ಕೋಸ್ಟಲ್‌ವುಡ್‌ನ‌ಲ್ಲಿ ಇಲ್ಲೊಕ್ಕೆಲ್‌ಗೆ ರೆಡಿ !


Team Udayavani, Mar 21, 2019, 7:07 AM IST

21-march-9.jpg

ತುಳುನಾಡು ಎನ್ನುವುದು ಸಂಸ್ಕೃತಿ, ಆಚಾರ ಮತ್ತು ಕಲೆಗಳ ಬೀಡು. ಆದರೆ ಈಗ ತುಳುನಾಡಿನ ಅನೇಕ ಸಂಪ್ರದಾಯಗಳು ಮತ್ತು ವಸ್ತುಗಳು ನಶಿಸಿ ಹೋಗುತ್ತಿವೆ. ಮುಂದಿನ ಜನಾಂಗಕ್ಕೆ ತುಳುನಾಡಿನ ಸಂಸ್ಕೃತಿ- ಸಂಸ್ಕಾರಗಳನ್ನು ಹೇಳಿಕೊಡುವ, ತೋರಿಸಿಕೊಡುವ ಅನಿವಾರ್ಯತೆಗೆ ನಾವು ಒಳಗಾಗಿದ್ದೇವೆ.  ಅಚ್ಚರಿ ಎಂದರೆ ಮರೆತುಹೋದ ತುಳುನಾಡಿನ ಸಂಸ್ಕೃತಿ- ಸಂಸ್ಕಾರದ ವಿಶೇಷತೆಗಳನ್ನು ನೆನಪು ಮಾಡುವ ನೆಲೆಯಲ್ಲಿ ತುಳುವಿನ ‘ಇಲ್ಲೊಕ್ಕೆಲ್‌’ ಸಿನೆಮಾ ವಿನೂತನ ಸಾಹಸಕ್ಕೆ ಕೈ ಹಾಕಿದೆ.

ನಶಿಸಿ ಹೋಗುತ್ತಿರುವ ತುಳುವರ ಸಂಪ್ರದಾಯ, ವಸ್ತುಗಳ ಬಗ್ಗೆ ಮನಮುಟ್ಟುವಂತೆ ಅದ್ಭುತ ಸಾಹಿತ್ಯ ಮತ್ತು ಸಂಗೀತದೊಂದಿಗೆ ‘ಇಲ್ಲೊಕ್ಕೆಲ್‌’ ಸಿನೆಮಾದಲ್ಲಿ ಹಾಡು ಮೂಡಿಬಂದಿದೆ. ‘ಮುರ್ಕುದು ಪೋಪುಂಡುಯೇ ಮಾತಾ’ ಎಂಬ ಚರಣದ ಈ ಹಾಡು ಸದ್ಯ ತುಳುನಾಡಿನಲ್ಲಿ ವಿನೂತನ ಟ್ರೆಂಡ್‌ ಹುಟ್ಟುಹಾಕಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಾಕಷ್ಟು ವೈರಲ್‌ ಆಗಿದೆ. ನಿಜಕ್ಕೂ ತುಳುನಾಡಿನ ಮರೆತುಹೋದ ಒಂದೊಂದು ನೆನಪುಗಳನ್ನು ಇಂದು ಕಾಡುವಂತೆ ಮಾಡಿದೆ.

ಡಾ| ಸುರೇಶ್‌ ಚಿತ್ರಾಪು ಅವರ ಸಾಹಿತ್ಯಕ್ಕೆ ರಾಜ್‌ ಷಾ ಅವರ ಅದ್ಬುತ ಸಂಗೀತ ಮತ್ತು ಮೈಮ್‌ ರಾಮ್‌ದಾಸ್‌, ಡಾ| ಸುರೇಶ್‌ ಚಿತ್ರಾಪು, ರಾಜ್‌ ಷಾ ಹಾಗೂ ವೇಲು ಅವರ ಸಿರಿಕಂಠದಲ್ಲಿ ಮೂಡಿಬಂದ ಈ ಹಾಡು ಕೇಳುಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಹಾಡಿಗೆ ಶಾನಾಯಿಯಲ್ಲಿ ಬಾಲೇಶ್‌, ಟೇಪ್‌ ಮತ್ತು ಪೆರ್ಕಶ್‌ನಲ್ಲಿ ಡಿ. ವಿಕ್ಕಿ ಮತ್ತು ನವೀನ್‌ ರಾವ್‌, ಮ್ಯಾಂಡೊಲಿನ್‌ನಲ್ಲಿ ಸೀನು, ಕೀಬೋರ್ಡ್‌ನಲ್ಲಿ ರಾಜ್‌ ಷಾ ಕೈಜೋಡಿಸಿದ್ದಾರೆ.

ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌ ವಾಮಂಜೂರ್‌, ಅದ್ವಿತಿ ಶೆಟ್ಟಿ, ಅಪ್ಪೆ ಟೀಚರ್‌ ಖ್ಯಾತಿಯ ನಿರೀಕ್ಷೆ ಶೆಟ್ಟಿ, ಭವ್ಯಾ ಗೌಡ, ವಿಸ್ಮಯ ವಿನಾಯಕ್‌, ವಿಜೆ ವಿನೀತ್‌, ಪಿಲಿಬೈಲು ಯಮುನಕ್ಕ ಖ್ಯಾತಿಯ ಚಂದ್ರಕಲಾ ಮೋಹನ್‌, ಸೀತಾ‌ರಾಮ್‌ ಕಟೀಲು ಮತ್ತು ಇನ್ನೂ ಅನೇಕ ಖ್ಯಾತ ಕಲಾವಿದರು ನಟಿಸಿದ್ದಾರೆ.

ವಿಶಿಷ್ಟ ಪಾತ್ರದಲ್ಲಿ ಹಾಸ್ಯ ಕಲಾವಿದರಾದ ಕುರಿಬಾಂಡ್‌ ರಂಗ ಅಭಿನಯಿಸಿದ್ದು ಇವರು ಪ್ರಥಮ ಬಾರಿಗೆ ಕೋಸ್ಟಲ್‌ವುಡ್‌ ಗೆ ಕಾಲಿಡುತ್ತಿದ್ದಾರೆ. ಈ ಸಿನೆಮಾವು ಶ್ರೀ ಗಜನಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ತಯಾರಾಗುತ್ತಿದೆ. ಇಲ್ಲ್ ಒಕ್ಕೆಲ್‌ಗೆ ಡಾ| ಸುರೇಶ್‌ ಎಸ್‌. ಕೋಟ್ಯಾನ್‌ ಚಿತ್ರಾಪು ಅವರ ನಿರ್ದೇಶನವಿದ್ದು, ವಾಸುದೇವ ಎಸ್‌. ಚಿತ್ರಾಪು ಮತ್ತು ಡಿ.ಎಂ. ಶೆಟ್ಟಿ ಅವರು ನಿರ್ಮಾಪಕರಾಗಿದ್ದಾರೆ. ಶೀಘ್ರದಲ್ಲಿ ಸಿನೆಮಾ ಬಿಡುಗಡೆಯಾಗಲಿದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.