ಉತ್ತರ ಪ್ರದೇಶ ಮಳೆಯಬ್ಬರ: ಒಂದೇ ದಿನ 16 ಬಲಿ
Team Udayavani, Sep 3, 2018, 1:00 PM IST
ಲಕ್ನೋ/ಶಿಮ್ಲಾ: ಉತ್ತರ ಪ್ರದೇಶ ದಾದ್ಯಂತ ಮತ್ತೆ ಮಳೆಯ ಅಬ್ಬರ ತೀವ್ರಗೊಂಡಿದ್ದು, ಒಂದೇ ದಿನದಲ್ಲಿ 16 ಮಂದಿ ಮೃತ ಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿ ದ್ದಾರೆ. ಇನ್ನೂ 2 ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಶಹಜಹಾನ್ಪುರವೊಂದರಲ್ಲೇ ಶನಿವಾರ ರಾತ್ರಿ ಸಿಡಿಲಿಗೆ ಕನಿಷ್ಠ 6 ಮಂದಿ ಬಲಿಯಾಗಿದ್ದು, 7 ಮಂದಿ ಗಾಯಗೊಂಡಿ ದ್ದಾರೆ. ಸೀತಾಪುರ ಜಿಲ್ಲೆಯಲ್ಲಿ ಮೂವರು, ಔರಯ್ನಾ ಮತ್ತು ಅಮೇಠಿಯಲ್ಲಿ ತಲಾ ಇಬ್ಬರು, ಲಖೀಂಪುರ ಖೇರಿ, ರಾಯ ಬರೇಲಿ, ಉನ್ನಾವ್ನಲ್ಲಿ ತಲಾ ಒಬ್ಬರು ಮಳೆ ಸಂಬಂಧಿ ದುರಂತಗಳಿಗೆ ಬಲಿಯಾಗಿದ್ದಾರೆ. 18 ಜಾನುವಾರುಗಳೂ ಅಸುನೀಗಿದ್ದು, 461 ಮನೆಗಳು ಹಾನಿಗೀಡಾಗಿವೆ.
ಡೋಪ್ಲಾರ್ ರೇಡಾರ್
ಇದೇ ವೇಳೆ, ಹಿಮಾಚಲ ಪ್ರದೇಶ ದಲ್ಲಿ ಮೂರು ಡೋಪ್ಲರ್ ರೇಡಾರ್ಗಳು, ಸ್ನೋ ಗೇಜರ್ಗಳು ಹಾಗೂ ಅಟೋಮ್ಯಾಟಿಕ್ ಹವಾಮಾನ ಕೇಂದ್ರಗಳನ್ನು ನಿರ್ಮಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಇವುಗಳ ಮೂಲಕ ಹವಾಮಾನ, ಹಿಮಪಾತ ಹಾಗೂ ಭೂಕುಸಿತಗಳ ಕುರಿತು ನಿಖರ ಮಾಹಿತಿ ಪಡೆಯಬಹುದಾಗಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು