ಅಮೆಜಾನ್, ಫ್ಲಿಪ್ ಕಾರ್ಟ್ ಗಳಿಗೆ ಟಕ್ಕರ್ ನೀಡಲಿದೆಯೇ ‘ಭಾರತ್ ಇ ಮಾರ್ಕೆಟ್’..?

ದೇಸಿ 'ಭಾರತ್ ಇ ಮಾರ್ಕೆಟ್' ನ ವಿಶೇಷತೆ ಏನು? 

Team Udayavani, Mar 12, 2021, 2:35 PM IST

Trader body CAIT launches vendor onboarding app ahead of e-commerce portal

ನವ ದೆಹಲಿ : ಭಾರತ ಹಂತ ಹಂತವಾಗಿ ದೇಸಿ ಬಳಕೆಯತ್ತ ಮುಖ ಮಾಡುತ್ತಿದೆ. ವೋಕಲ್ ಫಾರ್ ಲೋಕಲ್ ವಿಷನ್‌ ನತ್ತ ಯಶಸ್ವಿ ದಾಪುಗಾಲಿಡುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ.

ಆನ್ಲೈನ್ ಮಾರ್ಕೇಟಿಂಗ್ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ ಅಮೆಜಾನ್, ಫ್ಲಿಪ್‌ ಕಾರ್ಟ್ ಗಳಿಗೆ ಟಕ್ಕರ್ ನೀಡುವಂತೆ  ಆನ್‌ ಲೈನ್ ಶಾಪಿಂಗ್‌ ಗಾಗಿ ಈಗ ಮತ್ತೊಂದು ದೊಡ್ಡ ಪೋರ್ಟಲ್ ಅಡಿಯಿಟ್ಟಿದೆ.

ಸುಮಾರು 8 ಕೋಟಿ ವ್ಯಾಪಾರಿಗಳ ಸಂಘಟನೆಯಾದ ಕಾನ್ಫಿಡರೆಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ವೆಂಡರ್ ಮೊಬೈಲ್ ಅಪ್ಲಿಕೇಶನ್ ‘ಭಾರತ್ ಇ ಮಾರ್ಕೆಟ್’ ನ್ನು  ಬಿಡುಗಡೆ ಮಾಡಿದೆ.

ಓದಿ : ಕಾಲಮಿತಿ‌ ಇಲ್ಲದ ಮೀಸಲು ಅಧ್ಯಯನ ಸಮಿತಿ ರಚನೆ ಕಣ್ಣೊರೆಸುವ ತಂತ್ರ : ಯತ್ನಾಳ

‘ಭಾರತ್ ಇ ಮಾರ್ಕೆಟ್’ ಅಮೇಜ್ಹಾನ್ ಮತ್ತು ಫ್ಲಿಪ್ ಕಾರ್ಟ್ ಗೆ ನೇರ ಸ್ಪರ್ಧೆ ನೀಡಲಿದೆ ಎಂದು ಹೇಳಲಾಗುತ್ತಿದೆ. ‘ಭಾರತ್ ಇ ಮಾರ್ಕೆಟ್’  (Bharat e Market App) ಸಂಪೂರ್ಣ ದೇಶೀಯ ಇ-ಕಾಮರ್ಸ್ ಪ್ಲ್ಯಾಟ್ ಫಾರ್ಮ್ ಆಗಿದೆ.

‘ಭಾರತ್ ಇ ಮಾರ್ಕೆಟ್’ ನ ಮೊಬೈಲ್ ಆ್ಯಪ್ ಸಂಪೂರ್ಣ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಎಂದು CAIT ಹೇಳಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ವೋಕಲ್ ಫಾರ್ ಲೋಕಲ್ ವಿಷನ್‌ ನನ್ನು ಆಧರಿಸಿ ಈ ಆ್ಯಪ್ ನನ್ನು ಅಭಿವೃದ್ಧಿಗೊಳಿಸಲಾಗಿದೆ. 2021 ರ ಡಿಸೆಂಬರ್ ವೇಳೆಗೆ ಸುಮಾರು 7 ಲಕ್ಷ ವ್ಯಾಪಾರಿಗಳು ಈ ಪ್ಲಾಟ್‌ ಫಾರ್ಮ್‌ಗೆ ಸೇರುವ ನಿರೀಕ್ಷೆಯಿದೆ ಎಂದು CAIT ಮಾಹಿತಿ ನೀಡಿದೆ

ಓದಿ : ಲೈವ್ ಕಾರ್ಯಕ್ರಮ: ಟಿವಿ ನಿರೂಪಕನ ಮೇಲೆ ಕಳಚಿ ಬಿದ್ದ ಸ್ಟುಡಿಯೋ ಸೆಟ್; ವಿಡಿಯೋ ವೈರಲ್

ದೇಸಿ ‘ಭಾರತ್ ಇ ಮಾರ್ಕೆಟ್’ ನ ವಿಶೇಷತೆ ಏನು?

  1. ಈ ಪೋರ್ಟಲ್‌ನಲ್ಲಿ, ಬ್ಯನಿಸೆನ್ ಟು ಬ್ಯುಸಿನೆಸ್ (B2B) ಮತ್ತು ಬ್ಯುಸಿನೆಸ್ ಟು ಕಸ್ಟಮರ್ (B2C) ಸರಕುಗಳ ಮಾರಾಟ ಮತ್ತು ಖರೀದಿ  ಸಾಧ್ಯ.
  2. ಈ ಪೋರ್ಟಲ್‌ನಲ್ಲಿ ‘ಇ-ಶಾಪ್’ ತೆರೆಯಲು ಬಯಸುವವರು  ಮೊದಲುಮೊಬೈಲ್ಆ್ಯಪ್ ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬೇಕು.
  3. ಗೌಪ್ಯತೆಯ ವಿಚಾರದಲ್ಲಿ ಬಹಳ ಸುರಕ್ಷಿತವಾಗಿದೆ ಎಂದು CAIT ಹೇಳಿದೆ.  ಡೇಟಾ ಸೋರಿಕೆಯಾಗುವುದಿಲ್ಲ .
  4. ಈ ಪ್ಲಾಟ್‌ ಫಾರ್ಮ್‌ ನಲ್ಲಿ ಯಾವುದೇ ವಿದೇಶಿ ಫಂಡಿಂಗ್ ನ್ನು ಸ್ವೀಕರಿಸಲಾಗುವುದಿಲ್ಲ.
  5. ಈ ಪೋರ್ಟಲ್‌ನಲ್ಲಿ ಚೀನೀ ವಸ್ತುಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  6. ಸ್ಥಳೀಯ ಕುಶಲಕರ್ಮಿಗಳು, ಮತ್ತು ಸಣ್ಣ ವ್ಯಾಪಾರಿಗಳಿಗೆ  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸಲಾಗುತ್ತದೆ.
  7.  ಈ ಪೋರ್ಟ ಲ್ ನಲ್ಲಿ, ವ್ಯಾಪಾರ ನಡೆಸಲು ಯಾವುದೇ ಕಮಿಷನ್ ವಿಧಿಸಲಾಗುವುದಿಲ್ಲ.

ಇನ್ನು, ‘ಭಾರತ್ ಇ ಮಾರ್ಕೆಟ್’ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಸರಕುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ‘ಭಾರತ್ ಇ-ಮಾರ್ಕೆಟ್’ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಸರಕುಗಳನ್ನು ಅಥವಾ ಗ್ರಾಹಕರು ಬಯಸಿದ ವಸ್ತುಗಳನ್ನು ಒದಗಿಸಲಿವೆ ಎಂದು ಸಿಎಐಟಿ ಹೇಳಿದೆ.

ಇದು ಹೊಸ ಅತ್ಯಾಧುನಿಕ ತಂತ್ರಜ್ಞಾನ, ವಿತರಣಾ ವ್ಯವಸ್ಥೆ, ಸರಕುಗಳ ಗುಣಮಟ್ಟದ ನಿಯಂತ್ರಣ, ಡಿಜಿಟಲ್ ಪೇಮೆಂಟ್ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿದೆ.  ಪ್ರಸ್ತುತ, ಈ ಪೋರ್ಟಲ್, ವೆಬ್ ಮತ್ತು ಆಂಡ್ರಾಯ್ಡ್  ಅಪ್ಲಿಕೇಶನ್‌ ನಲ್ಲಿ ಮಾತ್ರ ಲಭ್ಯವಿದೆ.  ಇದನ್ನು  ಗೂಗಲ್ ಪ್ಲೇ ಸ್ಟೋರ್  ನಿಂದ ಡೌನ್‌ ಲೋಡ್ ಮಾಡಿಕೊಳ್ಳಬಹುದು. ಇದು ಶೀಘ್ರದಲ್ಲೇ ಐಒಎಸ್ ನಲ್ಲಿ  ಸಹ ಬಿಡುಗಡೆಯಾಗಲಿದೆ ಎಂದು CAIT ಹೇಳಿದೆ.

ಓದಿ : ಬದುಕು, ಕೊರಗಿಗಷ್ಟೇ ಮೀಸಲಿಟ್ಟ ಕತ್ತಲೆ ಕೋಣೆಯಲ್ಲ..!

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.