ತಾರಾ ಮನದ ಮಾತು


Team Udayavani, Aug 17, 2018, 6:00 AM IST

c-33.jpg

ಸಾವಿತ್ರಿಬಾಯಿ ಫ‌ುಲೆ
– ಇವರು ದೇಶದ ಮೊದಲ ಶಿಕ್ಷಕಿ. ಅಷ್ಟೇ ಅಲ್ಲ, ದಮನಿತರ ಪರ ಮೊದಲ ಧ್ವನಿಯಾದವರು.  ಮೊದಲ ಮಹಿಳಾ ಹೋರಾಟಗಾತಿಯೂ ಹೌದು. ಇವರ ಬದುಕಿನ ಮೌಲ್ಯ, ಸಾಮಾಜಿಕ ಹೋರಾಟ ಕುರಿತು ನಿರ್ದೇಶಕ ವಿಶಾಲ್‌ ರಾಜ್‌, “ಸಾವಿತ್ರಿಬಾಯಿ ಫ‌ುಲೆ’ ಹೆಸರಿನ ಚಿತ್ರ ಮಾಡಿದ್ದಾರೆ. ಇತ್ತೀಚೆಗೆ ಪ್ರದರ್ಶನ ಏರ್ಪಡಿಸಿದ್ದ ವಿಶಾಲ್‌ ರಾಜ್‌, ತಂಡದೊಂದಿಗೆ ಮಾತುಕತೆ ನಡೆಸಿದರು.

“ಈ ರೀತಿಯ ಚಿತ್ರ ಮಾಡುವಾಗ ದೊಡ್ಡ ಸವಾಲುಗಳು ಎದುರಾಗುತ್ತವೆ. ನನಗೆ ಎದುರಾಗಿದ್ದು, ಮೊದಲು ಈಗಿನ ಕಲರ್‌ಫ‌ುಲ್‌ ಜಗತ್ತಿನಲ್ಲಿ, ಆ ಕಾಲಘಟ್ಟದ ಚಿತ್ರವನ್ನು ಕಟ್ಟಿಕೊಡಬೇಕಾಗಿದ್ದು. ಆಗಿದ್ದ ತಾಣ, ಕಾಸ್ಟೂಮ್ಸ್‌, ಪರಿಕರ, ಪಾತ್ರ ಎಲ್ಲವನ್ನೂ ನೈಜ ಎಂಬಂತೆ ಬಿಂಬಿಸಬೇಕಿತ್ತು. ಇಂತಹ ಚಿತ್ರಕ್ಕೆ ಕೈ ಹಾಕಿದಾಗ ನಿರ್ಮಾಪಕರು ಹಿಂದೆ ಮುಂದೆ ನೋಡಲಿಲ್ಲ. ಧೈರ್ಯವಾಗಿ ಮಾಡೋಣ ಅಂತ ಒಪ್ಪಿದರು. ಡಾ.ಸರಜೂ ಕಾಟ್ಕರ್‌ ಅವರ ಕಾದಂಬರಿ ಇಟ್ಟುಕೊಂಡು ಸಿನಿಮಾ ಮಾಡಿದೆ. ಇನ್ನು, ಜ್ಯೋತಿಬಾ ಫ‌ುಲೆ ಅಂದಾಗ ಕಣ್ಣೆದುರಿಗೆ ಬಂದದ್ದು ಸುಚೇಂದ್ರ ಪ್ರಸಾದ್‌. ಆ ಪಾತ್ರಕ್ಕೆ ಅವರು ಓಕೆಯಾದರು. ಆದರೆ, ನಾನು ಮಾಡುತ್ತಿರುವುದು ಸಾವಿತ್ರಿಬಾಯಿ ಫ‌ುಲೆ ಚಿತ್ರ. ಆ ಪಾತ್ರವನ್ನು ತೂಗಿಸಿಕೊಂಡು ಹೋಗುವ ನಟಿ ಬೇಕಿತ್ತು. ಕಣ್ಣಿಗೆ ಕಂಡದ್ದೇ ತಾರಾ ಮೇಡಮ್‌. ಅವರಿಗೆ ಕಥೆ ವಿವರಿಸಿದೆ, ಕಾಟ್ಕರ್‌ ಕಥೆಯನ್ನೂ ಓದಿದರು. ಆಮೇಲೆ ಇದು ನಾರ್ಮಲ್‌ ಪಾತ್ರವಲ್ಲ. ಕಷ್ಟ ಅಂದರು. ಮರುದಿನ ಅವರೇ ಕರೆದು, ಮಾಡೋಣ ಅಂದರು. ಈಗ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಸೊಗಸಾಗಿ ಬಂದಿದೆ. ಒಳ್ಳೆಯ ಮೆಚ್ಚುಗೆ ಪಡೆದಿದೆ. ಅದಕ್ಕೆ ತನ್ನ ತಂಡ ಕಾರಣ’ ಅಂದರು ವಿಶಾಲ್‌ರಾಜ್‌.

ಸುಚೇಂದ್ರ ಪ್ರಸಾದ್‌ಗೆ ಈ ಚಿತ್ರ ಮಾಡುವಾಗ, ಆ ಶತಮಾನದ ದಶಕಗಳ ಕಲ್ಪನೆ ಕಣ್ಮುಂದೆ ಬಂತಂತೆ. “ಈ ಚಿತ್ರ ಅನೇಕ ಪ್ರಶ್ನೆಗಳಿಗೆ ಉತ್ತರವಾಗುತ್ತೆ. ಇಲ್ಲಿ ಎಲ್ಲರ ಶ್ರಮ ಎದ್ದು ಕಾಣುತ್ತದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಪ್ರೀತಿಗೆ ಬೀಳುತ್ತಾರೆ. ಅಂತಹ ಅಂಶಗಳು ತುಂಬಿವೆ. ಸಮಾಜಕ್ಕೊಂದು ಸಂದೇಶ ಸಾರುವ ಸಿನಿಮಾ ಇದಾಗಿರುವುದರಿಂದ ಎಲ್ಲರಿಗೂ ತಲುಪುವ ಕೆಲಸವಾಗಬೇಕು’ ಎಂದರು ಸುಚೇಂದ್ರ ಪ್ರಸಾದ್‌.

ತಾರಾ ಅವರಿಗೆ ಈ ಚಿತ್ರ ಸಿಕ್ಕಿದ್ದು, ಸುಚೇಂದ್ರ ಪ್ರಸಾದ್‌ ಅವರಿಂದವಂತೆ. “ನಾವಿಬ್ಬರು “ಭರ್ಜರಿ’ ಚಿತ್ರದಲ್ಲಿ ಒಟ್ಟಿಗೆ ನಟಿಸುವಾಗ, ಈ ಕಥೆ ಕುರಿತು ಚರ್ಚೆ ಮಾಡಿದ್ದೆವು. ಅದನ್ನು ಸಾಕಾರಗೊಳಿಸಿದ್ದು ವಿಶಾಲ್‌ ರಾಜ್‌. ಅದಕ್ಕೆ ಬೆಂಬಲವಾಗಿದ್ದು ನಿರ್ಮಾಪಕರು. ನಿಜ ಹೇಳುವುದಾದರೆ ನಾನು ಈ ಪಾತ್ರ ಮಾಡಲು ಪುಣ್ಯ ಮಾಡಿದ್ದೆ. ನಾವು ನೋಡದೇ ಇರುವ ಪಾತ್ರ ನಿರ್ವಹಿಸುವುದು ಕಷ್ಟ. ಡಾ.ಸರಜೂ ಕಾಟ್ಕರ್‌ ಕಾದಂಬರಿ ಓದಿದಾಗ, ಎಲ್ಲವೂ ಅರ್ಥವಾಯ್ತು. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಸಿನಿಮಾ ಬಂದಿದೆ. ಚಿತ್ರದ ಪಾತ್ರಕ್ಕಾಗಿ ಪುಣೆವರೆಗೂ ಹೋಗಿ ಬಂದಿದ್ದೇನೆ. ಇದು ಕಾಂಟ್ರವರ್ಷಿಯಲ್‌ ಸಬ್ಜೆಕ್ಟ್. ಜಾತಿ, ಧರ್ಮದ ನಡುವಿನ ಹೋರಾಟವಿದೆ. ಅದರಲ್ಲೂ ಒಂದು ಸತ್ವ ಇದೆ ಎಂಬುದೇ ಹೈಲೆಟ್‌’ ಅಂದರು ತಾರಾ. ನಿರ್ಮಾಪಕ ಬಸವರಾಜ್‌ ಭೂತಾಳಿ ಅವರು ಮೂಲ ರೈತ ಕುಟುಂಬದವರು. ನಾಟಕ ಆಸಕ್ತಿ ಇಟ್ಟುಕೊಂಡಿದ್ದ ಅವರು, ಕಾಟ್ಕರ್‌ ಕಥೆ ಓದಿ, ಸಿನಿಮಾ ಮಾಡುವ ಮನಸ್ಸು ಮಾಡಿದ್ದಾಗಿ ಹೇಳಿಕೊಂಡರು. ಚಿತ್ರಕ್ಕೆ ನಾಗರಾಜ್‌ ಆದವಾನಿ ಛಾಯಾಗ್ರಹಣವಿದೆ. ಸಂಗೀತ ಕಟ್ಟಿ ಕುಲಕರ್ಣಿ ಸಂಗೀತ ನೀಡಿದ್ದಾರೆ. ಕೆಂಪರಾಜು ಸಂಕಲನ ಮಾಡಿದ್ದಾರೆ. ಶಿರೀಷ್‌ ಜೋಶಿ ಸಂಭಾಷಣೆ ಬರೆದಿದ್ದಾರೆ.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.