ಲಕ್ಸಂಬರ್ಗ್ ಶೈತ್ಯ ಶ್ರೀರಕ್ಷೆ!
ದಿಲ್ಲಿಗೆ ಬಂದಿಳಿದ "ಬಿ ಮೆಡಿಕಲ್ ಸಿಸ್ಟಮ್ಸ್' ಅಧಿಕಾರಿಗಳು
Team Udayavani, Dec 5, 2020, 7:46 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲಸಿಕೆಗಳ ಉತ್ಕೃಷ್ಟ ಸಂಗ್ರಾಹಕ ವ್ಯವಸ್ಥೆಗೆ ಖ್ಯಾತಿ ಪಡೆದ ಲಕ್ಸಂಬರ್ಗ್ನ “ಬಿ ಮೆಡಿಕಲ್ ಸಿಸ್ಟಮ್ಸ್’ ಸಂಸ್ಥೆ ಜತೆಗಿನ ಮಹತ್ವದ ಮಾತುಕತೆಗೆ ಭಾರತ ಸನ್ನದ್ಧವಾಗಿದೆ. ಕೋವಿಡ್ ಲಸಿಕೆ ಲಭ್ಯವಾದ ಬಳಿಕ ಭಾರತದಾದ್ಯಂತ ಸುಸಜ್ಜಿತ ಶೈತ್ಯಾಗಾರ ವ್ಯವಸ್ಥೆ ಕಲ್ಪಿಸುವ ಹೊಣೆಯನ್ನು ಪ್ರಧಾನಿ ಮೋದಿ “ಬಿ ಮೆಡಿಕಲ್ ಸಿಸ್ಟಮ್ಸ್’ಗೆ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳು ಹೊಸದಿಲ್ಲಿ ತಲುಪಲಿದ್ದು, ಇವರೊಂದಿಗೆ ಹಿರಿಯ ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ಆರಂಭಿಸಲಿದ್ದಾರೆ.
ಏನೇನು ಚರ್ಚೆ?: ಭಾರತ ಸಂಶೋಧಿಸುತ್ತಿರುವ ಲಸಿಕೆ ಜತೆಗೆ, ಕೇಂದ್ರ ಸರಕಾರ ಒಪ್ಪಂದ ಮಾಡಿಕೊಳ್ಳುವ ವಿದೇಶಿ ಲಸಿಕೆ ಸಂರಕ್ಷಣೆಗೆ ಅಗತ್ಯವಿರುವ ಶೈತ್ಯಾಗಾರಗಳು, ಅವುಗಳನ್ನು ನಿರ್ವಹಿಸುವ ಕುರಿತು ಸಭೆ ಚರ್ಚಿಸಲಿದೆ. ಅಗತ್ಯವಿರುವ ಸಾಗಾಟ ಬಾಕ್ಸ್ಗಳು, ಫ್ರೀಝರ್ಗಳ ಲೆಕ್ಕವನ್ನೂ ಸರಕಾರದ ಟೀಂ, ಲಕ್ಸಂಬರ್ಗ್ ಸಂಸ್ಥೆಯ ಮುಂದಿಡಲಿದೆ. ಈ ಇಬ್ಬರು ಅಧಿಕಾರಿಗಳು ಗುಜರಾತ್ನ ಝೈಡಸ್ ಕ್ಯಾಡೆಲಾ ಲಸಿಕೆ ಉತ್ಪಾದನ ಘಟಕಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ.
ಇದೇ ವೇಳೆ, ಜಗತ್ತಿನಲ್ಲೇ ಅತೀ ಹೆಚ್ಚು ಲಸಿಕೆ ಖರೀದಿಸುತ್ತಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. 1.6 ಶತಕೋಟಿ ಡೋಸ್ ಲಸಿಕೆಯನ್ನು ಭಾರತ ಖರೀದಿಸಿ, 80 ಕೋಟಿ ಮಂದಿಗೆ ವಿತರಿಸಲಿದೆ ಎಂದು ಜಾಗತಿಕ ವಿಶ್ಲೇಷಕರು ಅಂದಾಜಿಸಿದ್ದಾರೆ.
ಅಗರ್ಭ ಶ್ರೀಮಂತರ ಸಾಲಿಗೆ “ಫೈಜರ್’ ಒಡೆಯ!
ಫೈಜರ್ ಲಸಿಕೆಗೆ ಬ್ರಿಟನ್ ಅನುಮೋದಿಸುತ್ತಿದ್ದಂತೆ ಅದರ ಪೋಷಕ ಸಂಸ್ಥೆ ಬಯೋನ್ಟೆಕ್ನ ಸಂಸ್ಥಾಪಕ ಯೂಗರ್ ಸಾಹಿನ್ ಜಗತ್ತಿನ ಟಾಪ್ 500 ಅಗರ್ಭ ಶ್ರೀಮಂತರ ಪಟ್ಟಿ ಸೇರಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪಟ್ಟಿಯಲ್ಲಿ 5.1 ಬಿಲಿಯನ್ ಡಾಲರ್ ಒಡೆಯನಾದ ಜರ್ಮನಿಯ ಯೂಗರ್ ದಿಢೀರನೆ 493ನೇ ರ್ಯಾಂಕ್ಗೆ ಏರಿದ್ದಾರೆ. ಒಂದು ವಾರದಲ್ಲಿ ಬಯೋನ್ಟೆಕ್ ಷೇರುಗಳು ಶೇ.8ರಷ್ಟು ಏರಿಕೆ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ