ಅಸ್ಥಾನಾ ಬಳಿಕ ಈಗ ಸಿಬಿಐ ಡಿಎಸ್ಪಿ ದೇವೀಂದರ್ ಕುಮಾರ್ ಅರೆಸ್ಟ್
Team Udayavani, Oct 22, 2018, 7:10 PM IST
ಹೊಸದಿಲ್ಲಿ : ಮಾಂಸ ರಫ್ತು ಉದ್ಯಮಿ ಮೊಯಿನ್ ಕುರೇಶಿ ಯನ್ನು ಒಳಗೊಂಡಿರುವ ಭ್ರಷ್ಟಾಚಾರದ ಕೇಸಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಸಿಬಿಐ ಇಂದು ಸೋಮವಾರ ತನ್ನದೇ ಇಲಾಖೆಯ ಡಿಎಸ್ಪಿ ದೇವೀಂದರ್ ಕುಮಾರ್ ಅವರನ್ನು ಬಂಧಿಸುವ ಇನ್ನೊಂದು ಅಭೂತಪೂರ್ವ ಕ್ರಮ ತೆಗೆದುಕೊಂಡಿತು.
ಮೊಯಿನ್ ಕುರೇಶಿ ಕೇಸಿನ ಸಾಕ್ಷಿದಾರ ಸತೀಶ್ ಸನಾ ಅವರ ಹೇಳಿಕೆಯನ್ನು ಸೃಷ್ಟಿಸಿದ ಆರೋಪ ದೇವೀಂದರ್ ಕುಮಾರ್ ಅವರ ಮೇಲಿದೆ.
ದಾಖಲೆಗಳ ಪ್ರಕಾರ ಸತೀಶ್ ಸನಾ ಅವರ ಹೇಳಿಕೆಯನ್ನು 2018ರ ಸೆ.26ರಂದು ದಿಲ್ಲಿಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಆದರೆ ತನಿಖೆಯಿಂದ ಗೊತ್ತಾಗಿರುವ ಪ್ರಕಾರ ಸನಾ ಅವರು ಅಂದು ದಿಲ್ಲಿಯಲ್ಲಿ ಇರಲಿಲ್ಲ; ಬದಲಾಗಿ ಅವರು ಹೈದರಾಬಾದ್ನಲ್ಲಿ ಇದ್ದರು.
ಸನಾ ಅವರು ನಿಜಕ್ಕೂ ತನಿಖೆಯನ್ನು ಸೇರಿಕೊಂಡದ್ದು ದಿಲ್ಲಿಯಲ್ಲಿ ಅಕ್ಟೋಬರ್ 1ರಂದು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಸಿಬಿಐ ನಿರ್ದೇಶಕ ಆಲೋಕ್ ಕುಮಾರ್ ವರ್ಮಾ ವಿರುದ್ಧ ಕೇಂದ್ರದ ಜಾಗೃತ ಆಯೋಗಕ್ಕೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ (ಈಗ ಬಂಧಿತರಾಗಿದ್ದಾರೆ) ಮಾಡಿದ್ದ ಆರೋಪಗಳನ್ನು ಸಾಬೀತು ಪಡಿಸುವ ಸಲುವಾಗಿ ದೇವೀಂದರ್ ಅವರು ಸನಾ ಹೇಳಿಕೆಯನ್ನು ಸೃಷ್ಟಿಸಿದ್ದರು ಎಂದು ಸಿಬಿಐ ಹೇಳಿದೆ.
ಈ ಹಿನ್ನೆಲೆಯಲ್ಲೀಗ ಸಿಬಿಐ, ಮೊಯಿನ್ ಕುರೇಶಿ ಕೇಸಿನ ಉಸ್ತುವಾರಿ ನಡೆಸುತ್ತಿದ್ದ ಆಗಿನ ಎಸ್ಐಟಿ, ಸಿಬಿಐ ನ ಇತರ ಅಧಿಕಾರಿಗಳ ಪಾತ್ರದ ಬಗ್ಗೆ ಈಗಿನ್ನು ತನಿಖೆ ನಡೆಯಲಿದೆ ಎಂದು ಸಿಬಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ