ಹಣ ಹೊಂದಿಸಲಾಗದೇ ಸ್ಥಗಿತಗೊಳ್ಳಲಿದ್ದ ಮದುವೆಗೆ ಸಹಾಯ ಮಾಡಿದ ಆರಕ್ಷಕರು
Team Udayavani, Nov 10, 2018, 6:20 AM IST
ಚಾಮರಾಜನಗರ: ಖರ್ಚು, ವೆಚ್ಚಗಳಿಗೆ ಹಣವನ್ನು ಹೊಂದಿಸಲಾಗದೇ ಮದುವೆಯನ್ನೇ ನಿಲ್ಲಿಸಲು ವಧುವಿನ ಕಡೆಯವರು
ಮುಂದಾಗಿದ್ದಾಗ ನಗರದ ಪೂರ್ವ ಠಾಣೆ ಪೊಲೀಸರು ಹಣದ ನೆರವು ನೀಡಿ ಮದುವೆ ನಡೆಯಲು ಸಹಕರಿಸಿದ ಪ್ರಸಂಗ ನಡೆದಿದೆ.
ತಾಲೂಕಿನ ಜ್ಯೋತಿಗೌಡನಪುರದ ಸಿದ್ದರಾಜಶೆಟ್ಟಿ ಪುತ್ರಿ ಅಂಬಿಕಾ ಹಾಗೂ ತಮಿಳುನಾಡಿನ ತಾಳವಾಡಿ ಪಿರ್ಕಾದ ಪಾಳ್ಯ ಗ್ರಾಮದ ರಾಜಣ್ಣನ ಪುತ್ರ ರವೀಂದ್ರನಿಗೆ ನ.8 ಮತ್ತು 9ರಂದು ವಿವಾಹ ನಿಶ್ಚಯ ವಾಗಿತ್ತು.
ತೆರಕಣಾಂಬಿಯ ವೆಂಕಟೇಶ್ವರ ಭವನದಲ್ಲಿ ವಿವಾಹ ನಡೆಸಲು ನಿಶ್ಚಯಿಸಿ ಲಗ್ನ ಪತ್ರಿಕೆ ಮುದ್ರಿಸಿ ನೆಂಟರಿಷ್ಟರಿಗೆ ಆಹ್ವಾನಿಸಲಾಗಿತ್ತು.
ಮದುವೆ ಹತ್ತಿರ ಬರುತ್ತಿದ್ದಂತೆ 2 ಲಕ್ಷ ರೂ. ಸಾಲ ಕೊಡುತ್ತೇನೆಂದು ಹೇಳಿದ್ದ ವ್ಯಕ್ತಿ ಕೊನೇ ಘಳಿಗೆಯಲ್ಲಿ ಕೈಕೊಟ್ಟಿದ್ದ. ಸಾಲದ ಹಣ ದೊರೆಯದ ಹಿನ್ನೆಲೆಯಲ್ಲಿ ನಿಗದಿತ ದಿನದಂದು ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸಿದ್ದರಾಜಶೆಟ್ಟಿ ಕೈಚೆಲ್ಲಿದ್ದರು ಎನ್ನಲಾಗಿದೆ.
ದಿಢೀರ್ ಬೆಳವಣಿಗೆಯಿಂದ ಕಂಗಾಲಾದ ವರ ರವೀಂದ್ರ ನಗರದ ಪೂರ್ವ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ.
ಸಬ್ಇನ್ಸ್ಪೆಕ್ಟರ್ ಪುಟ್ಟಸ್ವಾಮಿ, ವಧುವಿನ ಪಾಲಕರು ಹಾಗೂ ಬಂಧುಗಳನ್ನು ಕರೆಸಿ ವಿಚಾರಿಸಿದರು. ಕೇವಲ ಮದುವೆ ದಿನದ
ಊಟದ ಖರ್ಚಿಗೆ ಹಣ ಇಲ್ಲ ಎಂಬ ಕಾರಣಕ್ಕೆ ಮದುವೆ ನಿಲ್ಲಿಸುವುದು ಬೇಡ. ಹಣ ಹೊಂದಿಸಿ ಕೊಡುತ್ತೇವೆ, ಅದೇ ಛತ್ರದಲ್ಲಿ ನಿಗದಿತ ದಿನವೇ ಮದುವೆ ಮಾಡಿಕೊಳ್ಳಬೇಕು ಎಂದು ತಮ್ಮ ಸ್ವಂತ ಖರ್ಚಿನಲ್ಲಿ 20 ಸಾವಿರ ರೂ.ಗಳನ್ನು ವಧುವಿನ ತಂದೆಗೆ ನೀಡಿದರು.
ಬಳಿಕ ತಮ್ಮ ಸಿಬ್ಬಂದಿಗಳಿಂದ ಕೈಲಾದಷ್ಟು ಹಣ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು. ಇದರಿಂದ ಠಾಣೆಯಲ್ಲಿಯೇ ಸುಮಾರು ಅಡುಗೆ ಸಾಮಗ್ರಿಗಳಿಗೆ ಆಗುವಷ್ಟು ಹಣ ಹೊಂದಿಕೆಯಾಯಿತು. ಅಲ್ಲದೇ ಮದುವೆ ದಿನವಾದ ಶುಕ್ರವಾರ ಸಬ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ತೆರಕಣಾಂಬಿಗೆ ತೆರಳಿ ನೂತನ ವಧು ವರರಿಗೆ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ