ಗಡಿ ಬಿಕ್ಕಟ್ಟು ಪರಿಹಾರ ಹೊಣೆ ಚೀನ ಮೇಲಿದೆ
Team Udayavani, Jul 8, 2022, 7:50 AM IST
ಹೊಸದಿಲ್ಲಿ: “ಪೂರ್ವ ಲಡಾಖ್ನಲ್ಲಿ ಉಂಟಾಗಿರುವ ಬಿಕ್ಕಟ್ಟು ಮುಕ್ತಾಯಕ್ಕೆ ಚೀನವೇ ನಿಯಮ ಪಾಲಿಸಬೇಕು. ಎರಡೂ ರಾಷ್ಟ್ರಗಳ ನಡುವೆ ಸುಗಮ ಬಾಂಧವ್ಯ ಮುಂದುವರಿಯಬೇಕಾದರೆ ಇಂಥ ನಿರ್ಣಯ ಅನಿವಾರ್ಯ’,
– ಹೀಗೆಂದು ಚೀನ ವಿದೇಶಾಂಗ ಸಚಿವರಿಗೆ ಖಡಕ್ ಮಾತುಗಳಲ್ಲಿ ಮನವರಿಕೆ ಮಾಡಿದ್ದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್. ಇಂಡೋನೇಷ್ಯಾ ರಾಜಧಾನಿ ಬಾಲಿಯಲ್ಲಿ ಜಿ-20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನದ ನಡುವೆಯೇ ಎರಡೂ ರಾಷ್ಟ್ರಗಳ ಸಚಿವರ ನಡುವೆ ನಡೆದ ಒಂದು ಗಂಟೆ ಅವಧಿಯ ಮಾತುಕತೆಯಲ್ಲಿ ಗಡಿ ತಂಟೆ ಅಂಶದ ಬಗ್ಗೆ ಪ್ರಧಾನವಾಗಿ ಚರ್ಚಿಸಲಾಗಿದೆ.
ಮುಂದಿನ ದಿನಗಳಲ್ಲಿ ಶೀಘ್ರವೇ ಭಾರತ ಮತ್ತು ಚೀನ ಮಿಲಿ ಟರಿ ಅಧಿಕಾರಿಗಳ ನಡುವೆ ಮತ್ತೂಮ್ಮೆ ಮಾತುಕತೆ ನಡೆಸಲಾಗುತ್ತದೆ. ಇದರ ಜತೆಗೆ ಚೀನಕ್ಕೆ ಭಾರತೀಯ ವಿದ್ಯಾರ್ಥಿ ಗಳು ತೆರಳಿ ಅಲ್ಲಿ ಶಿಕ್ಷಣ ಮುಂದು ವರಿಸುವ ಬಗ್ಗೆಯೂ ಜೈಶಂಕರ್, ವಾಂಗ್ ಜತೆಗೆ ಚರ್ಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಡಿ ಬಿಕ್ಕಟ್ಟು ಕೊನೆಗೊಳಿಸಬೇಕು:
ಪೂರ್ವ ಲಡಾಖ್ನ ಕೆಲವು ಪ್ರದೇಶಗಳಿಂದ ಎರಡೂ ದೇಶಗಳ ಸೇನೆ ವಾಪಸಾಗಿದೆ. ಇನ್ನುಳಿದ ಪ್ರದೇಶ ಗಳಿಂದ ಆ ಪ್ರಕ್ರಿಯೆ ಬಾಕಿ ಉಳಿದಿದೆ. ಎರಡೂ ದೇಶಗಳ ನಡುವೆ ಐತಿಹಾಸಿಕವಾಗಿ ಇರುವ ಬಾಂಧವ್ಯ ಸುಗಮ ವಾಗಿ ಮುಂದುವರಿಯುವ ನಿಟ್ಟಿನಲ್ಲಿ ಚೀನ ದ್ವಿಪಕ್ಷೀಯ ಬಾಂಧವ್ಯಗಳನ್ನು ಗೌರವಿಸಿ, ಗಡಿ ಬಿಕ್ಕಟ್ಟು ಕೊನೆ ಗೊಳಿಸಬೇಕು ಎಂದು ಜೈಶಂಕರ್ ಹೇಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ
UNICEF ಇಂಡಿಯಾಗೆ ಕರೀನಾ ಕಪೂರ್ ರಾಯಭಾರಿ
Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ
Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ
Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ