ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ: ಮೌನಾಚರಣೆ
Team Udayavani, Feb 23, 2018, 9:26 AM IST
ಹೊಸದಿಲ್ಲಿ: ಆಪ್ ಶಾಸಕರಿಂದ ದಿಲ್ಲಿಯ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಹಲ್ಲೆಗೊಳಗಾದ ಘಟನೆ ವಿರುದ್ಧ ಅಧಿಕಾರಿಗಳ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಶಾಸಕಾಂಗದಿಂದ ವಿಶ್ವಾಸ ಭಂಗವಾದದ್ದನ್ನು ಖಂಡಿಸಿ ದಿಲ್ಲಿ ಸರಕಾರದ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಾರ್ವಜನಿಕ ಸೇವೆ(ಡಿಎಎನ್ಐಸಿಎಸ್) ಮತ್ತು ದಿಲ್ಲಿ ಆಡಳಿತ ಆಧೀನ ಸೇವೆ(ಡಿಎಎಸ್ಎಸ್) ಅಧಿಕಾರಿಗಳು ಗುರುವಾರ 5 ನಿಮಿಷಗಳ ಕಾಲ ತಮ್ಮ ಕಚೇರಿಗಳ ಎದುರು ಮೌನಾಚರಣೆ ನಡೆಸಿದರು. ಎಲ್ಲಾ ಕರ್ತವ್ಯ ದಿನಗಳಂದು ಅಪರಾಹ್ನ 1.30ಕ್ಕೆ ತಮ್ಮ ಕಚೇರಿಗಳ ಎದುರು 5 ನಿಮಿಷಗಳ ಕಾಲ ಮೌನಾಚರಿಸಲು ನಿರ್ಧರಿಸಿದ್ದಾರೆ.