3 ತಿಂಗಳ ವಿನಾಯ್ತಿಗೆ ನಿರಾಸಕ್ತಿ!
Team Udayavani, May 10, 2020, 5:58 AM IST
ಲಾಕ್ಡೌನ್ ಘೋಷಣೆಯಾದ ಕೂಡಲೇ, ಜನರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಆರ್ಬಿಐ ಜಾರಿ ಮಾಡಿತು. ಅದರಲ್ಲಿ ಮಹತ್ವದ್ದು; ಮಾಸಿಕ ಕಂತುಗಳನ್ನು ಪಾವತಿ ಮಾಡಲು ಬ್ಯಾಂಕ್ಗಳು ಮೂರು ತಿಂಗಳು ವಿನಾಯ್ತಿ ನೀಡಬೇಕು ಎನ್ನುವುದು. ಇದರ ಪ್ರಯೋಜನ ಪಡೆಯಲು ಹಲವರು ಹಿಂದೇಟು ಹಾಕಿದ್ದಾರೆ.
ಏನಿದು 3 ತಿಂಗಳು ವಿನಾಯ್ತಿ?
ಲಾಕ್ಡೌನ್ನಿಂದ ಉದ್ಯಮಗಳಿಗೆ, ವೇತನದಾರರಿಗೆ ಹಣದ ಸಮಸ್ಯೆಯಿರುತ್ತದೆ. ಆ ಹೊತ್ತಿನಲ್ಲಿ ಸಾಲ ನೀಡಿರುವ ಬ್ಯಾಂಕ್ಗಳು ಕಂತು ಪಾವತಿಗೆ ಮೂರು ತಿಂಗಳು ವಿನಾಯ್ತಿ ನೀಡಬೇಕು ಎಂದು ಆರ್ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಆದೇಶ ನೀಡಿದೆ. ಹೀಗೆ ಮೂರು ತಿಂಗಳು ಕಂತು ಪಾವತಿ ವಿನಾಯ್ತಿಗೆ ಅರ್ಜಿ ಸಲ್ಲಿಸಲು ಅಂತಿಮ ಗಡುವು ಇಲ್ಲ. ಇದರರ್ಥ ಮೂರು ತಿಂಗಳ ಕಂತು ಮನ್ನಾ ಆಗುವುದಿಲ್ಲ, ಮುಂದೂಡಲ್ಪಡುತ್ತದೆ ಅಷ್ಟೇ.
ಹಿಂಜರಿಕೆ ಯಾಕೆ?
ಬ್ಯಾಂಕ್ಗಳು ಮೂರು ತಿಂಗಳು ಕಟ್ಟದ ಕಂತಿನ ಮೊತ್ತವನ್ನು ಸೇರಿಸಿ, ಸಾಲದ ಅವಧಿ ಹೆಚ್ಚಿಸಬಹುದು ಅಥವಾ ಸಾಲ ಕಟ್ಟುವ ಉಳಿದ ಅವಧಿಗೆ ಈ ಮೂರು ತಿಂಗಳಿನ ಹಣವನ್ನು ಹೊಂದಿಸಬಹುದು. ಇದರಿಂದ ಬಡ್ಡಿದರ ತುಸು ಹೆಚ್ಚಾಗುತ್ತದೆ. ವಾಸ್ತವವಾಗಿ ತಮಗೆ ಪ್ರಯೋಜನವಿಲ್ಲ ಎಂಬ ಗ್ರಾಹಕರ ಭಾವನೆ.
ಮುಂದೆ ಹೆಚ್ಚಬಹುದು
ಸದ್ಯ ವಿನಾಯ್ತಿ ಪಡೆಯಲು ಜನ ಬಯಸದಿದ್ದರೂ ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಬಹುದು. ಹಣವನ್ನು ಒಂದಷ್ಟು ಸಂಗ್ರಹಿಸಿ ಇಟ್ಟುಕೊಳ್ಳುವ ಉದ್ದೇಶ ಕೆಲವು ಉದ್ಯಮಗಳಿಗೆ ಇರುತ್ತದೆ. ಇನ್ನು ವೇತನದಾರರಿಗೆ ಭವಿಷ್ಯದ ಬಗೆಗಿನ ಆತಂಕದಿಂದ ಹಣವುಳಿಸಿಕೊಳ್ಳುವ ಯೋಚನೆಯಿದೆ. ನಿಧಾನಕ್ಕೆ ವಿನಾಯ್ತಿ ಬಯಸುವವರ ಪ್ರಮಾಣದಲ್ಲಿ ಏರಿಕೆ ಕಾಣಿಸುತ್ತಿದೆ ಎಂದು ಹೇಳಲಾಗಿದೆ.
ಶೇ.10
ಎಸ್ಬಿಐ ಬ್ಯಾಂಕ್ಗೆ ವಿನಾಯ್ತಿಗೆ ಅರ್ಜಿ ಸಲ್ಲಿಸಿದವರ ಪ್ರಮಾಣ.
ಶೇ. 12
ದೇಶದ 3ನೇ ಬೃಹತ್ ಖಾಸಗಿ ಬ್ಯಾಂಕ್ ಆ್ಯಕ್ಸಿಸ್ನಲ್ಲಿ ಅರ್ಜಿ ಸಲ್ಲಿಸಿದವರ ಪ್ರಮಾಣ.
ಶೇ.5
ಇಂಡಸ್ಇಂಡ್ ಬ್ಯಾಂಕ್ನಲ್ಲಿ ವಿನಾಯ್ತಿಗೆ ಅರ್ಜಿ ಸಲ್ಲಿಸಿದವರ ಪ್ರಮಾಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ