ಖಾತೆಗೆ ಕನ್ನ ಹಾಕಿದರೆ ಬ್ಯಾಂಕ್ ಹೊಣೆ: ಕೇರಳ ಹೈಕೋರ್ಟ್
Team Udayavani, Feb 7, 2019, 12:30 AM IST
ಕೊಚ್ಚಿ: ಗ್ರಾಹಕರ ಖಾತೆಗಳಿಂದ ಅನಧಿಕೃತವಾಗಿ ಇತರರು ಹಣ ವಿಥ್ಡ್ರಾ ಮಾಡಿದರೆ ಅಥವಾ ಹಣ ಕಳೆದು ಕೊಂಡರೆ ಬ್ಯಾಂಕ್ಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಖಾತೆಗಳಿಂದ ಹಣ ಡ್ರಾ ಆಗುವ ಬಗ್ಗೆ ಎಸ್ಎಂಎಸ್ ಮೂಲಕ ನೀಡುವ ಎಚ್ಚರಿಕೆಯ ಸಂದೇಶಗಳಿಗೆ ಗ್ರಾಹಕರು ಪ್ರತಿಕ್ರಿಯೆ ನೀಡದಿದ್ದರೂ, ಅವುಗಳಿಗೆ ಹೊಣೆಗಾರಿಕೆಗೆ ಇದೆ ಎಂದು ನ್ಯಾ| ಪಿ.ಬಿ. ಸುರೇಶ್ ಕುಮಾರ್ ನೇತೃತ್ವದ ನ್ಯಾಯಪೀಠ ಬುಧವಾರ ಈ ತೀರ್ಪು ನೀಡಿದೆ. ಗ್ರಾಹಕರ ಹೊಣೆಗಾರಿಕೆ ಯನ್ನು ನಿರ್ಧರಿಸಲು ಎಸ್ಎಂಎಸ್ ಎಚ್ಚರಿಕೆಯೊಂದೇ ಆಧಾರವಾಗಿರಬಾರದು. ಅವುಗಳನ್ನು ನಿಯಮಿತವಾಗಿ ಪರೀಕ್ಷಿಸುವ ಅಭ್ಯಾಸದಲ್ಲಿಲ್ಲದ ಖಾತೆದಾರರೂ ಇರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ಸುರಕ್ಷಿತವಾಗಿ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವಹಿವಾಟು ನಡೆಸಲು ಅನುಕೂಲ ಮಾಡುವ ಹೊಣೆಯೂ ಇದೆ ಎಂದಿದೆ. ಗ್ರಾಹಕರೊಬ್ಬರಿಗೆ 2.4 ಲಕ್ಷ ರೂ. ನೀಡುವಂತೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಬ್ಯಾಂಕೊಂದು ಸಲ್ಲಿಸಿದ್ದ ಮನವಿ ತಿರಸ್ಕರಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ