ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?


Team Udayavani, Dec 6, 2020, 12:29 AM IST

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

ಸಾಂದರ್ಭಿಕ ಚಿತ್ರ

ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯಲ್ಲಿ 55 ಸ್ಥಾನ ಗೆದ್ದು 12 ಪಟ್ಟು ಹಿಗ್ಗಿದ ಬಿಜೆಪಿಯ ಮಿಂಚಿನ ಯಶಸ್ಸಿಗೆ ಹಿಂದೂ ಮತಗಳು, ಆಡಳಿತ ವಿರೋಧಿ ಅಲೆ, ಹೈವೋಲ್ಟೆಜ್‌ ಪ್ರಚಾರಗಳೇ ಕಾರಣ!

ಹೌದು, ಜಿಎಚ್‌ಎಂಸಿ ಶೇ.36 ವಾರ್ಡ್‌ಗಳಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಈ ಮತಗಳೆಲ್ಲ ಎಐಎಂಐಎಂ, ಟಿಆರ್‌ಎಸ್‌ ಜತೆಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬಿಜೆಪಿ, ಅವುಗಳ ಬಗ್ಗೆ ದೃಷ್ಟಿ ನೆಡದೆ, ಕೇವಲ ಹಿಂದೂ ಮತಗಳನ್ನು ಒಗ್ಗೂಡಿಸಲು ವ್ಯವಸ್ಥಿತ ರಣತಂತ್ರ ರೂಪಿಸಿತ್ತು. ಹಿಂದೂಗಳನ್ನು ಓಲೈಸಿಕೊಳ್ಳಲು ಅಗತ್ಯವಿರುವ ಎಲ್ಲ ಮಾರ್ಗಗಳನ್ನು ಬಿಜೆಪಿ ಇಲ್ಲಿ ಅನುಸರಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರವಾಹ ನಿರ್ವಹಿಸುವಲ್ಲಿ ಆಡಳಿತರೂಢ ಟಿಆರ್‌ಎಸ್‌ ಎಡವಿದ್ದು, ಕುಟುಂಬ ರಾಜಕಾರಣದ ಆರೋಪಗಳು ಜಿಎಚ್‌ಎಂಸಿ ಮತಪ್ರಭುಗಳನ್ನು ಬಿಜೆಪಿ ಪರ ವಾಲುವಂತೆ ಮಾಡಿವೆ. ಇದರೊಂದಿಗೆ ಪಾಲಿಕೆ ಚುನಾವಣೆಗೆ ಭಾರೀ ಮಹತ್ವ ನೀಡಿ, ದಿಲ್ಲಿಯಿಂದ ದೌಡಾಯಿಸಿದ ಕಮಲಪಾಳಯದ ಹೈಕಮಾಂಡ್‌ಗಳ ಹೈವೋಲ್ಟೆàಜ್‌ ಪ್ರಚಾರ ಬಿಜೆಪಿಗೆ ಬೋನಸ್‌ ಆಗಿತ್ತು. ಹಾಗೆ ಆಗಮಿಸಿದ ಎಲ್ಲ ನಾಯಕರೂ ಸಂಚಲನ ಸೃಷ್ಟಿಸುವಂಥ ಹೇಳಿಕೆಗಳನ್ನು ನೀಡಿದ್ದು ವರದಾನವಾಯಿತು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. 2023ರ ವಿಧಾನಸಭೆ ಎದುರಿಸಲು ಬಿಜೆಪಿಗೆ ಜಿಎಚ್‌ಎಂಸಿ ಫ‌ಲಿತಾಂಶ ಭದ್ರಬುನಾದಿ ಹಾಕಿಕೊಟ್ಟಿದೆ.

ಕೂದಲೆಳೆ ಅಂತರದಿಂದ ಸೋಲುಂಡ ಟಿಆರ್‌ಎಸ್‌!
ಆಡಳಿತರೂಢ ಟಿಆರ್‌ಎಸ್‌ ಅನ್ನು ಬಿಜೆಪಿ 13 ಕಡೆಗಳಲ್ಲಿ ಭಾರೀ ಪೈಪೋಟಿ ನೀಡಿ ಸೋಲಿಸಿದೆ. ಬಿ.ಎನ್‌. ರೆಡ್ಡಿ ನಗರದಲ್ಲಿ ಕೇವಲ 32 ಮತಗಳಿಂದ ಟಿಆರ್‌ಎಸ್‌, ಕಮಲದ ವಿರುದ್ಧ ಸೋಲುಂಡಿದೆ. ಮಲ್ಕಜಿYರಿ- 178, ಅಡಿಕೆ¾ಟ್‌- 277, ಹಸ್ತಿನಾಪುರಂ -277, ವಿನಾಯಕ ನಗರದಲ್ಲಿ ಕೇವಲ 287 ಮತಗಳಿಂದ ಗೆಲುವು ಬಿಟ್ಟುಕೊಟ್ಟಿದೆ.

“ಮೇಯರ್‌’ ಹಾದಿ ಒಗಟು
150 ಜನಪ್ರತಿನಿಧಿಗಳು ಮತ್ತು 45 ಶಾಸಕ- ಸಂಸದ ಪ್ರತಿನಿಧಿಗಳ ಮತದೊಂದಿಗೆ ಜಿಎಚ್‌ಎಂಸಿ ಮಂಡಳಿಯ ಒಟ್ಟು ಬಲಾಬಲ 195. ಈ ಪ್ರಕಾರ, ಮೇಯರ್‌ ಹುದ್ದೆಗೆ ಕನಿಷ್ಠ 98 ಸ್ಥಾನಗಳ ಬೆಂಬಲ ಅತ್ಯಗತ್ಯ. ಮೇಯರ್‌ ಹುದ್ದೆಗೆ ಅಗತ್ಯವಿದ್ದ 65 ಸಂಖ್ಯೆ ತಲು ಪಲು ಟಿಆರ್‌ಎಸ್‌ ವಿಫ‌ಲವಾಗಿದ್ದು, ಕೇವಲ 55 ವಾರ್ಡ್‌ಗಳಲ್ಲಷ್ಟೇ ಅದು ಗೆದ್ದಿದೆ. ಇದರೊಂದಿಗೆ 31 ಶಾಸಕ-ಸಂಸದರ ಮತಗಳೂ ಟಿಆರ್‌ಎಸ್‌ ಜತೆಗಿದ್ದು, ಒಟ್ಟು ಸಂಖ್ಯೆ 86 ತಲುಪುತ್ತದೆ. ಮತ್ತೆ ಎಐಎಂಐಎಂ ಮತ್ತೆ ಮೈತ್ರಿ ಅನಿವಾರ್ಯ. ಟಿಆರ್‌ಎಸ್‌, ಒವೈಸಿ ಪಕ್ಷದೊಂದಿಗೆ ಮೈತ್ರಿಗೆ ಒಪ್ಪಿದರೂ ಅವರು ಮೇಯರ್‌ ಅಥವಾ ಉಪಮೇಯರ್‌ ಹುದ್ದೆಗೆ ಬೇಡಿಕೆ ಇಡುವ ಸಾಧ್ಯತೆಯೂ ದಟ್ಟವಾಗಿದೆ. ಮೇಯರ್‌ ಸ್ಥಾನವನ್ನು ಎಐಎಂಐಎಂಗೆ ಒಪ್ಪಿಸುವುದು ಸ್ವತಃ ಟಿಆರ್‌ಎಸ್‌ ಮುಖಂಡರಿಗೇ ಒಲವಿಲ್ಲ ಎನ್ನಲಾಗಿದೆ.

ಮೇಯರ್‌ ಹುದ್ದೆ “ಸಾಮಾನ್ಯ’ ಕೆಟಗರಿಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿರುವುದರಿಂದ ಟಿಆರ್‌ಎಸ್‌ ಕೊಂಚ ನಿರಾಳವಾಗಿದೆ.
ಮೇಯರ್‌ ಆಯ್ಕೆ ಕುರಿತು ಯೋಚಿಸಿ,  ಟಿಆರ್‌ಎಸ್‌ ನಿರ್ಧಾರ ಕೈಗೊಳ್ಳಲಿದೆ.

ಕೂದಲೆಳೆ ಅಂತರದಿಂದ ಸೋಲುಂಡ ಟಿಆರ್‌ಎಸ್‌!
ಆಡಳಿತರೂಢ ಟಿಆರ್‌ಎಸ್‌ ಅನ್ನು ಬಿಜೆಪಿ 13 ಕಡೆಗಳಲ್ಲಿ ಭಾರೀ ಪೈಪೋಟಿ ನೀಡಿ ಸೋಲಿಸಿದೆ. ಬಿ.ಎನ್‌. ರೆಡ್ಡಿ ನಗರದಲ್ಲಿ ಕೇವಲ 32 ಮತಗಳಿಂದ ಟಿಆರ್‌ಎಸ್‌, ಕಮಲದ ವಿರುದ್ಧ ಸೋಲುಂಡಿದೆ. ಮಲ್ಕಜಿYರಿ- 178, ಅಡಿಕೆ¾ಟ್‌- 277, ಹಸ್ತಿನಾಪುರಂ -277, ವಿನಾಯಕ ನಗರದಲ್ಲಿ ಕೇವಲ 287 ಮತಗಳಿಂದ ಗೆಲುವು ಬಿಟ್ಟುಕೊಟ್ಟಿದೆ.

ಬಿಜೆಪಿಯನ್ನು ಹೇಗೆ ಕಟ್ಟಿಹಾಕಬೇಕು ಎಂಬುದನ್ನು ಟಿಆರ್‌ಎಸ್‌ ತೋರಿಸಿಕೊಟ್ಟಿದೆ. ನಮ್ಮ ತಂತ್ರವನ್ನು ದೇಶದ ಇತರೆ ಭಾಗಗಳ ಪಕ್ಷಗಳೂ ಅನುಸರಿಸಬೇಕು.
ಕೆ. ಕವಿತಾ, ಟಿಆರ್‌ಎಸ್‌ ನಾಯಕಿ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.