ಲಂಚದ ರೂಪದಲ್ಲಿ ಮದ್ಯ ಸ್ವೀಕರಿಸುತ್ತಿದ್ದ ಅಧಿಕಾರಿಯ ಬಂಧನ
ಇದು ಕ್ಯಾಶ್ಲೆಸ್ ಲಂಚ....!
Team Udayavani, Jun 4, 2019, 12:10 PM IST
ಲಾತೂರ್: ಲಂಚದ ರೂಪದಲ್ಲಿ ಹಣ ಪಡೆಯುವವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಕಾರ್ಯಾಚರಣೆ ನಡೆಸಿದ ಪ್ರಕರಣಗಳು ಅನೇಕ ವೇಳೆ ಕಂಡುಬಂದಿವೆೆ. ಅದೇ ಲಾತೂರಿ ನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೋರ್ವ ಲಂಚದ ರೂಪದಲ್ಲಿ ಮದ್ಯ ಸ್ವೀಕರಿಸಿದ್ದ ರ ವಿರುದ್ಧ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಆರೋಪಿಯನ್ನು ಬಂಧಿಸಿದೆ.
ಲಾತೂರ್ ತಾಲೂಕಿನ ನಿವಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯಕೀಯ ಅಧಿಕಾರಿ ಡಾ| ಬಾಲಚಂದ್ರ ಹರಿಹರ ಚಾಕೂರ್ಕರ್, ಹಣದ ಬದಲು ಮದ್ಯದ ಬಾಟಲಿ ಗಳ ಲಂಚದ ರೂಪದಲ್ಲಿ ಸ್ವೀಕರಿಸು ತ್ತಿದ್ದ. ಆರೋಗ್ಯ ಇಲಾಖೆ ಸಿಬಂದಿ ಯೋರ್ವರು ನೀಡಿದ ದೂರಿನ ವಿರುದ್ಧ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಆರೋಪಿಯನ್ನು ಬಂಧಿಸಿದೆ.
ಸಂಬಂಧಿಸಿದ ಸಿಬಂದಿಯ ಬಿ ಪ್ಲಸ್ ಶ್ರೇಣಿಯನ್ನು ರದ್ದು ಗೊಳಿಸುವ ಜತೆಗೆ ಅವರಿಗೆ ಎ ಪ್ಲಸ್ ಮಾಡಬೇಕು ಎಂದು ವರದಿ ಸಲ್ಲಿಸುವ ಪತ್ರ ಅಧಿಕಾರಿ ಬಾಲಚಂದ್ರ ಚಾಕೂರ್ಕರ್ ಬಳಿ ಬಂದಿದ್ದು, ಇದನ್ನು ಸಲ್ಲಿಸಬೇಕಾದರೆ ಮದ್ಯದ ಬಾಟಲಿಗಳನ್ನು ನೀಡಬೇಕೆಂದು ಅಧಿಕಾರಿ ಬೇಡಿಕೆ ಇರಿಸಿದ್ದ. ಈ ಹಿಂದೆ ಅನೇಕ ಬಾರಿ ಯಾವುದೇ ಕೆಲಸ ಮಾಡಬೇಕಾದರೂ ಮದ್ಯದ ಬಾಟಲಿ ನೀಡಬೇಕೆಂದು ಬೇಡಿಕೆ ಇರಿಸುತ್ತಿದ್ದ. ಇದರಿಂದ ರೋಸಿರೋದ ಸಿಬಂದಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನಂತೆ ಕಾರ್ಯಾಚರಣೆ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಡಾ| ಚಾಕೂರ್ಕರ್ ಅವರನ್ನು ಸುಮಾರು 980ರೂ. ಗಳಷ್ಟು ಬೆಲೆಬಾಳುವ ಮದ್ಯದ ಬಾಟಲಿ ಜತೆ ಬಂಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ