![ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್ ದರ ಏರಿಸಿರಲಿಲ್ಲ: ಎಚ್ಡಿಕೆ](https://www.udayavani.com/wp-content/uploads/2024/06/hdk-ss-415x256.jpg)
ತಿಮ್ಮಪ್ಪನ ದರ್ಶನಕ್ಕೆ 30 ತಾಸು ಸರತಿ ಸಾಲು; ತಿರುಮಲದಲ್ಲಿ ಏಕಾಏಕಿ ಹೆಚ್ಚಿದ ಜನಸಂದಣಿ
ಜೂನ್ 30ರ ವರೆಗೆ ವಿಐಪಿ ದರ್ಶನ ರದ್ದು
Team Udayavani, May 27, 2024, 7:04 AM IST
![ತಿಮ್ಮಪ್ಪನ ದರ್ಶನಕ್ಕೆ 30 ತಾಸು ಸರತಿ ಸಾಲು; ತಿರುಮಲದಲ್ಲಿ ಏಕಾಏಕಿ ಹೆಚ್ಚಿದ ಜನಸಂದಣಿ](https://www.udayavani.com/wp-content/uploads/2024/05/Tirupathi-Temple1-620x422.jpg)
ತಿರುಮಲ: ರಜೆ ಹಾಗೂ ವಾರಾಂತ್ಯದ ಕಾರಣ ಆಂಧ್ರದ ತಿರುಮಲದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಧರ್ಮ ದರ್ಶನಕ್ಕೆ ಕನಿಷ್ಠ ಪಕ್ಷ 30 ತಾಸು ಸರತಿಯಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ.
ದೇವಸ್ಥಾನದ ಬಳಿ ಇರುವ ವೈಕುಂಠಂ ಕಾಂಪ್ಲೆಕ್ಸ್ನಿಂದ ಜನರು ಕಿ.ಮೀ.ಗಟ್ಟಲೆ ದೂರ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಶನಿವಾರ ದೇಗುಲಕ್ಕೆ ಬಂದವರು ಬರೋಬ್ಬರಿ 30 ತಾಸು ಸರತಿಯಲ್ಲಿ ಕಾದು ದರ್ಶನ ಪಡೆದರು. 10 ದಿನಗಳಲ್ಲಿ ತಿರುಪತಿ ದೇವಸ್ಥಾನಕ್ಕೆ ಬರೋಬ್ಬರಿ 2.6 ಲಕ್ಷ ಮಂದಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೆ ವಿಐಪಿ ಗಳಿಗಾಗಿ ವಿಶೇಷ ದರ್ಶನ ವ್ಯವಸ್ಥೆ ಮಾಡಿದ್ದ ಕಾರಣ ಜನರು ಕಾಯು ವಂತಾಗಿದೆ.
ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಜೂ. 30ರ ವರೆಗೆ ಎಲ್ಲ ರೀತಿಯ ವಿಐಪಿ ದರ್ಶನ ವ್ಯವಸ್ಥೆಯನ್ನು ಟಿಟಿಡಿ ರದ್ದು ಮಾಡಿದೆ. ಶುಕ್ರವಾರ ಒಂದೇ ದಿನ 71 ಸಾವಿರ ಜನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಉಚಿತ ಆಹಾರ ವ್ಯವಸ್ಥೆ
ಸರತಿಯಲ್ಲಿ ನಿಂತಿರುವವರಿಗೆ ತಿರುಪತಿ ದೇಗುಲದ ವತಿಯಿಂದ ಉಚಿತ ಆಹಾರದ ವ್ಯವಸ್ಥೆ ಯನ್ನು ಮಾಡಿದೆ. ಇದ ಕ್ಕಾಗಿ ನಾಲ್ಕು ಕಡೆ ವಿಶೇಷ ಪಾಯಿಂಟ್ಗಳನ್ನು ತೆರೆಯ ಲಾಗಿದ್ದು, ಅಲ್ಲಿಂದ ಸಾಲಿನಲ್ಲಿ ನಿಂತಿರುವವರಿಗೆ ಊಟ ಒದಗಿಸಲಾಗುತ್ತಿದೆ. 27 ಕಡೆ ಕುಡಿಯುವ ನೀರಿನ ಪಾಯಿಂಟ್ಗಳನ್ನು ಸ್ಥಾಪನೆ ಮಾಡಲಾಗಿದೆ. ದೇವರ ದರ್ಶನಕ್ಕಾಗಿ ಬರುವ ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ಸಕಲ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ.
ಟಾಪ್ ನ್ಯೂಸ್
![ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್ ದರ ಏರಿಸಿರಲಿಲ್ಲ: ಎಚ್ಡಿಕೆ](https://www.udayavani.com/wp-content/uploads/2024/06/hdk-ss-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BJP 2](https://www.udayavani.com/wp-content/uploads/2024/06/BJP-2-3-150x91.jpg)
Election: ಮಹಾರಾಷ್ಟ್ರ ಸೇರಿ 4 ರಾಜ್ಯ ಉಸ್ತುವಾರಿ ನೇಮಿಸಿದ ಬಿಜೆಪಿ
![1-aasdsadsa-dad](https://www.udayavani.com/wp-content/uploads/2024/06/1-aasdsadsa-dad-150x87.jpg)
Bihar; ಮುಸ್ಲಿಂ ಮತ್ತು ಯಾದವರ ಕೆಲಸ ಮಾಡುವುದಿಲ್ಲ: ಜೆಡಿಯು ಸಂಸದ
![1-asdsdsad](https://www.udayavani.com/wp-content/uploads/2024/06/1-asdsdsad-150x98.jpg)
Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ
![Rahul Gandhi resfused to take Leader of Opposition post In Lok Sabha](https://www.udayavani.com/wp-content/uploads/2024/06/rahul-14-150x83.jpg)
Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್
![Goa Calangute Beach: ಮೊಬೈಲ್,ಬ್ಯಾಗ್ ಕಳ್ಳತನ; ಮೂವರ ಬಂಧನ](https://www.udayavani.com/wp-content/uploads/2024/06/GOA-A-150x81.jpg)
Goa Calangute Beach: ಮೊಬೈಲ್,ಬ್ಯಾಗ್ ಕಳ್ಳತನ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.