ಮಂಗನ ಕಾಯಿಲೆ ತಡೆಗೆ ಬಂತು ಹೊಸ ಮದ್ದು! 


Team Udayavani, Jan 30, 2019, 12:30 AM IST

e-18.jpg

ಶಿವಮೊಗ್ಗ: ಮಲೆನಾಡನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಹಾಗೂ ಕರಾವಳಿಯ ಕೆಲ ಭಾಗಗಳಲ್ಲಿ ಆತಂಕ ಸೃಷ್ಟಿಸಿರುವ ಮಂಗನ ಕಾಯಿಲೆ ತಡೆಗೆ ಹೊಸ ಔಷಧವೊಂದು ಸಿದ್ಧವಾಗಿದೆ. ಕಾಯಿಲೆ ಹರಡೋದನ್ನು ತಡೆಯಲು ಮದ್ದು ಕಂಡು ಹಿಡಿಯುವಲ್ಲಿ ಯುವಕನೊಬ್ಬ ಯಶಸ್ವಿಯಾಗಿದ್ದು, ಆಯುಷ್‌ ಇಲಾಖೆ ಪ್ರಮಾಣ ಪತ್ರ ದೊರೆತರೆ ಹೊಸ ಮದ್ದು ಜನರಿಗೆ ಸಿಗುವ ಕಾಲ ದೂರವಿಲ್ಲ.
ಮಲೆನಾಡಿನ ಬಹುಮುಖ್ಯ ಬೆಳೆಯಾದ ಅಡಕೆಯಿಂದ ಚಹಾಪುಡಿ ಸೇರಿ ಹಲವು ಹೊಸ ವಸ್ತುಗಳನ್ನು ಕಂಡುಹಿಡಿದು ಸಫಲರಾಗಿರುವ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿವೇದನ್‌ ನೆಂಪೆ ಈಗ ಮಂಗನಕಾಯಿಲೆ ತಡೆಗೆ ಔಷಧ ಕಂಡುಹಿಡಿದಿದ್ದಾರೆ.

ಉಣ್ಣೆ ಕಡಿತಕ್ಕೆ ತಡೆ: ಈ ಕಾಯಿಲೆ ಉಣ್ಣೆ (ಉಣುಗು) ಕಚ್ಚುವುದರಿಂದ ಹರಡಲಿದ್ದು, ಮನುಷ್ಯನಿಗೆ ಉಣ್ಣೆ ಕಚ್ಚುವುದನ್ನು ತಡೆದರೆ ರೋಗ ಹರಡಲು ಸಾಧ್ಯವೇ ಇಲ್ಲ. ಉಣ್ಣೆ ಕಚ್ಚದಂತೆ ತಡೆಯಲು ಈಗಾಗಲೇ ಆರೋಗ್ಯ ಇಲಾಖೆಯಿಂದ ಡಿಎಂಪಿ ಎಣ್ಣೆ 
ಕೊಡಲಾಗುತ್ತಿದೆ. ಆದರೆ ಇದರ ಲಭ್ಯತೆ ಹಾಗೂ ಪರಿಣಾಮಗಳು ವ್ಯತಿರಿಕ್ತವಾಗಿರುವುದರಿಂದ ಬಳಕೆ ಪ್ರಮಾಣ ಕಡಿಮೆ. ಅನಿವಾರ್ಯವಾಗಿ ಬಳಸಿದರೂ ಚರ್ಮದ ಸಮಸ್ಯೆ, ಇತರೆ ವ್ಯಾಧಿಗಳು ಕಾಣಿಸಿಕೊಳ್ಳುವುದರಿಂದ ಜನ ಭಯದಿಂದಲೇ ಬಳಸುತ್ತಾರೆ. ಇದನ್ನು ಅರಿತ ಯುವಕ ಗಿಡಮೂಲಿಕೆಗಳಿಂದ ಔಷಧ (ಆಯಿಂಟ್‌ಮೆಂಟ್‌) ತಯಾರಿಸಿ ಅದನ್ನು ಬಳಸಿ ಯಶಸ್ವಿಯಾಗಿದ್ದಾನೆ.

ಏನಿದು ಮದ್ದು ?: ಥೈಮೋಕ್ವಿನನ್‌(thymoquinone) ಎಂಬ ಔಷಧಿ ಉಣ್ಣೆಯನ್ನು ಹತ್ತಿರಕ್ಕೆ ಬರದಂತೆ ತಡೆಯಲಿದೆ. ಈ ಥೈಮೋಕ್ವಿನನ್‌ ಎಂಬ ಔಷಧಿ ಮಲೆನಾಡು ಭಾಗದಲ್ಲಿ ಸಿಗುವ ಕಪ್ಪು ಜೀರಿಗೆ ಸಂಸ್ಕರಿಸಿದರೆ ಸಿಗಲಿದೆ. ಇದರ ಬಗ್ಗೆ ಕಾಲೇಜು
ದಿನಗಳಲ್ಲೇ ಸಂಶೋಧನೆ ನಡೆಸಿದ್ದ ನಿವೇದನ್‌ ಈಬಾರಿ ಮಹಾಮಾರಿ ಮಂಗನಕಾಯಿಲೆ ಆರ್ಭಟ ಹೆಚ್ಚಾಗುತ್ತಿದ್ದಂತೆ ಮತ್ತೆ ಪರೀಕ್ಷೆಗಿಳಿದು ಪ್ರಾಥಮಿಕ ಹಂತದಲ್ಲಿ ಪಾಸಾಗಿದ್ದಾನೆ. ಕಪ್ಪು ಜೀರಿಗೆ citronella (ಥೈಮೋಕ್ವಿನನ್‌) ಜತೆ ಮಾಮೂಲಿ ಜೀರಿಗೆಯನ್ನು
ಸಂಸ್ಕರಿಸಿ ಇದಕ್ಕೆ ಬಳಸಲಾಗುತ್ತಿದೆ. ಜೆಲ್‌ ರೂಪದಲ್ಲಿ ಇರುವ ಅದನ್ನು ಮೈ, ಕೈಗೆ ಸವರಿಕೊಳ್ಳಬಹುದಾಗಿದೆ. 

ಸೊಳ್ಳೆಗೂ ಮದ್ದು: ಸರಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿರುವ ಡಿಎಂಪಿ ಆಯಿಲ್‌ ಮೂಲತಃ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಬಳಕೆಯಾಗುತ್ತಿತ್ತು. ಇದನ್ನು ಉಣ್ಣೆಗಳ ನಿಯಂತ್ರಣಕ್ಕೂ ಬಳಸಲಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯುವಕ ಉಣ್ಣೆ ಜತೆ
ಸೊಳ್ಳೆಗಳನ್ನೂ ನಿಯಂತ್ರಿಸಲು ಅದಕ್ಕೆ ಸಿಟ್ರೋನೆಲ್ಲ (ಸೊಳ್ಳೆಗಳನ್ನು ದೂರವಿಡುವ ಎಣ್ಣೆ) ಮಿಕ್ಸ್‌ ಮಾಡಿದ್ದಾನೆ. ಸಿಟ್ರೋನೆಲ್ಲ ಎಣ್ಣೆಯು ನೈಸರ್ಗಿಕವಾಗಿ ಸಿಗುವ ಹುಲ್ಲೆಣ್ಣೆಯಿಂದ ಸಂಸ್ಕರಿತವಾದದ್ದು.

ಸಂಶೋಧನೆಯಲ್ಲಿ ಯಶಸ್ವಿ: ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ನಿವೇದನ್‌ ನೆಂಪೆ ಕಾಲೇಜು ದಿನಗಳಲ್ಲಿ ಮಲೆನಾಡನ್ನು ಬಾ ಧಿಸುತ್ತಿರುವ ಮಂಗನ ಕಾಯಿಲೆ, ಹಂದಿಗೋಡು ಕಾಯಿಲೆ ಬಗ್ಗೆ ಸಂಶೋಧನೆ ಕೈಗೊಂಡು ಸ್ವಲ್ಪಮಟ್ಟಿನ ಯಶಸ್ಸು ಕಂಡಿದ್ದರು. ಈ ವರ್ಷ ಹಳೆ ಸಂಶೋಧನೆಗಳಿಗೆ ಮರುಚಾಲನೆ ನೀಡಿ ಯಶಸ್ಸು ಕಂಡಿದ್ದಾರೆ. ಮನೆಯ ಹಿರಿಯರು ಹೇಳುತ್ತಿದ್ದ ವಿಷಯಗಳೇ ಇವರ ಸಂಶೋಧನೆಗೆ ಸ್ಫೂರ್ತಿಯಾಗಿವೆ. ಅಲ್ಲದೇ ಥೈಮೋಕ್ವಿನನ್‌ ಔಷಧದ ಬಗ್ಗೆ ಈಗಾಗಲೇ ಸಾವಿರಾರು ಸಂಶೋಧನೆಗಳಾಗಿವೆ. ಇದನ್ನು ನೇರವಾಗಿ ತಿನ್ನಬಹುದು. ಮುಖಕ್ಕೂ ಹಚ್ಚಬಹುದು ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುತ್ತಾರೆ ನಿವೇದನ್‌.

ಮಲೆನಾಡಿನ ಕೆಲ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಬಗ್ಗೆ ಹೆಚ್ಚಿನ ಸಂಶೋಧನೆಗಳಾಗಿಲ್ಲ. ವೈರಸ್‌ ವಿರುದಟಛಿ ಔಷಧಿ ಕಂಡುಹಿಡಿಯುವಷ್ಟು ನಮ್ಮಲ್ಲಿ ಪರಿಕರಗಳಿಲ್ಲ. ಉಣ್ಣೆ ಮೂಲಕ ಹರಡುವ ಕಾಯಿಲೆ ಆಗಿರುವುದರಿಂದ ಅದು ಕಡಿಯದಂತೆ ಮಾಡಲು ಔಷಧ ಕಂಡುಹಿಡಿಯಲಾಗಿದೆ. ಆಯುಷ್‌ ಇಲಾಖೆ ಅನುಮತಿ ಕೊಟ್ಟರೆ ಉಚಿತವಾಗಿ ವಿತರಿಸಲಾಗುವುದು.
● ನಿವೇದನ್‌ ನೆಂಪೆ, ಯುವ ವಿಜ್ಞಾನಿ

● ಶರತ್‌ ಭದ್ರಾವತಿ

ಟಾಪ್ ನ್ಯೂಸ್

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.