ಅಣ್ವಸ್ತ್ರ ತೊರೆದರೆ ಭದ್ರತೆ: ಕೊರಿಯಾಗೆ ಅಮೆರಿಕ ಭರವಸೆ


Team Udayavani, Jun 12, 2018, 6:00 AM IST

x-36.jpg

ಸಿಂಗಾಪುರ: ಇಡೀ ವಿಶ್ವವೇ ಎದುರು ನೋಡುತ್ತಿರುವ ಅಮೆರಿಕ ಮತ್ತು ಉತ್ತರ ಕೊರಿಯಾ ಮಾತುಕತೆಗೆ ವೇದಿಕೆ ಸಿದ್ಧವಾಗಿದ್ದು, ಉ.ಕೊರಿಯಾ ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದರೆ ವಿಶಿಷ್ಟ ಭದ್ರತೆಯನ್ನು ಒದಗಿಸುವುದಾಗಿ ಅಮೆರಿಕ ಭರವಸೆ ನೀಡಿದೆ. ಮಂಗಳವಾರ ಸಿಂಗಾಪುರ ಸೆಂತೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉ.ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಐತಿಹಾಸಿಕ ಮಾತುಕತೆ ನಡೆಸಲಿದ್ದಾರೆ.

ಇದಕ್ಕೂ ಮೊದಲು ಅಮೆರಿಕ ಮಾತುಕತೆಯ ವಿಷಯಗಳ ಸುಳಿವು ನೀಡಿದ್ದು, ಸಂಪೂರ್ಣ, ಪರಿಶೀಲಿಸಬಹುದಾದ ಮತ್ತು ಹಿಂಪಡೆಯಲಾಗದ ರೀತಿಯಲ್ಲಿ ಉ.ಕೊರಿಯಾವು ಅಣ್ವಸ್ತ್ರಗಳನ್ನು ನಾಶಗೊಳಿಸಿದರೆ ವಿಶಿಷ್ಟ ಭದ್ರತೆಯ ಅಭಯ ನೀಡುತ್ತೇವೆ. ಅಮೆರಿಕ ಬಯಸುವುದೂ ಇದೊಂದನ್ನೇ ಎಂದು ಗೃಹ ಸಚಿವ ಮೈಕ್‌ ಪಾಂಪಿಯೋ ಹೇಳಿದ್ದಾರೆ. ಅಣ್ವಸ್ತ್ರ ನಾಶದಿಂದಾಗಿ ಉ. ಕೊರಿಯಾಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಮೆರಿಕದ ಉದ್ದೇಶ. ಅಣ್ವಸ್ತ್ರ ನಾಶಗೊಳ್ಳುವವರೆಗೂ ಈಗಿರುವ ನಿಷೇಧ ಮುಂದುವರಿಯುತ್ತದೆ ಎಂದು ಪಾಂಪಿಯೋ ಹೇಳಿದ್ದಾರೆ.

ಟ್ರಂಪ್‌ ಹಾಗೂ ಕಿಮ್‌ ಇಬ್ಬರೇ ಮಾತುಕತೆ ನಡೆಸುವ ಅವಕಾಶವನ್ನು ನಾವು ಎದುರು ನೋಡುತ್ತಿದ್ದೇವೆ. ಹಲವು ವಿಷಯಗಳಿಗೆ ಸಂಬಂಧಿಸಿ ಉಭಯ ದೇಶಗಳ ಅಧಿಕಾರಿಗಳು ಭಿನ್ನಾಭಿಪ್ರಾಯ ನಿವಾರಣೆಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಪಾಂಪಿಯೋ ಹೇಳಿದ್ದಾರೆ.

ಉತ್ತರ, ದಕ್ಷಿಣ ಕೊರಿಯಾ ಶಾಂತಿ ಒಪ್ಪಂದ: 1950-53ರಲ್ಲಿ ಉತ್ತರ ಹಾಗೂ ದಕ್ಷಿಣ ಕೊರಿಯಾ ಯುದ್ಧ ಶಾಂತಿ ಒಪ್ಪಂದವೂ ಈ ಸಮ್ಮೇಳನದಲ್ಲಿ ನಡೆಯುವ ಸಾಧ್ಯತೆಯಿದೆ. ಅಂದು ಯುದ್ಧ ಮುಗಿದಿದ್ದರೂ, ಯುದ್ಧ ಮುಕ್ತಾಯಕ್ಕೆ ಸಂಬಂಧಿಸಿ ಉಭಯ ದೇಶಗಳ ಒಪ್ಪಂದ ನಡೆದಿರಲಿಲ್ಲ. ಶಾಂತಿ ಒಪ್ಪಂದವಾದರೆ ದ.ಕೊರಿಯಾದಿಂದ ಅಮೆರಿಕ ತನ್ನ 28,000 ಯೋಧರನ್ನು ವಾಪಸ್‌ ಕರೆಸಿಕೊಳ್ಳಬಹುದು.

ಲೀ ಭೇಟಿ: ಟ್ರಂಪ್‌ ಹಾಗೂ ಕಿಮ್‌ ಪ್ರತ್ಯೇಕವಾಗಿ ಸಿಂಗಾಪುರ ಪ್ರಧಾನಿ ಲೀ ಲೂಂಗ್‌ರನ್ನು ಭೇಟಿ ಮಾಡಿದ್ದಾರೆ. ಈ ಸಮ್ಮೇಳನ ಯಶಸ್ವಿಯಾದರೆ ಸಿಂಗಾಪುರ ಸರ್ಕಾರದ ಕೊಡುಗೆ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ ಎಂದು ಕಿಮ್‌ ಹೇಳಿದ್ದಾರೆ.

ಚೀನಾಗೆ ಚಿಂತೆ ಶುರು: ಟ್ರಂಪ್‌-ಕಿಮ್‌ ಭೇಟಿ ಚೀನಾಗೆ ಆತಂಕ ತಂದಿದೆ. ತನ್ನ ವಲಯದಿಂದ ಉ.ಕೊರಿಯಾ ತಪ್ಪಿಸಿಕೊಳ್ಳುತ್ತಿದೆಯೇ ಎಂಬ ಅನುಮಾನ ಚೀನಾಗೆ ಉಂಟಾಗಿದೆ. ಶೀತಲ ಸಮರದ ಕಾಲದಿಂದಲೂ ತನ್ನ ವಲಯದಲ್ಲೇ ಇದ್ದ ಉ.ಕೊರಿಯಾ ಇದೀಗ ಅಮೆರಿಕದ ಜೊತೆಗಿನ ಮಾತುಕತೆ ಮೂಲಕ ಐರೋಪ್ಯ ದೇಶಗಳಿಗೆ ಹತ್ತಿರವಾಗುತ್ತಿದೆ. ಈಗ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಒಂದಾದರೆ ಚೀನಾ ಒಂಟಿಯಾಗುತ್ತದೆ. 1972ರಲ್ಲಿ ಚೀನಾ ಹೂಡಿದ ತಂತ್ರವನ್ನೇ ಉ.ಕೊರಿಯಾ ಅನುಸರಿಸುವ ಸಾಧ್ಯತೆಯಿದೆ. ಆಗ ಅಮೆರಿಕ ಅಧ್ಯಕ್ಷರಾಗಿದ್ದ ರಿಚರ್ಡ್‌ ನಿಕ್ಸನ್‌ರನ್ನು ಚೀನಾಗೆ ಕರೆಸಿಕೊಂಡಿದ್ದ ಚೀನಾ ಅಧ್ಯಕ್ಷ ಮಾವೋ ಜೆಡಾಂಗ್‌, ಸೋವಿಯತ್‌ ಯೂನಿಯನ್‌ನಿಂದ ದೂರವಾಗಿ ಅಮೆರಿಕಕ್ಕೆ ಹತ್ತಿರವಾಗಿದ್ದರು. ಕಿಮ್‌ – ಟ್ರಂಪ್‌ ಮಾತುಕತೆ ನಂತರ ಗೃಹ ಸಚಿವ ಪಾಂಪಿಯೋ ಬೀಜಿಂಗ್‌ಗೆ ತೆರಳಿ ಮಾತುಕತೆಯ ನಿರ್ಧಾರಗಳನ್ನು ಚೀನಾಗೆ ವಿವರಿಸಲಿದ್ದಾರೆ. ಮೂಲಗಳ ಪ್ರಕಾರ ಯಾವ ಹಿರಿಯ ಚೀನಾ ಅಧಿಕಾರಿಯೂ ಸಿಂಗಾಪುರದ ಮಾತುಕತೆ ವೇಳೆ ಹಾಜರಿರುವುದಿಲ್ಲ.

ಕಿಮ್‌ ಸೆಲ್ಫಿ: ಸೋಮವಾರ ರಾತ್ರಿ ಸಿಂಗಾಪುರದಲ್ಲಿ ಸುತ್ತಾ ಡಿದ ಕಿಮ್‌, ಮರಿನಾ ಬೇ ಸ್ಯಾಂಡ್ಸ್‌ ರೆಸಾರ್ಟ್‌ನ ಮಹಡಿಯ ಮೇಲೆ ನಿಂತು ಸೇರಿದ್ದ ಜನರಿಗೆ ಕೈ ಬೀಸಿದರು. ಬಾಲಕೃಷ್ಣನ್‌ ಜೊತೆಗೆ ಸೆಲ್ಫಿಗೆ ಕೂಡ ಪೋಸು ನೀಡಿದರು.

ನೇಪಾಳದ ಗೂರ್ಖಾಗಳೇ ಕಾವಲು!
ಸಮ್ಮೇಳನಕ್ಕೆ ಭದ್ರತೆಯ ಪ್ರಮುಖ ಭಾಗವೇ ನೇಪಾಳದ ಗೂರ್ಖಾಗಳು. ಸಿಂಗಾಪುರದಲ್ಲಿ ನಡೆಯುವ ಯಾವುದೇ ಸಮ್ಮೇಳನಕ್ಕೂ ಇವರನ್ನು ಬಳಸಿಕೊಳ್ಳಲಾಗುತ್ತದೆ. 1949ರಿಂದಲೂ ಗೂರ್ಖಾಗಳು ಭದ್ರತೆ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಿಮ್‌ ಹಾಗೂ ಟ್ರಂಪ್‌ ತಮ್ಮ ಭದ್ರತಾ ಪಡೆಗಳನ್ನು ಕರೆಸಿಕೊಂಡಿ ದ್ದರೂ, ಗೂರ್ಖಾಗಳನ್ನು ಭಾರಿ ಪ್ರಮಾಣದಲ್ಲಿ ನೇಮಿಸಲಾಗಿದೆ. ಸುಮಾರು 1800 ಗೂರ್ಖಾ ಅಧಿಕಾರಿಗಳು ಕಿಮ್‌ ತಂಗಿರುವ ಸೇಂಟ್‌ ರೇಜಿಸ್‌ ಹೋಟೆಲ್‌ ಅನ್ನು ಕಾಯುತ್ತಿದ್ದಾರೆ.

ಭಾರತೀಯರ ಪಾತ್ರ
ಭಾರತೀಯ ಮೂಲದ ಸಿಂಗಾಪುರದ ಇಬ್ಬರು ಸಚಿವರಾದ ವಿವಿಯನ್‌ ಬಾಲಕೃಷ್ಣನ್‌ ಮತ್ತು ಕೆ. ಷಣ್ಮುಗಂ ಈ ಸಮ್ಮೇಳನದ ರೂವಾರಿಗಳು. ಸಮ್ಮೇಳನ ಹಾಗೂ ಭೇಟಿ ಯಾವುದೇ ಅಡೆತಡೆ ಇಲ್ಲದೇ ಸರಾಗವಾಗಿ ನಡೆಯುವುದಕ್ಕಾಗಿ ಇಬ್ಬರೂ ಶ್ರಮಿಸುತ್ತಿದ್ದಾರೆ. ಷಣ್ಮುಗಂ ಕಾನೂನು ಮತ್ತು ಗೃಹ ಖಾತೆ ಸಚಿವರಾಗಿದ್ದು, ಬಾಲಕೃಷ್ಣನ್‌ ವಿದೇಶಾಂಗ ಸಚಿವರಾಗಿದ್ದಾರೆ.

101 ಕೋಟಿ ರೂ. ಸಮ್ಮೇಳನಕ್ಕೆ ವೆಚ್ಚ
50 ಕೋಟಿ ರೂ. ಭದ್ರತೆಗೆ ವೆಚ್ಚ
02 ವಾರಗಳಿಂದ ನಡೆ ಯುತ್ತಿರುವ ತಯಾರಿ
5000 ಭದ್ರತಾ ಸಿಬ್ಬಂದಿ ನೇಮಕ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.