ತರೂರ್ ಹಿಂದಿ, ಹಿಂದು, ಹಿಂದುತ್ವ ಟ್ವೀಟ್: ರಾಹುಲ್ಗೆ BJPಎಚ್ಚರಿಕೆ
Team Udayavani, Feb 1, 2019, 5:30 AM IST
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹಿಂದಿ, ಹಿಂದು, ಹಿಂದುತ್ವ ಕುರಿತಾಗಿ ಮಾಡಿರುವ ವಿವಾದಿತ ಟ್ವೀಟ್ ಅನುಸರಿಸಿ ಭಾರತೀಯ ಜನತಾ ಪಕ್ಷ ಇಂದು ಶುಕ್ರವಾರ “ದೇಶದ ಅತ್ಯಂತ ಹಳೇ ಪಕ್ಷವಾಗಿರುವ ಕಾಂಗ್ರೆಸ್, ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಕೀಳಾಗಿ ಕಾಣುವ ತನ್ನ ಪಿತೂರಿಯ ಭಾಗವಾಗಿ ಹಿಂದು ಧರ್ಮವನ್ನು ಅವಮಾನಿಸುತ್ತಿದೆ; ಇದರ ಪರಿಣಾಮ ಗಂಭೀರವಾದೀತು’ ಎಂಬ ಎಚ್ಚರಿಕೆಯನ್ನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಗೆ ನೀಡಿದೆ.
ತರೂರ್ ನಿನ್ನೆ ಗುರುವಾರ ಮಾಡಿರುವ ವಿವಾದಿತ ಟ್ವೀಟ್ನಲ್ಲಿ “ಹಿಂದಿ, ಹಿಂದು, ಹಿಂದುತ್ವದ ಸಿದ್ಧಾಂತವು ದೇಶವನ್ನು ವಿಭಜಿಸುವಂತಿದೆ. ನಮಗೆ ಬೇಕಿರುವುದು ಏಕತೆ ಮತ್ತು ಏಕರೂಪತೆ’ ಎಂದು ಹೇಳಿದ್ದರು.
ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು “ತರೂರ್ ಅವರ ಟ್ವೀಟ್ ತುಂಬ ಆಕ್ಷೇಪಾರ್ಹವಾಗಿದೆ; ನಾವು ಅವರ ಈ ಟೀಕೆಯನ್ನು ಕಾಂಗ್ರೆಸ್ ಪಕ್ಷದ ಟೀಕೆ ಎಂದೇ ಪರಿಗಣಿಸುತ್ತೇವೆ; ಏಕೆಂದರೆ ತರೂರ್ ಅವರು ರಾಹುಲ್ ಗಾಂಧಿ ಅವರ ನೀಲಿ ಕಂಗಳ ಆಪ್ತನೆಂದೇ ನಾವು ತಿಳಿಯುತ್ತೇವೆ. ಶಶಿ ತರೂರ್ ಹೇಳುವುದನ್ನೆಲ್ಲ ಕಾಂಗ್ರೆಸ್ ಯಾವತ್ತೂ ಒಪ್ಪಿಕೊಂಡಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್