ಕಾವೇರಿ ಜಲ ವಿವಾದ: ತಮಿಳು ನಾಡು ಬಂದ್; ರೈಲು, ಬಸ್ಸು ಬಾಧಿತ
Team Udayavani, Apr 5, 2018, 11:52 AM IST
ಚೆನ್ನೈ : ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸುವಲ್ಲಿ ಕೇಂದ್ರ ಸರಕಾರದ ವೈಫಲ್ಯವನ್ನು ಪ್ರತಿಭಟಿಸಿ ಡಿಎಂಕೆ ನೀಡಿರುವ ಕರೆಯನ್ವಯ ಇಂದು ತಮಿಳು ನಾಡಿನಲ್ಲಿ ಇಂದು ಬಂದ್ ಮುಷ್ಕರ ನಡೆಯುತ್ತಿದ್ದು, ರಸ್ತೆ ಮತ್ತು ರೈಲು ಸಂಚಾರ ತೀವ್ರವಾಗಿ ಬಾಧಿತವಾಗಿದೆ.
ಚೆನ್ನೈ ಮಹಾನಗರದ ಅಣ್ಣಾ ಸಲೈ, ಕೋಡಂಬಾಕ್ಕಂ ಮತ್ತು ನುಂಗಂಬಾಕ್ಕಂ ಪ್ರದೇಶಗಳಲ್ಲಿ ಬಂದ್ ಬಿಸಿ ಜೋರಾಗಿ ಅನುಭವಕ್ಕೆ ಬಂದಿದ್ದು ದಿನ ನಿತ್ಯದ ಜನಜೀವನ ತೀವ್ರವಾಗಿ ಅಸ್ತವ್ಯಸ್ತವಾಗಿದೆ.
ಎಎನ್ಐ ವರದಿ ಪ್ರಕಾರ ಕೆಲವು ಕಾರ್ಮಿಕ ಸಂಘಟನೆಗಳು ಬಂದ್ ಮುಷ್ಕರದಲ್ಲಿ ಭಾಗಿಯಾಗಿದ್ದು ಇಂದು ಬೆಳಗ್ಗೆ ವಾಹನ ಸಂಚಾರ ತೀವ್ರ ಅಡಚಣೆಗೆ ಗುರಿಯಾಯಿತು. ಇದೇ ರೀತಿಯ ಸನ್ನಿವೇಶ ರಾಜ್ಯದ ವಿವಿಧೆಡೆ ಕಂಡುಬಂದಿದ್ದು ಅವುಗಳಲ್ಲಿ ಮುಖ್ಯವಾಗಿ ಹೊಸೂರು ಮತ್ತು ತಿರುಚ್ಚಿಯಲ್ಲಿ ಪ್ರತಿಭಟನೆಯ ಪರಾಕಾಷ್ಠೆ ಕಂಡುಬಂತು.
ಕೆಎಸ್ಆರ್ಟಿಸಿ ಅಂತಾರಾಜ್ಯ ಬಸ್ ಸೇವೆ ಕೂಡ ತೀವ್ರವಾಗಿ ಬಾಧಿತವಾಯಿತು. ಪ್ರತಿಭಟನೆಯ ಪರಿಣಾಮವಾಗಿ ತಮಿಳು ನಾಡಿಗೆ ಹೋಗುವ ಮತ್ತು ಅಲ್ಲಿಂದ ವಿವಿಧೆಡೆಗಳಿಗೆ ಸಂಚರಿಸುವ ರೈಲುಗಳು ವಿಳಂಬಿತವಾದವು. ರಾಜ್ಯಾದ್ಯಂತ ಅನೇಕ ಅಂಗಡಿ, ಮುಂಗಟ್ಟುಗಳು ಇಂದು ಮುಚ್ಚಿದ್ದವು.
ಆಳುವ ಎಐಎಡಿಎಂಕೆ ಇದೇ ವಿಷಯಕ್ಕೆ ಸಂಬಂಧಪಟ್ಟು ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ ಕೆಲವೇ ದಿನಗಳ ತರುವಾಯ ಡಿಎಂಕೆ ಇಂದಿನ ಬಂದ್ ಮುಷ್ಕರಕ್ಕೆ ಕರೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್