ಬ್ರಹ್ಮಾವರ: ಜಿಲ್ಲಾ ದಂತ ವೈದ್ಯರ ಸಮ್ಮೇಳನ
Team Udayavani, Jan 17, 2019, 1:30 AM IST
ಬ್ರಹ್ಮಾವರ: ಇಲ್ಲಿನ ಕೃಷಿ ಕೇಂದ್ರ ಬಳಿ ಇರುವ ಬಿಲ್ಬೋರ್ಡ್ನಲ್ಲಿ ಜಿಲ್ಲಾ ದಂತ ವೈದ್ಯರ ಸಮ್ಮೇಳನ ಉಡುಪಿ ಡೆಂಟೊ ಫೆಸ್ಟ್-19 ಜರಗಿತು. ಜಿಲ್ಲೆಯ ಎಲ್ಲ ತಾಲೂಕಿನಿಂದ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಸದಸ್ಯರು, ಕುಟುಂಬಸ್ಥರು ಪಾಲ್ಗೊಂಡಿದ್ದರು.
ಐಡಿಎ ಜಿಲ್ಲಾ ಶಾಖೆಯ ನೂತನ ಅಧ್ಯಕ್ಷರಾಗಿ ಡಾ| ಮನೋಜ್ ಮ್ಯಾಕ್ಸಿಮ್ ಡಿಲೀಮಾ ಬ್ರಹ್ಮಾವರ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಡಾ| ಸಯ್ಯದ್ ಮಹಮ್ಮದ್ ಪೈಝ್ ಉಡುಪಿ, ಖಜಾಂಚಿ ಡಾ| ಸುಧೀರ್ ರಾವ್ ಮಲ್ಪೆ ಆಯ್ಕೆಯಾ ದರು. ಐಡಿಎ ರಾಜ್ಯ ಅಧ್ಯಕ್ಷ ಡಾ| ಪ್ರಕಾಶ್ ಎಚ್.ಪಿ., ರಾಜ್ಯ ಕಾರ್ಯದರ್ಶಿ ಡಾ| ಶಿವಪ್ರಸಾದ್, ಖಜಾಂಚಿ ಡಾ| ಸುಶಾಂತ್ ಹಾಗೂ ಭಾರತದ ಡೆಂಟಲ್ ಕೌನ್ಸಿಲ್ ಸದಸ್ಯ ಡಾ| ಶಿವಶರಣ್ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಐಡಿಎ ಜಿಲ್ಲಾ ಶಾಖೆಯು ಹಿರಿಯ ನಾಗರಿಕರಿಗೆ ದಂತ ಸಂರಕ್ಷಣೆ ಮಾಹಿತಿ, ತಪಾಸಣೆ, ಚಿಕಿತ್ಸಾ ಪ್ರದರ್ಶನ ವನ್ನು ಅಜ್ಜರಕಾಡು ಪಾರ್ಕ್ ಬಳಿ ಹಮ್ಮಿ ಕೊಂಡಿತು.
ಕಡಿಯಾಳಿ ಶಾಲೆಯಲ್ಲಿ ದಂತ ಮಾಹಿತಿ ಶಿಬಿರ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ, ಹಾಲು ಸೊಸೈಟಿ, ಸಾೖಬ್ರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲಾ ದೆಡೆ ಬಾಯಿಯ ಕ್ಯಾನ್ಸರ್ ರೋಗದ ಜಾಗೃತಿ
ಕಾರ್ಯಕ್ರಮ ಆಯೋಜಿಸಿತು. ಶಂಕರಪುರ ವಿಶ್ವಾಸದ ಮನೆ, ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಚೇರ್ಕಾಡಿ ಸಮೃದ್ದಿ ಮಹಿಳಾ ಮಂಡಳಿ, ಸುಮೇದ ವಿಶೇಷ ಶಾಲೆ ನೀಲಾವರದಲ್ಲಿ ದಂತ ತಪಾಸಣೆ, ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡಾ| ವಿಜಯೇಂದ್ರ ರಾವ್ ಉಡುಪಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ