ಅಮರನಾಥ ದಾಳಿ ಮಾಸ್ಟರ್ ಮೈಂಡ್ ಅಬು ಇಸ್ಮಾಯಿಲ್ ಮಟಾಷ್
Team Udayavani, Sep 14, 2017, 7:30 PM IST
ಶ್ರೀನಗರ : ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಕಾಶ್ಮೀರದ ನೌಗಾಂವ್ ವಲಯದಲ್ಲಿ ಇಂದು ಗುರುವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಅಮರನಾಥ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ಕಟ್ಟರ್ ಭಯೋತ್ಪಾದಕ, ಅಬು ಇಸ್ಮಾಯಿಲ್ ಹತನಾಗಿದ್ದಾನೆ.
ಉಗ್ರ ಅಬು ಇಸ್ಮಾಯಿಲ್ ಜತೆಗೆ ಇನ್ನೋರ್ವ ಉಗ್ರ ಕೂಡ ಹತನಾಗಿದ್ದು ಆತನೂ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆಸಿದವನಾಗಿದ್ದಾನೆ ಎಂದು ಭದ್ರತಾ ಮೂಲಗಳು ಹೇಳಿವೆ.
ಈ ಮಹತ್ತರ ಯಶಸ್ಸಿಗೆ ಪ್ರತಿಕ್ರಿಯಿಸುತ್ತಾ ಸಿಆರ್ಪಿಎಫ್ ಮಹಾ ನಿರ್ದೇಶಕರಾದ ಮುನೀರ್ ಅಹ್ಮದ್ ಖಾನ್ (ಐಪಿಎಸ್, ಐಜಿಪಿ, ಕಾಶ್ಮೀರ) ಅವರು “ಇದೊಂದು ಬಹಳ ದೊಡ್ಡ ಸಾಧನೆ. ಹತನಾದ ಉಗ್ರ ಅಬು ಇಸ್ಮಾಯಿಲ್ ಅಮರನಾಥ ಯಾತ್ರಿಕರ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ’ ಎಂದು ಹೇಳಿದ್ದಾರೆ.
“ಈ ಅದ್ಭುತ ಯಶಸ್ಸಿಗಾಗಿ ನಾವು ಭದ್ರತಾ ಪಡೆಗಳ ತಂಡವನ್ನು ಅಭಿನಂದಿಸುತ್ತೇವೆ. ಉಗ್ರ ಅಬು ಇಸ್ಮಾಯಿಲ್ ವಿರುದ್ಧದ ಎನ್ಕೌಂಟರ್ ಕಾರ್ಯಾಚರಣೆ ಕೇವಲ ಅರ್ಧ ತಾಸಿನೊಳಗೆ ಮುಗಿದು ಹೋಯಿತು. ಆತನೇ ನಮ್ಮ ಪ್ರಮುಖ ಗುರಿಯಾಗಿದ್ದ’ ಎಂದು ಮುನೀರ್ ಅಹ್ಮದ್ ಖಾನ್ ಹೇಳಿದರು.
ಅಬು ಇಸ್ಮಾಯಿಲ್ ಹತನಾದ ಎನ್ಕೌಂಟರ್ ಶ್ರೀನಗರ ಹೊರವಲಯದ ನೌಗಾಂವ್ನ ಅರಿಗಾಂವ್ ಎಂಬಲ್ಲಿ ನಡೆಯಿತು.
ಅಬು ಇಸ್ಮಾಯಿಲ್ ಎಲ್ಇಟಿ ಉಗ್ರ ಮತ್ತು ಪಾಕ್ ಪ್ರಜೆಯಾಗಿದ್ದಾನೆ. ಈ ವರ್ಷ ಜುಲೈ ತಿಂಗಳಲ್ಲಿ ಎಂಟು ಮಂದಿ ಅಮರನಾಥ ಯಾತ್ರಿಕರನ್ನು ಕೊಲ್ಲಲಾದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ.
ಈ ವರ್ಷ ಆಗಸ್ಟ್ನಲ್ಲಿ ಪುಲ್ವಾಮಾ ಎನ್ಕೌಂಟರ್ನಲ್ಲಿ ಲಷ್ಕರ್ ಮುಖ್ಯಸ್ಥ ಅಬು ದುಜಾನಾ ಹತನಾದ ಬಳಿಕ ಆತನ ಉತ್ತರಾಧಿಕಾರಿಯಾಗಿದ್ದ ಅಬು ಇಸ್ಮಾಯಿಲ್ ಕಾಶ್ಮೀರ ಕಣಿವೆಯಲ್ಲಿ ಎಲ್ಇಟಿ ಉಗ್ರ ದಾಳಿಗಳ ಮುಖ್ಯಸ್ಥನಾಗಿ ದುಡಿಯುತ್ತಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ