ಡ್ರೀಮ್ 11ನಲ್ಲಿ… ಡ್ರೀಮ್ ಟೀಮ್ ಮಾಡಿ 1 ಕೋಟಿ ರೂ. ಗೆದ್ದ ಯುವಕ
ತಂಡಗಳ ಆಟಗಾರರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು
Team Udayavani, Sep 22, 2022, 5:58 PM IST
ಬಿಹಾರ: ಅದೃಷ್ಟ ಯಾವ ಸಂದರ್ಭದಲ್ಲಿ ಬೇಕಾದರೂ ಖುಲಾಯಿಸಬಹುದು. ಕೇರಳದಲ್ಲಿ ಇತ್ತೀಚಿಗೆ ಆಟೋ ಚಾಲಕನೊಬ್ಬ ಲಾಟರಿ ಮೂಲಕ 25 ಕೋಟಿ ಗೆದ್ದು, ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದ. ಈಗ ಬಿಹಾರದ ವ್ಯಕ್ತಿಯೊಬ್ಬನಿಗೆ ಅಂಥದ್ದೇ ಅದೃಷ್ಟ ಖುಲಾಯಿಸಿದೆ.
ಬಿಹಾರದ ಬೋಜ್ಪುರದ ಚಾರ್ಪೋಖಾರಿ ಬ್ಲಾಕ್ನ ಠಾಕುರಿ ಗ್ರಾಮದ ನಿವಾಸಿಯಾಗಿರುವ ಸೌರವ್ ಕುಮಾರ್ ಡ್ರೀಮ್ 11ನಲ್ಲಿ ಡ್ರೀಮ್ ಟೀಮ್ ಮಾಡಿ ಅದರಿಂದ ಬಂದ ಅಂಕಗಳಿಂದ 1 ಕೋಟಿ ರೂ. ಗೆದ್ದಿದ್ದಾನೆ.
ಡ್ರೀಮ್ 11 ಒಂದು ಫ್ಯಾಂಟಸಿ ಕ್ರೀಡಾ ಆ್ಯಪ್ ಆಗಿದ್ದು, ಇದರಲ್ಲಿ ಆಡುವ ತಂಡಗಳ ಆಟಗಾರರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಎರಡು ತಂಡಗಳಲ್ಲಿ ನಾಯಕ, ಉಪನಾಯಕ , ಬೌಲರ್, ಆಲ್ ರೌಂಡರ್ ನಂತೆ ಆಟಗಾರರನ್ನು ಆಯ್ದುಕೊಳ್ಳಬೇಕು. ಹೀಗೆ ನಾವು 30 ರೂ, 50 ರೂ. ನಮಗೆ ಎಷ್ಟು ಆಗುತ್ತದೋ ಅಷ್ಟು ಹಣವನ್ನು ಪಾವತಿಸಿ ಟೀಮ್ ಕಟ್ಟಬೇಕು. ನಾವು ಆಯ್ಕೆ ಮಾಡಿದ ತಂಡದ ಆಟಗಾರರು ಉತ್ತಮ ರೀತಿ ಆಡಿದರೆ ಅಲ್ಲಿ ನಮಗೆ ಅಂಕಗಳು ಸಿಗುತ್ತದೆ. ಅಂಕಗಳ ಅನುಸಾರ ನಮಗೆ ಹಣ ಸಿಗುತ್ತದೆ.
ಸೌರವ್ ಕುಮಾರ್ ಭಾರತ – ಆಸ್ಟ್ರೇಲಿಯ ನಡುವಿನ ಮೊದಲ ಟಿ-20 ಪಂದ್ಯಕ್ಕೆ ತಮ್ಮ ಡ್ರೀಮ್ ಟೀಮ್ ಮಾಡಿದ್ದರು. ಅವರು ಮಾಡಿದ ತಂಡದ ಆಟಗಾರರು ಆ ಪಂದ್ಯದಲ್ಲಿ ಉತ್ತಮ ರೀತಿ ಆಡಿದ್ದರು. ಮ್ಯಾಚ್ ಮುಗಿದ ಬಳಿಕ ಸೌರವ್ ಅವರಿಗೆ ಆಚ್ಚರಿಯೊಟ್ಟಿಗೆ ಆನಂದವೂ ಆಗಿದೆ. ಕಾರಣ ಅವರು ಮಾಡಿದ ತಂಡಕ್ಕೆ ದೊಡ್ಡ ಅಂಕ ಸಿಕ್ಕಿತು. ಅದಲ್ಲದೇ ಅವರು 1 ಕೋಟಿ ರೂ. ಗೆದ್ದಿರುವ ಸಂದೇಶವೂ ಅವರ ಮೊಬೈಲ್ ಗೆ ಬಂದಿದೆ.
ಈ ಬಗ್ಗೆ ಮಾತಾನಾಡಿರುವ ಅವರು, “ನನಗೆ 70 ಲಕ್ಷ ರೂ. ಬಂದಿದೆ. ಉಳಿದ ಹಣ ತೆರಿಗೆಯಾಗಿ ಕಡಿತವಾಗಿದೆ. ನಾನು 2019 ರಿಂದ ಡ್ರೀಮ್ ಟೀಮ್ ಮಾಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೆ ಅದಕ್ಕಾಗಿ ಸಾವಿರಾರು ರೂ. ಹಾಕಿದ್ದೇನೆ ಎಂದು ಹೇಳಿದ್ದಾರೆ. ಸೌರವ್ ಪದವಿ ಮಾಡುತ್ತಿದ್ದಾರೆ. ಅವರಿಗೆ ಕ್ರಿಕೆಟ್ ಆಡುವುದೆಂದರೆ ಇಷ್ಟದ ಹವ್ಯಾಸಗಳಲ್ಲೊಂದು. ದೊಡ್ಡ ಮೊತ್ತ ಗೆದ್ದ ಬಳಿಕ ಸೌರವ್ ಲೋಕಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು