ಗಲ್ಫ್ ರಾಷ್ಟ್ರಗಳಲ್ಲಿ ಪ್ರತಿನಿತ್ಯ 10 ಭಾರತೀಯ ಕಾರ್ಮಿಕರ ಸಾವು!
Team Udayavani, Nov 6, 2018, 6:05 AM IST
ಹೊಸದಿಲ್ಲಿ: ಗಲ್ಫ್ ದೇಶಗಳಿಗೆ ಭಾರತೀಯರು ಭಾರಿ ಪ್ರಮಾಣದಲ್ಲಿ ಉದ್ಯೋಗ ಅರಸಿ ತೆರಳುತ್ತಿದ್ದಾರಾದರೂ, ಅಲ್ಲಿ ಕಳೆದ ಆರು ವರ್ಷಗಳಲ್ಲಿ ಸರಾಸರಿ ದಿನಕ್ಕೆ 10 ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಆರ್ಟಿಐ ಪ್ರತಿ ಕ್ರಿಯೆಗಳಿಂದ ತಿಳಿದುಬಂದಿದೆ.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಎಂಬ ಸಂಸ್ಥೆಯ ವೆಂಕಟೇಶ್ ನಾಯಕ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಿಂದ ಪಡೆದ ಆರ್ಟಿಐ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. 2012ರಿಂದ 2018ರ ಅವಧಿಯಲ್ಲಿ ಬಹರೈನ್, ಒಮನ್, ಕತಾರ್ ಮತ್ತು ಸೌದಿ ಅರೇಬಿಯಾದ ಮಾಹಿತಿಯನ್ನು ಆರ್ಟಿಐ ಮೂಲಕ ಪಡೆಯಲಾಗಿದೆ.
2012 ಮತ್ತು 2018ರ ಅವಧಿಯಲ್ಲಿ 24570 ಭಾರತೀಯರು ಸಾವನ್ನಪ್ಪಿದ್ದಾರೆ. ಭಾರತಕ್ಕೆ ವಿದೇಶಗಳಿಂದ ಕಳುಹಿಸುವ ಹಣದ ಪೈಕಿ ಗಲ್ಫ್ ದೇಶಗಳದ್ದೇ ಅರ್ಧ ಕ್ಕಿಂತಲೂ ಹೆಚ್ಚಿರುತ್ತದೆ. 28 ಲಕ್ಷ ಕೋಟಿ ರೂ. 2012 ರಿಂದ 2017ರ ಅವಧಿಯಲ್ಲಿ ಭಾರತಕ್ಕೆ ವಿದೇಶಗಳಿಂದ ಹರಿದು ಬಂದಿದ್ದು, ಈ ಪೈಕಿ 14 ಲಕ್ಷ ಕೋಟಿ ರೂ. ಗಲ್ಫ್ ದೇಶಗಳಿಂದ ಬಂದಿದೆ. ಹೀಗಾಗಿ ಒಮನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ ಹೋಲಿಸಿದರೆ 187 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಾಯಕ್ ಹೇಳಿದ್ದಾರೆ. ಇದೇ ರೀತಿ, ಬಹರೈನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ 183 ಜನರು ಸಾವನ್ನಪ್ಪಿದ್ದಾರೆ.
ಗಲ್ಫ್ ದೇಶಗಳಿಗೆ ಭಾರತೀಯರು ಭಾರಿ ಪ್ರಮಾಣದಲ್ಲಿ ಉದ್ಯೋಗ ಅರಸಿ ತೆರಳುತ್ತಿದ್ದಾರಾದರೂ, ಅಲ್ಲಿ ಕಳೆದ ಆರು ವರ್ಷಗಳಲ್ಲಿ ಸರಾಸರಿ ದಿನಕ್ಕೆ 10 ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಆರ್ಟಿಐ ಪ್ರತಿ ಕ್ರಿಯೆಗಳಿಂದ ತಿಳಿದುಬಂದಿದೆ.
ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಎಂಬ ಸಂಸ್ಥೆಯ ವೆಂಕಟೇಶ್ ನಾಯಕ್ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದಿಂದ ಪಡೆದ ಆರ್ಟಿಐ ಪ್ರತಿಕ್ರಿಯೆಗಳ ಆಧಾರದಲ್ಲಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. 2012ರಿಂದ 2018ರ ಅವಧಿಯಲ್ಲಿ ಬಹರೈನ್, ಒಮನ್, ಕತಾರ್ ಮತ್ತು ಸೌದಿ ಅರೇಬಿಯಾದ ಮಾಹಿತಿಯನ್ನು ಆರ್ಟಿಐ ಮೂಲಕ ಪಡೆಯಲಾಗಿದೆ.
2012 ಮತ್ತು 2018ರ ಅವಧಿಯಲ್ಲಿ 24570 ಭಾರತೀಯರು ಸಾವನ್ನಪ್ಪಿದ್ದಾರೆ. ಭಾರತಕ್ಕೆ ವಿದೇಶಗಳಿಂದ ಕಳುಹಿಸುವ ಹಣದ ಪೈಕಿ ಗಲ್ಫ್ ದೇಶಗಳದ್ದೇ ಅರ್ಧ ಕ್ಕಿಂತಲೂ ಹೆಚ್ಚಿರುತ್ತದೆ. 28 ಲಕ್ಷ ಕೋಟಿ ರೂ. 2012 ರಿಂದ 2017ರ ಅವಧಿಯಲ್ಲಿ ಭಾರತಕ್ಕೆ ವಿದೇಶಗಳಿಂದ ಹರಿದು ಬಂದಿದ್ದು, ಈ ಪೈಕಿ 14 ಲಕ್ಷ ಕೋಟಿ ರೂ. ಗಲ್ಫ್ ದೇಶಗಳಿಂದ ಬಂದಿದೆ. ಹೀಗಾಗಿ ಒಮನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ ಹೋಲಿಸಿದರೆ 187 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಾಯಕ್ ಹೇಳಿದ್ದಾರೆ. ಇದೇ ರೀತಿ, ಬಹರೈನ್ನಿಂದ ಆಗಮಿಸಿದ ತಲಾ 100 ಕೋಟಿ ರೂ.ಗೆ 183 ಜನರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್
MUST WATCH
ಹೊಸ ಸೇರ್ಪಡೆ
BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Sandalwood; ಎವಿಡೆನ್ಸ್ ಮೇಲೆ ಪ್ರವೀಣ್ ಕಾನ್ಫಿಡೆನ್
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024
Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ
Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ