ಇದೆಂಥ ಪ್ರತೀಕಾರ; ಉದ್ರಿಕ್ತ ಗುಂಪಿನಿಂದ 300 ಮೊಸಳೆಗಳ ಮಾರಣಹೋಮ!
Team Udayavani, Jul 16, 2018, 5:28 PM IST
ಇಂಡೋನೇಷ್ಯಾ: ವ್ಯಕ್ತಿಯೊಬ್ಬನನ್ನು ಮೊಸಳೆ ಕೊಂದ ಪರಿಣಾಮ ರೊಚ್ಚಿಗೆದ್ದ ಜನರ ಗುಂಪು ಪ್ರತೀಕಾರ ಎಂಬಂತೆ ಕೊಡಲಿ, ಮಚ್ಚಿನೊಂದಿಗೆ ಆಗಮಿಸಿ ಬರೋಬ್ಬರಿ 300 ಮೊಸಳೆಗಳ ಮಾರಣಹೋಮ ನಡೆಸಿದ ಅಮಾನವೀಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ತಾನು ಸಾಕಿದ್ದ ಜಾನುವಾರುಗಳಿಗೆ ಮೇವು ತರುವ ನಿಟ್ಟಿನಲ್ಲಿ ಸ್ಥಳೀಯ ಮೊಸಳೆ ಸಾಕಣೆ(ಮೊಸಳೆ ತಳಿ ಅಭಿವೃದ್ಧಿ) ಕೇಂದ್ರದತ್ತ ವ್ಯಕ್ತಿಯೊಬ್ಬ ಬಂದಿದ್ದ. ಈತ ಮೊಸಳೆ ಇದ್ದ ಜಾಗದಲ್ಲಿಯೇ ಬೆಳೆದಿದ್ದ ಹುಲ್ಲನ್ನು ಬಾಗಿ ತೆಗೆಯುತ್ತಿದ್ದ ವೇಳೆ ದಾಳಿ ನಡೆಸಿ ಕೊಂದು ಹಾಕಿದ್ದ ಘಟನೆ ಶನಿವಾರ ಸಂಭವಿಸಿತ್ತು.
ಮೃತ ವ್ಯಕ್ತಿಯನ್ನು 48 ವರ್ಷ ಪ್ರಾಯದ ಸುಗಿಟೋ ಎಂದು ಗುರುತಿಸಲಾಗಿದೆ. ಒಂದು ಮೊಸಳೆ ಈತನ ಕಾಲನ್ನು ಕಚ್ಚಿ ನೀರಿನೊಳಗೆ ಎಳೆದೊಯ್ಯುತ್ತಿದ್ದಾಗ ಕೂಗಿಕೊಂಡ ಶಬ್ಧ ಕೇಳಿ ಫಾರ್ಮ್ ನಲ್ಲಿದ್ದ ಉದ್ಯೋಗಿಯೊಬ್ಬ ಸ್ಥಳಕ್ಕೆ ಹೋಗಿದ್ದ. ಅಷ್ಟರಲ್ಲಿ ಅಪಾಯ ಸಂಭವಿಸಿ ಆಗಿತ್ತು ಎಂದು ಇಂಡೋನೇಷ್ಯಾ ಸಂಪನ್ಮೂಲ ರಕ್ಷಣಾ ಏಜೆನ್ಸಿಯ ಬಸ್ಸಾರ್ ಮನುಲಾಂಗ್ ತಿಳಿಸಿದ್ದಾರೆ.
ನಾವು ಸಂತ್ರಸ್ತ ಕುಟುಂಬದ ಜೊತೆ ಒಪ್ಪಂದ ಮಾಡಿಕೊಂಡು, ಅವರಿಗೆ ಸಾಂತ್ವನ ಹೇಳಿದ್ದೇವು. ಆದರೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರ ಗುಂಪು, ಮಚ್ಚು, ಕತ್ತಿಯೊಂದಿಗೆ ದಾಳಿ ನಡೆಸಿ ಸುಮಾರು 300 ಮೊಸಳೆಗಳನ್ನು ಕೊಂದು ಹಾಕಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ನಾವು ಎಷ್ಟೇ ಪ್ರಯತ್ನಿಸಿದರೂ ಮೊಸಳೆ ಮಾರಣ ಹೋಮ ತಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕ್ರಿಮಿನಲ್ ಆರೋಪದಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ತಿಳಿಸಿರುವ ಅಧಿಕಾರಿಗಳು ಈ ಘಟನೆಯಿಂದ ಅನಧಿಕೃತವಾಗಿ ಮೊಸಳೆ ಫಾರ್ಮ್ ನೊಳಗೆ ಪ್ರವೇಶಿಸುವುದು ಹಾಗೂ ಮೊಸಳೆಗಳ ರಕ್ಷಣೆಯ ಬಗ್ಗೆ ಹೆಚ್ಚು ಗಮನ ಕೊಡಬೇಕಾಗಿರುವುದನ್ನು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದು ಮಾಧ್ಯಮದ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್