ಶಾಲಾ ಮಕ್ಕಳ ಪ್ರಾಣ ಉಳಿಸಿದ ಶಿಕ್ಷಕಿಗೆ ಪ್ರಶಂಸೆ
Team Udayavani, Feb 18, 2018, 8:15 AM IST
ನ್ಯೂಯಾರ್ಕ್: ಫ್ಲೋರಿಡಾದ ಸ್ಟೋನ್ಮನ್ ಡಗ್ಲಾಸ್ ಶಾಲೆಯಲ್ಲಿ ನಡೆದ ಶೂಟೌಟ್ ಪ್ರಕರಣದ ವೇಳೆ ತಮ್ಮ ವಿದ್ಯಾರ್ಥಿಗಳನ್ನು ರಕ್ಷಿಸಿದ ಭಾರತೀಯ ಮೂಲದ ಶಿಕ್ಷಕಿಯ ಧೈರ್ಯ ಈಗ ಪ್ರಶಂಸೆಗೆ ಪಾತ್ರವಾಗಿದೆ.
ಈ ಶೌರ್ಯ ಮೆರೆದ ಶಿಕ್ಷಕಿ ಶಾಂತಿ ವಿಶ್ವನಾಥನ್. ಇವರು ಗಣಿತದ ಶಿಕ್ಷಕಿ. ಗುಂಡಿನ ದಾಳಿ ವೇಳೆ ಅವರು ತರಗತಿಯಲ್ಲಿ ಬೀಜಗಣಿತದ ಪಾಠ ಮಾಡುತ್ತಿದ್ದರು. ಅಪಾಯದ ಸೈರನ್ ಮೊಳಗಿದ ಕೂಡಲೇ ಎಚ್ಚೆತ್ತ ಅವರು ವಿದ್ಯಾರ್ಥಿಗಳಿಗೆ ನೆಲಕ್ಕೆ ಆತುಕೊಳ್ಳುವಂತೆ ಸೂಚಿಸಿ, ತರಗತಿಯ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿದರು. ಈ ಮೂಲಕ ತರಗತಿಯಲ್ಲಿದ್ದ ಮಕ್ಕಳು ಬಂದೂಕುಧಾರಿ ನಿಕೋಲಸ್ ಕ್ರೂಸ್ ಕಣ್ಣಿಗೆ ಬೀಳದಂತೆ ನೋಡಿಕೊಂಡರು ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.
ಶಾಂತಿ ಕೂಡಲೇ ತಮ್ಮ ಬುದ್ಧಿ ಉಪಯೋಗಿಸಿದ ಕಾರಣ ಹಲವು ಮಕ್ಕಳ ಜೀವ ಉಳಿದಿದೆ ಎಂದು ವಿದ್ಯಾರ್ಥಿಯೊಬ್ಬರ ತಾಯಿ ಹೇಳಿದ್ದಾರೆ. ಸ್ಪೆಷಲ್ ವೆಪನ್ ಆ್ಯಂಡ್ ಟ್ಯಾಕ್ಟಿಕ್ಸ್ ತಂಡ ಕೊಠಡಿಯ ಬಾಗಿಲು ಬಡಿದಾಗಲೂ ಬಾಗಿಲು ತೆರೆದಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ