ಸತತ ಮೂರನೇ ದಿನ ಷೇರುಪೇಟೆ ಏರಿಕೆ
Team Udayavani, Sep 12, 2019, 5:59 AM IST
ಮುಂಬಯಿ: ಸತತ 3ನೇ ದಿನ ಮುಂಬಯಿ ಷೇರು ಪೇಟೆ ಸಂವೇದಿ ಸೂಚ್ಯಂಕ ಏರಿಕೆ ದಾಖ ಲಿ ಸಿದ್ದು, ಹೂಡಿಕೆದಾರರ ಮೊಗ ದಲ್ಲಿ ಉಲ್ಲಾಸ ಕಂಡು ಬಂದಿದೆ. ಬುಧ ವಾರ ಹೂಡಿಕೆದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿಸಿದ ಕಾರಣ ಸೆನ್ಸೆಕ್ಸ್ 125 ಅಂಕ ಏರಿಕೆ ಕಂಡು ದಿನ ದಂತ್ಯಕ್ಕೆ 37,270ರಲ್ಲಿ ವಹಿವಾಟು ಅಂತ್ಯ ಗೊಳಿಸಿತು. ನಿಫ್ಟಿ ಕೂಡ 32 ಅಂಕ ಏರಿಕೆಯಾಗಿ 11,035ರಲ್ಲಿ ಕೊನೆಗೊಂಡಿತು.
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಂಥ ಆಟೋಮೊಬೈಲ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಷೇರುಗಳೇ ಬುಧವಾರದ ವಹಿವಾಟು ವೇಳೆ ಏರಿಕೆ ದಾಖಲಿಸಿದವು. ಆಟೋಮೊಬೈಲ್ ಕ್ಷೇತ್ರದ ಬಿಕ್ಕಟ್ಟು ತಿಳಿಗೊಳಿಸುವ ನಿಟ್ಟಿನಲ್ಲಿ ಸೆ. 20ರಂದು ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ತೆರಿಗೆ ರಿಯಾಯಿತಿ ಪ್ರಕಟಿಸಬಹುದು ಎಂಬ ನಿರೀಕ್ಷೆ ಚೇತರಿಕೆಗೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಅಲ್ಲದೆ ಅಮೆರಿಕ ಮತ್ತು ಚೀನ ನಡು ವಿನ ವ್ಯಾಪಾರ ಸಮರವು ಶಮನ ಗೊಳ್ಳುವ ಲಕ್ಷಣ ಗೋಚರಿಸಿದ ಕಾರಣ ಜಾಗತಿಕ ಷೇರು ಮಾರುಕಟ್ಟೆ ಚೇತರಿಸಿ ಕೊಂಡದ್ದೂ ಪರಿಣಾಮ ಬೀರಿದೆ.
ಯೆಸ್ ಬ್ಯಾಂಕ್ ಷೇರುಗಳು ಅತ್ಯಧಿಕ ಅಂದರೆ ಶೇ.13.47ರಷ್ಟು ಏರಿಕೆ ಕಂಡವು. ಡಿಜಿಟಲ್ ಪಾವತಿ ದಿಗ್ಗಜ ಪೇಟಿಎಂ ಈ ಬ್ಯಾಂಕ್ನ ಷೇರುಗಳನ್ನು ಖರೀದಿಸುವ ಸಾಧ್ಯತೆಯಿದೆ ಎಂಬ ಸುದ್ದಿಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್