ಗಗನಸಖಿ ಕನಸು ನನಸು ಮಾಡಿಕೊಂಡ ಬುಡಕಟ್ಟು ಯುವತಿ
Team Udayavani, Sep 3, 2022, 7:20 AM IST
ತಿರುವನಂತಪುರಂ: ಕೇರಳದ ಆ ಯುವತಿ 12 ವರ್ಷದವಳಿದ್ದಾಗಲೇ ಗಗನಸಖಿ ಆಗಬೇಕೆಂದು ಕನಸು ಕಂಡಿದ್ದರು. ಪರಿಶಿಷ್ಟ ಪಂಗಡದವರಿಗೆ ಸಾಧ್ಯವಿಲ್ಲ ಎಂದೆನಿಸಿಕೊಂಡಿದ್ದ ಕನಸನ್ನು ಇದೀಗ ನನಸು ಮಾಡಿ ತೋರಿಸಿದ್ದಾರೆ ಗೋಪಿಕಾ ಗೋವಿಂದ್.
ಕಣ್ಣೂರು ಜಿಲ್ಲೆಯ ಕವುಂಕುಡಿ ಎಸ್ಟಿ ಕಾಲೋನಿಯ ಗೋಪಿಕಾ(24) ಇನ್ನು ಕೆಲ ದಿನಗಳಲ್ಲಿ “ಏರ್ ಇಂಡಿಯಾ ಎಕ್ಸ್ಪ್ರೆಸ್’ ಸಂಸ್ಥೆಯ ಗಗನಸಖಿಯಾಗಲಿದ್ದಾರೆ. ರಾಜ್ಯದಲ್ಲಿ ಗಗನಸಖಿಯಾದ ಮೊದಲ ಎಸ್ಟಿ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ.
ಗಗನಸಖಿ ಕನಸು ಕಂಡಿದ್ದ ಗೋಪಿಕಾಗೆ ಅದರ ಕೋರ್ಸಿನ ಖರ್ಚು ವೆಚ್ಚದ ಮಾಹಿತಿ ತಿಳಿದು ನಿರಾಸೆಯಾಗಿತ್ತು. ಅದೇ ಕಾರಣಕ್ಕೆ ಅವರು ಬಿಎಸ್ಸಿ ವಿದ್ಯಾಭ್ಯಾಸ ಮಾಡಲಾರಂಭಿಸಿದ್ದಾರೆ.
ಆ ವೇಳೆ ಅವರಿಗೆ ರಾಜ್ಯ ಸರ್ಕಾರವು ಎಸ್ಟಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಖರ್ಚು ಭರಿಸುವ ಯೋಜನೆ ಬಗ್ಗೆ ಮಾಹಿತಿ ಸಿಕ್ಕಿದೆ. ಅದನ್ನು ಬಳಸಿಕೊಂಡ ಅವರು ವಯನಾಡಿನ ಡ್ರೀಮ್ ಸ್ಕೈ ಏವಿಯೇಷನ್ ತರಬೇತಿ ಅಕಾಡೆಮಿಯಲ್ಲಿ ಐಎಟಿಎ ಗ್ರಾಹಕ ಸೇವಾ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ನಂತರ ಮುಂಬೈನಲ್ಲಿ ಏರ್ ಇಂಡಿಯಾದಿಂದ ತರಬೇತಿ ಪಡೆದಿದ್ದಾರೆ. ತರಬೇತಿ ಪೂರ್ಣಗೊಳಿಸಿರುವ ಅವರು ಶೀಘ್ರವೇ ಗಗನಸಖಿಯಾಗಿ ಹಾರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು