ಅಮೆರಿಕದ ಆ ಮಹಾನಗರ 


Team Udayavani, Dec 9, 2018, 6:00 AM IST

new-york-skyline.jpg

ಊರಿಗೆ ಬಂದವರೆಲ್ಲ ನೀರಿಗೆ ಬರದೇ ಹೋಗಬಹುದು, ಆದರೆ ಅಮೆರಿಕಕ್ಕೆ ಹೋಗುವವರು ನ್ಯೂಯಾರ್ಕ್‌ ನೋಡಲು ಹೋಗದೇ ಇರಲಾರರು. ನಾಲ್ಕು ದಿನ ನಮ್ಮ ದೇಶದ ಮುಂಬೈಯನ್ನು ಹೋಲುವ ಅಮೆರಿಕದ ನ್ಯೂಯಾರ್ಕ್‌ ನಗರವನ್ನು ಸುತ್ತಿ ಬರೋಣ ಎಂದು ನಾದಿನಿ ಸುಪ್ರೀತಾ ಆಹ್ವಾನಿಸಿದಾಗ ಕುಟುಂಬ ಸಮೇತ ನವಾರ್ಕ್‌ ವಿಮಾನ ನಿಲ್ದಾಣದಲ್ಲಿ ಇಳಿದಾಗ ಆಗಲೇ ಅಕ್ಟೋಬರ್‌ ತಿಂಗಳ ಚಳಿ ಮೈ ರಾಚುತ್ತಿತ್ತು. 

ಜಗತ್ತಿನ “ಗ್ಲೋಬಲ್‌ ಸಿಟಿ’ಗಳಲ್ಲಿ ಇದು ಅಗ್ರಗಣ್ಯ ನಗರ. ಅಮೇರಿಕ ದೇಶದ ನ್ಯೂಯಾರ್ಕ್‌ ರಾಜ್ಯದ ಪ್ರಮುಖ ನಗರವಾದ ಇದರಲ್ಲಿ ಬ್ರೂಕ್‌ ಲಿನ್‌,  ಮ್ಯಾನ್‌ಹಟನ್‌,  ಕ್ವೀನ್ಸ್‌,  ಬ್ರಾಂಕ್ಸ್‌ ಮತ್ತು  ಸ್ಟೇಟನ್‌ ಐಲ್ಯಾಂಡ್‌ ಎಂಬ ಐದು ಉಪನಗರಗಳಿವೆ. ಅಮೆರಿಕದ ಅತ್ಯಂತ ಜನನಿಬಿಡ ನಗರ ಈ ನ್ಯೂಯಾರ್ಕ್‌. ಜಗತ್ತಿನ ಸಾಂಸ್ಕೃತಿಕ ಮತ್ತು ಆರ್ಥಿಕ ರಾಜಧಾನಿಯಾದ ಈ ನಗರ  ವಿಶ್ವ ವ್ಯಾಪಾರ, ಹಣಕಾಸು, ಕಲೆ, ಶಿಕ್ಷಣ ಹಾಗೂ ಮನರಂಜನೆ ‌ ಕ್ಷೇತ್ರಗಳಲ್ಲಿ ಜಗತ್ತಿಗೇ ಕಳಸಪ್ರಾಯವಾಗಿದೆ. 

ಅಮೆರಿಕದ ಬಹುತೇಕ ನಗರಗಳಂತೆಯೇ ನ್ಯೂಯಾರ್ಕ್‌ ಕೂಡ ಈಸ್ಟ್‌ ರಿವರ್‌ನ ದಂಡೆಯ ಮೇಲಿದೆ. ಇದು ಅಟ್ಲಾಂಟಿಕ್‌ ಸಾಗರದ ಅಳಿವೆಯಾದ್ದರಿಂದ ಉಪ್ಪುನೀರಿನ ಸರೋವರವಾಗಿ ನ್ಯೂಯಾರ್ಕ್‌ ಸಮೀಪ ಕಾಣುತ್ತದೆ. ಈ ಅಳಿವೆಯ ಮೂಲಕವಾಗಿಯೇ ಅಮೆರಿಕಕ್ಕೆ ವಿವಿಧ ದೇಶಗಳ ನಿವಾಸಿಗಳು ವಲಸೆ ಬಂದು ಸ್ಥಳವನ್ನು ಆಕ್ರಮಿಸಿದರು. ಮುಂಬಯಿ ಭಾರತದ ವಾಣಿಜ್ಯ ರಾಜಧಾನಿಯಾಗಿರುವಂತೆ ನ್ಯೂಯಾರ್ಕ್‌ ಅಮೆರಿಕದ ವಾಣಿಜ್ಯ ರಾಜಧಾನಿ. ಮುಂಬಯಿ ವಲಸೆಗಾರರ ಸ್ವರ್ಗ. ಶ್ರಮಪಟ್ಟು ಜೀವಿಸಲು ಬಯಸುವ ಎಲ್ಲರಿಗೂ ಅಲ್ಲಿ ಅವಕಾಶಗಳಿವೆ. ದಿನವಿಡೀ ಗಿಜಿಗುಡುತ್ತಿರುತ್ತದೆ, ರಾತ್ರಿಯಿಡೀ ನಿದ್ರಿಸದು. ಈ ಎಲ್ಲ ಲಕ್ಷಣಗಳೂ ನ್ಯೂಯಾರ್ಕ್‌ ಗೆ ಅನ್ವಯಿಸುತ್ತದೆ. ತಮ್ಮ ಪ್ರಧಾನ ಕಚೇರಿಯನ್ನು ಹೊಂದಿರುವ ಅನೇಕ ಚಿಕ್ಕ-ದೊಡ್ಡ ವಾಣಿಜ್ಯ ಕಂಪೆನಿಗಳು, ಭಾರತೀಯರು ಮತ್ತು ಚೀನೀಯರು ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.

ವಿಶ್ವಸಂಸ್ಥೆಯ ಕೇಂದ್ರ ಸ್ಥಾನವೂ ಇದೇ ನಗರ. ಹಡ್ಸನ್‌ ಮತ್ತು ಈಸ್ಟ್‌ ನದಿಗಳು ಅಟ್ಲಾಂಟಿಕ್‌ ಸಾಗರವನ್ನು ಸೇರುವ ಮುಖಜ ಭೂಮಿಯಲ್ಲಿ ಹರಡಿಕೊಂಡಿರುವ ಈ ನಗರ ಜಗತ್ತಿನ ಅತಿ ದೊಡ್ಡ ನೈಸರ್ಗಿಕ ಬಂದರು ಕೂಡ ಹೌದು. ವಿಶ್ವದ ನಾನಾ ಭಾಗಗಳ ಜನರು ನೆಲೆಸಿರುವ  ಈ ನಗರದಲ್ಲಿ ಸರಿಸುಮಾರು 800 ಭಾಷೆಗಳನ್ನು ಮಾತನಾಡುವ ಜನರು ಇದ್ದಾರಂತೆ!  ಕ್ರಿ. ಶ. 1624ರಲ್ಲಿ  ಸ್ಥಾಪಿತವಾದ ಈ ನಗರ ಯೂರೋಪಿನ ವ್ಯಾಪಾರಿಗಳ/ ವಲಸೆಗಾರರ ಪ್ರಥಮ ಆಕರ್ಷಣೆಯಾಗಿತ್ತು. ಈ ಸಿಟಿ ಜಗತ್ತಿನಾದ್ಯಂತ ಎಂತಹ ಮಾಯಾಜಾಲ ಹರಡಿದೆಯೆಂದರೆ- ಇದರ ಹಲವಾರು ಕಟ್ಟಡಗಳ ಮತ್ತು ಸ್ಮಾರಕಗಳ ಹೆಸರುಗಳು ಜನರಿಗೆ ಗೊತ್ತಿಲ್ಲೋ ಗೊತ್ತಿಲ್ಲದೆಯೋ ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿವೆ. ನ್ಯೂಯಾರ್ಕ್‌ ನಗರದ ಸಬ್‌ವೇಗಳಂತೂ ಜಗತ್ತಿನಲ್ಲೇ ಅತ್ಯಂತ ವಿಸ್ತಾರವಾದ ಜಾಲ ಹೊಂದಿದ “ಮೆಟ್ರೋ ಸಿಸ್ಟಮ್‌’ ಆಗಿದೆ.

ಸ್ವಾತಂತ್ರ್ಯದೇವತೆ (ಸ್ಟ್ಯಾಚ್ಯು ಆಫ್ ಲಿಬರ್ಟಿ)
ಸ್ಟ್ಯಾಚೂÂ ಆಫ್ ಲಿಬರ್ಟಿ ಪ್ರತಿಮೆಯು ಅಮೆರಿಕದ ಅಪರೂಪದ ಸ್ಮಾರಕ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ನ್ಯೂಯಾರ್ಕ್‌ ನ ಪ್ರಮುಖ ಆಕರ್ಷಣೆ ಸ್ಟಾಚ್ಯು ಆಫ್ ಲಿಬರ್ಟಿ ಅಥವಾ ಸ್ವಾತಂತ್ರ್ಯ ದೇವಿಯ ಪ್ರತಿಮೆ. ಇವಳನ್ನು ನೋಡಲು ಫೆರಿ (ಹಡಗು)ಯಲ್ಲಿ ಪಯಣ ಬೆಳೆಸಬೇಕು. ಸುತ್ತಲೂ ನೀರು ನಡುಗಡ್ಡೆಯಲ್ಲಿರುವ ಅವಳನ್ನು ನೋಡಲು ಪ್ರತಿದಿನವೂ ಸಾವಿರಾರು ಜನ ಜಮಾಯಿಸುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, 1886ರ ಅಕ್ಟೋಬರ್‌ 28ರಂದು ಈ ಪ್ರತಿಮೆ ಅನಾವರಣಗೊಂಡಿತು. 151 ಅಡಿಗಳಷ್ಟು ಎತ್ತರ ಇರುವ ಈ ಪ್ರತಿಮೆ ತಳಪಾಯ ಮತ್ತು ಪೀಠಗಳು ಸೇರಿ ಒಟ್ಟು ಎತ್ತರ 305 ಅಡಿಗಳಷ್ಟು ಎತ್ತರವಿದೆ.  ಫ್ರಾನ್ಸ್‌ ದೇಶದ ಜನರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸ್ನೇಹಪೂರ್ವಕವಾಗಿ ಈ ಪ್ರತಿಮೆಯನ್ನು ನೀಡಿದ್ದರು. ಅಮೆರಿಕನ್‌ ಕ್ರಾಂತಿ ಸಂದರ್ಭದಲ್ಲಿ ಇವೆರಡೂ ದೇಶಗಳ ನಡುವೆ ಸ್ನೇಹವೇರ್ಪಟ್ಟಿತ್ತು. “ಸ್ಟೊಲಾ’ ಎಂಬ ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು ಹಾಗೂ ಸ್ವಾತಂತ್ರ್ಯ 4 JULY 1776 ಎಂದು ಕೆತ್ತಲಾದ ಫ‌ಲಕವನ್ನು ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿ ಇದಾಗಿದೆ.  ಫ್ರೆಡೆರಿಕ್‌ ಆಗಸ್ಟ್‌ ಬಾತೊìಲ್ಡಿ ಈ ಪ್ರತಿಮೆಯ ಶಿಲ್ಪಿ. ಮೌರಿಸ್‌ ಕೋಚಿÉನ್‌ ಎಂಬಾತ ಪ್ರತಿಮೆಯ ಆಂತರಿಕ ವಿನ್ಯಾಸಕಾರ. 

9/11ರ ಭಯೋತ್ಪಾದಕ ದಾಳಿಯ ನಂತರ ಅದರ ಮೇಲೆ ಹತ್ತುವುದನ್ನು ನಿರ್ಬಂಧಿಸಲಾಗಿತ್ತು. ಉಗ್ರರ ದಾಳಿಯ ಬಿಸಿ ಕಡಿಮೆಯಾದ ನಂತರ ಪ್ರತಿಮೆ ಹತ್ತುವುದಕ್ಕೆ ಅವಕಾಶ ನೀಡಲಾಗಿತ್ತು. ಈಗ ಹೊಸ ಏಣಿ ಮತ್ತು ಎಲಿವೇಟರ್‌ಗಳನ್ನು ಕೂಡ ಅಳವಡಿಸಲಾಗಿದೆ. 
ಅಲ್ಲಿಂದ ನಮ್ಮ ಪ್ರಯಾಣ ಟ್ರೈಮ್ಸ್‌ ಸ್ಕ್ವೇರ್‌ ಕಡೆಗೆ ಸಾಗಿತು.

– ಜಮುನಾರಾಣಿ ಎಚ್‌. ಎಸ್‌.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.