ಪಲಿಮಾರು ಪರ್ಯಾಯ: ಪೈಂಟಿಂಗ್-ಸಿವಿಲ್ ಕೆಲಸ ಶೀಘ್ರವೇ ಪೂರ್ಣ
Team Udayavani, Jan 4, 2018, 12:04 PM IST
ಉಡುಪಿ: ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠ ಹಾಗೂ ಪಲಿಮಾರು ಮಠದಲ್ಲಿ ಪೈಂಟಿಂಗ್ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ. 90 ರಷ್ಟು ಪೈಂಟಿಂಗ್ ಪೂರ್ಣಗೊಂಡಿದೆ. ಜ. 18ರ ಶ್ರೀಗಳ ಪರ್ಯಾಯ ಪೀಠಾರೋಹಣದ ದಿನ ಹಲವು ರೀತಿಯಲ್ಲಿ ಅಲಂಕಾರ ಗೊಳಿಸಲು ಸಿದ್ಧತೆ ನಡೆಯುತ್ತಿದೆ.
ಎರಡು ತಿಂಗಳಿನಿಂದ ನಿರಂತರ ಕೆಲಸ
ಪರ್ಯಾಯದ ಹಿನ್ನೆಲೆಯಲ್ಲಿ ಪೈಂಟಿಂಗ್ ಹಾಗೂ ಇತರ ಕೆಲವು ಸಿವಿಲ್ ಕಾಮಗಾರಿಗಳು ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದೆ. ಶ್ರೀಕೃಷ್ಣ ಮಠ, ಭೋಜನ ಶಾಲೆ, ಒಳಭಾಗದ ಕೆಲವು ಛತ್ರಗಳಲ್ಲಿ ಪೈಂಟಿಂಗ್ ಪೂರ್ಣಗೊಂಡಿದೆ. ಪಲಿಮಾರು ಮಠದ ಹಿಂಭಾಗದಲ್ಲಿ ಸಿವಿಲ್ ಕೆಲಸ ಹಾಗೂ ಪೈಂಟಿಂಗ್ ಬಾಕಿಯಿದೆ. ಮೂರ್ನಾಲ್ಕು ದಿನಗಳ ಒಳಗಾಗಿ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿದೆ. ಪ್ರತಿದಿನ 15 ರಿಂದ 20 ಮಂದಿ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ. 25-30 ಲಕ್ಷ ರೂ. ವೆಚ್ಚದಲ್ಲಿ ಪೈಂಟಿಂಗ್ ನಡೆಸಲಾಗಿದೆ. ವೆಂಕಟೇಶ್ ಶೇಟ್, ಆನಂದ್ ಹಾಗೂ ಜನಾರ್ದನ್ ಅವರ ನೇತೃತ್ವದಲ್ಲಿ ಪೈಂಟಿಂಗ್ ನಡೆಯುತ್ತಿದೆ.
ಭಜನಾ ತಂಡದ ವಾಸ್ತವ್ಯಕ್ಕೆ ವ್ಯವಸ್ಥೆ
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಿರಂತರ ಭಜನಾ ಸೇವೆ ನಡೆಯಲಿದ್ದು, ಭಜನಾ ಸೇವೆ ನಡೆಸಿಕೊಡಲು ವಿವಿಧ ಭಾಗಗಳಿಂದ ಆಗಮಿಸುವವರಿಗೆ ವಾಸ್ತವ್ಯಕ್ಕಾಗಿ ಪಲಿಮಾರು ಮಠದ ಹಿಂಭಾಗದಲ್ಲಿರುವ ಸ್ಥಳವನ್ನು ವಾಸ್ತವ್ಯಕ್ಕೆ ಪೂರಕವಾಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಶೌಚಾ ಲಯ, ಸ್ನಾನಗೃಹ ನಿರ್ಮಾಣದ ಕಾಮ ಗಾರಿಯೂ ನಡೆಯುತ್ತಿದೆ. ವಿದ್ಯಾಮಾನ್ಯ ಸಭಾಗೃಹದಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಕೆಲಸ ಶೀಘ್ರವೇ ಮುಗಿಯಲಿದೆ. ಸುಮಾರು 12 ಸಾವಿರ ಲೀ. ನೀರು ತುಂಬಿಸುವಂತಹ ನೀರಿನ ಟ್ಯಾಂಕ್ ಕೂಡ ಮಠದ ಹಿಂಭಾಗದಲ್ಲಿ ನಿರ್ಮಿಸಲಾಗುತ್ತಿದೆ.
ಪಲಿಮಾರು ಮಠದ ಮುಂಭಾಗದ ದ್ವಾರದ ಎರಡು ಭಾಗಗಳಲ್ಲಿ ಪುರುಷೋತ್ತಮ ಅಡ್ವೆ ಅವರಿಂದ ಜಯ-ವಿಜಯ ದ್ವಾರಪಾಲಕ ರಚನೆಯಾಗಲಿದೆ. ವಿಜಯ ನಗರದ ಕಾವಿ ಚಿತ್ರಕಲಾ ಶೈಲಿಯಲ್ಲಿ ಇದು ಮೂಡಿಬರಲಿದೆ. ಮೂರ್ನಾಲ್ಕು ದಿನದ ಒಳಗಾಗಿ ಚಿತ್ರಕಲಾ ರಚನೆ ಮುಗಿಯಲಿದೆ.
14 ವರ್ಷಗಳ ಹಿಂದೆ ನಡೆದ ಪಲಿಮಾರು ಶ್ರೀಗಳ ಮೊದಲ ಪರ್ಯಾಯದ ಅವಧಿಯಲ್ಲಿ ಪೈಂಟಿಂಗ್ ಹಾಗೂ ಇತರ ಕೆಲವು ಸಿವಿಲ್ ಕಾಮಗಾರಿಯನ್ನೂ ನಾವೇ ನಡೆಸಿದ್ದೇವೆ. ಈ ಬಾರಿಯೂ ನಮಗೆ ಜವಾಬ್ದಾರಿ ನೀಡಿದ್ದಾರೆ. ಎರಡು ತಿಂಗಳಿನಿಂದ ಕೆಲಸ ನಡೆಯುತ್ತಿದ್ದು, ಕೆಲವು ದಿನ ರಾತ್ರಿಯೂ ಕೆಲಸ ನಡೆಸಿದ್ದೇವೆ. ಹೆಚ್ಚಿನ ಕೆಲಸ ಮುಗಿದಿದೆ.
ವೆಂಕಟೇಶ್ ಶೇಟ್, ಪೈಂಟಿಂಗ್ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…