ
ವಿಚಾರವನ್ನು ತಂದಿದ್ದಾರೆ.

ವಿದೇಶಿ ವಿಮಾನಗಳಲ್ಲಿ ಕಂಡ ಕನ್ನಡ ಇಲ್ಲಿಲ್ಲ!
ಸಿಂಗಾಪುರದ ಕ್ಯಾಪೆ ಪೆಸಿಫಿಕ್‌, ಬ್ರಿಟೀಷ್‌ ಏರ್‌ವೆಸ್‌, ಫ್ರಾನ್ಸ್‌ನ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಗಳೂ ಕನ್ನಡದಲ್ಲಿಯೇ ಮೆನು ನೀಡುತ್ತಿವೆ. ಆದರೆ, ಕರುನಾಡಿನ ಆಗಸದಲ್ಲೇ ಕನ್ನಡ ಕಾಣಿಸುತ್ತಿಲ್ಲ 

ಆನ್‌ಲೈನ್‌ ಅಭಿಯಾನ
ವಿಮಾನ ಯಾನ ಸಂಸ್ಥೆಗಳ ಕನ್ನಡ ನಿರ್ಲಕ್ಷ್ಯ ವಿರುದ್ಧ ಕನ್ನಡ ಗ್ರಾಹಕರ ಕೂಟದ ಸದಸ್ಯರು, “ಸರ್ವ್‌ ಇನ್‌ ಮೈ ಲಾಂಗ್ವೇಜ್‌’ ಹೆಸರಿನಲ್ಲಿ ಆನ್‌ಲೈನ್‌ ಅಭಿಯಾನ ಆರಂಭಿಸಿದ್ದಾರೆ. ಇದರೊಂದಿಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಬನವಾಸಿ ಬಳಗವೂ ಈ ಬಗ್ಗೆ ಟ್ವಿಟರ್‌ ಅಭಿಯಾನ ಆರಂಭಿಸಲು ನಿರ್ಧರಿಸಿದೆ.

ಈಗಿನ ತಂತ್ರಜ್ಞಾನ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅವರ ಮಾತೃ ಭಾಷೆಯಲ್ಲಿಯೇ ಕೇಳಿಸುವ ತಂತ್ರಜ್ಞಾನ ಇದೆ.
ವಿಮಾನಯಾನ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಗಬೇಕು. 

ಅರುಣ್‌ ಜಾವಗಲ್‌, ಕನ್ನಡ ಗ್ರಾಹಕರ ಕೂಟ

ಶಂಕರ್ ಪಾಗೋಜಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.