ಮಂಚದ ಕೆಳಗೆ ಬಾಂಬ್ : ಕಾಂಗ್ರೆಸ್ ಮುಖಂಡ ಛಿದ್ರ ಛಿದ್ರ
Team Udayavani, Feb 13, 2018, 10:27 AM IST
ನಲ್ಗೊಂಡ: ಇಲ್ಲಿನ ನಾಗರಾಜಪೇಟೆ ಎಂಬಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡನೊಬ್ಬನನ್ನು ಬಾಂಬ್ ಸ್ಫೋಟಿಸಿ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಸೋಮವಾರ ರಾತ್ರಿ ನಡೆದಿದೆ.
ವರದಿಯಾದಂತೆ ಗ್ರಾಮ ಪಂಚಾಯತ್ ಸದಸ್ಯನಾದ ಧರ್ಮನಾಯಕ ಎನ್ನುವವರನ್ನು ಮನೆಯ ಹೊರಗೆ ಮಲಗಿದ್ದ ವೇಳೆ ಮಂಚದ ಅಡಿ ಭಾಗದಲ್ಲಿ ಬಾಂಬ್ ಹಾಕಿ ಹತ್ಯೆಗೈಯಲಾಗಿದೆ.
ಸ್ಫೋಟದ ತೀವ್ರತೆಗೆ ಧರ್ಮನಾಯಕ ದೇಹ ಛಿದ್ರ ಛಿದ್ರವಾಗಿದೆ.
ಗ್ರಾಮದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದ್ದು , ಉದ್ವಿಗ್ನ ಪರಿಸ್ಥಿತಿ ಕಂಡು ಬಂದಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಬಿಗಿ ಭದ್ರತೆ ಕೈಗೊಂಡಿದ್ದಾರೆ.