ಅಣ್ವಸ್ತ್ರ ದೇಶಗಳಾಗಿರುವ ಭಾರತ-ಪಾಕ್ ಎಂದೂ ಯುದ್ಧ ಮಾಡವು: ಇಮ್ರಾನ್
Team Udayavani, Nov 28, 2018, 4:55 PM IST
ಇಸ್ಲಾಮಾಬಾದ್ : ”ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಾಗಿರುವ ಭಾರತ ಮತ್ತು ಪಾಕಿಸ್ಥಾನ ಎಂದೂ ಯುದ್ಧವನ್ನು ಮಾಡಲಾರವು; ಯುದ್ಧದ ಬಗ್ಗೆ ಯೋಚಿಸುವುದು ಕೂಡ ಮೂರ್ಖತನವಾದೀತು” ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ಥಾನದ ಕಡೆಯಿಂದ “ಕರ್ತಾರ್ಪುರ್ ಕಾರಿಡಾರ್’ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದ ಅವರು ತಮ್ಮ ಮಾತುಗಳಲ್ಲಿ ಕ್ರಿಕೆಟ್ ಸೂಕ್ಷತೆಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಧಾರಾಳವಾಗಿ ಉಲ್ಲೇಖೀಸಿ ಭಾರತ – ಪಾಕಿಸ್ಥಾನ ಸಂಬಂಧ ಸುಧಾರಣೆಯ ಅಗತ್ಯವನ್ನು ಒತ್ತಿ ಹೇಳಿದರು .
”ಕ್ರಿಕೆಟ್ ನಲ್ಲಿ ಯಾರು ಅಪಾಯಗಳನ್ನು ಲೆಕ್ಕಿಸದೆ, ಸಂಪ್ರದಾಯಗಳನ್ನು ಮುರಿಯುತ್ತಾರೋ ಅವರಿಗೆ ಹೆಚ್ಚಿನ ಯಶಸ್ಸು ಪ್ರಾಪ್ತವಾಗುತ್ತದೆ” ಎಂದ ಇಮ್ರಾನ್, ಭಾರತ ಮತ್ತು ಪಾಕಿಸ್ಥಾನ ತಮ್ಮ ಸಾಂಪ್ರದಾಯಿಕ ವೈರತ್ವವನ್ನು ಕೈಬಿಟ್ಟು ಉತ್ತಮ ನೆರೆಕರೆಯ ದೇಶಗಳಾಗುವ ಅಗತ್ಯವಿದೆ ಎಂದು ಹೇಳಿದರು.
“ಎಪ್ಪತ್ತು ವರ್ಷಗಳ ಹಿಂದೆ ಇದ್ದ ಸನ್ನಿವೇಶದಲ್ಲೇ ಇಂದು ಭಾರತ ಮತ್ತು ಪಾಕಿಸ್ಥಾನ ನಿಂತಿರುವುದನ್ನು ನಾವು ಕಾಣಬಹುದಾಗಿದೆ. ನಾವು ಪರಸ್ಪರರನ್ನು ದೂರುವುದನ್ನು ನಿಲ್ಲಿಸಿ ಮುಂದಕ್ಕೆ ಸಾಗಬೇಕಾಗಿದೆ; ಎರಡೂ ಕಡೆಗಳಿಂದ ತಪ್ಪಾಗಿದೆ; ಆದರೆ ನಾವು ಭೂತಕಾಲದಲ್ಲಿ ಬದುಕಬಾರದು. ಇತಿಹಾಸದಿಂದ ನಾವು ಪಾಠ ಕಲಿಯಬೇಕು” ಎಂದು ಇಮ್ರಾನ್ ಹೇಳಿದರು.
ಪಾಕ್ ಸೇನಾ ಮುಖ್ಯಸ್ಥ ಬಾಜ್ವಾ ಅವರನ್ನು ಆಲಂಗಿಸಿಕೊಂಡು ಭಾರತದಲ್ಲಿ ವ್ಯಾಪಕ ಟೀಕೆ, ಖಂಡನೆಗಳಿಗೆ ಗುರಿಯಾಗಿರುವ ಮಾಜಿ ಕ್ರಿಕೆಟಿಗ, ಹಾಲಿ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು ಅವರನ್ನು ಸಮರ್ಥಿಸಲು ಇಮ್ರಾನ್ ಯತ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ